ಪ್ರಕರಣವೇನು?: ಬೆಂಗಳೂರು ನಿವಾಸಿಯಾದ ಎಚ್.ಪಿ.ರಾಜಣ್ಣ ಎನ್ನುವವರು ಬೆಂಗಳೂರು ನಗರ ಜಿಲ್ಲೆಯ ವರ್ತೂರು ಹೋಬಳಿಯಲ್ಲಿ ಕೈಕೊಂಡ್ರಹಳ್ಳಿ ಕೆರೆಯ ಸಮೀಪ ನಿರ್ಮಾಣವಾಗಲಿರುವ ಯೋಜನೆಗಳ ವಿರುದ್ಧ ಎನ್ಜಿಟಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಬಫರ್ ವಲಯದಲ್ಲೇ ಯೋಜನೆಯಿದ್ದು, ಇದಕ್ಕೆ 2018 ಜನವರಿ 10ರಂದು ಇಸಿ ನೀಡಿರುವುದನ್ನು ಅವರು ಪ್ರಶ್ನಿಸಿದ್ದರು.