ಆಪ್ತರ ಬಳಿ ಅಳಲು ತೋಡಿಕೊಂಡಿ ರುವ ಭಾಸ್ಕರ್ ರಾವ್, ‘ರಾಜ್ಯದಲ್ಲೇ ಓದಿ ಬೆಳೆದ ನನಗೆ ಸೂಕ್ತ ಹುದ್ದೆ ನೀಡುವಲ್ಲಿ ಕಡೆಗಣಿಸಲಾಯಿತು. ದೂರವಾಣಿ ಕರೆ ಕದ್ದಾಲಿಕೆ ಪ್ರಕರಣದಲ್ಲಿ ದೂರು ನೀಡಿದರೂ ಆರೋಪಿಗಳನ್ನು ರಕ್ಷಿಸಲು ಸಿಬಿಐ ಬಿ ರಿಪೋರ್ಟ್ ಸಲ್ಲಿಸಿತು. ಇದೆಲ್ಲವೂ ನನಗೆ ನೋವು ಉಂಟು ಮಾಡಿದೆ. ಹೀಗಾಗಿ, ರಾಜೀನಾಮೆ ನೀಡುತ್ತಿದ್ದೇನೆ’ ಎಂದಿರುವುದಾಗಿ ಗೊತ್ತಾಗಿದೆ.