ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸುವಂತೆ ಒತ್ತಾಯಿಸಿ ಅವರು ಕೈಗೊಂಡಿರುವ ಪಾದಯಾತ್ರೆ ಗುರುವಾರ ನಗರ ಹೊರವಲಯ ತಲುಪಿತು. ಈ ವೇಳೆ ಸುದ್ದಿಗೋಷ್ಠಿ ನಡೆಸಿದ ಅವರು, ‘ನಮ್ಮ ಹೋರಾಟವನ್ನು ಬೆಂಬಲಿಸುವಂತೆ ಈಗಾಗಲೇ ಆರ್ಎಸ್ಎಸ್ನವರಿಗೆ ಮನವಿ ಮಾಡಲಾಗಿದೆ. ಅದಕ್ಕವರು ಸ್ಪಂದಿಸಿ ಸರ್ಕಾರದ ಮೂಲಕ ಮೀಸಲು ಸೌಲಭ್ಯ ಕೊಡಿಸಬೇಕು’ ಎಂದು ಹೇಳಿದರು.