<p><strong>ವಿಜಯಪುರ: </strong>ಕಾಂಗ್ರೆಸ್ ಮತಬ್ಯಾಂಕ್ ಒಡೆಯುವ ಸಲುವಾಗಿ ಸಿಂದಗಿ, ಹಾನಗಲ್ ಉಪಚುನಾವಣೆಗೆ ಅಲ್ಪ ಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ನಮ್ಮ ಪಕ್ಷವು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಕ್ಕೆ ಕಾಂಗ್ರೆಸ್ನವರು ಕೀಳುಮಟ್ಟದ ಪ್ರಚಾರ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.</p>.<p>ಸಿಂದಗಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ನಿಜ ಬಣ್ಣ ಬಯಲು ಮಾಡಲೆಂದೇ ಹಾಗೂ ಅವರ ಅಪಪ್ರಚಾರಕ್ಕೆ ಉತ್ತರ ನೀಡಲೆಂದೇ ಎರಡೂ ಕ್ಷೇತ್ರಕ್ಕೆ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾವಂತರನ್ನು ಕಣಕ್ಕಿಳಿಸಿದ್ದೇನೆ ಎಂದು ಸಮರ್ಥಿಸಿಕೊಂಡರು.</p>.<p>ಕಾಂಗ್ರೆಸ್ ನಾಯಕರ ಅನುಮತಿ ಪಡೆದು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡ ಬೇಕಿತ್ತೇ? ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಉಪ ಚುನಾವಣೆಗೆ ಅಲ್ಪ ಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಳಿಸಿದ್ದೇ ಆಗಿದ್ದರೆ ನಾನೇಕೆ ಬಿಜೆಪಿ, ಆರ್ಎಸ್ಎಸ್ ವಿರುದ್ಧ ಮಾತನಾಡುತ್ತಿದ್ದೆ ಎಂದು ಪ್ರಶ್ನಿಸಿದರು.</p>.<p>ದೇಶದಲ್ಲಿ ಪ್ರಸ್ತುತ ಪ್ರಜಾಪ್ರಭುತ್ವ ಸರ್ಕಾರ ಅಧಿಕಾರದಲ್ಲಿ ಇಲ್ಲ. ಆರ್ಎಸ್ಎಸ್ ಕಪಿಮುಷ್ಠಿಯಲ್ಲಿ ಇರುವ ಸರ್ಕಾರ ಅಧಿಕಾರದಲ್ಲಿದೆ. ಇಂದಿನ ಆರ್ಎಸ್ಎಸ್ ಚಟುವಟಿಕೆಗಳ ಬಗ್ಗೆ ಕಾಂಗ್ರೆಸ್ನ ಯಾರಿಗಾದರೂ ಧ್ವನಿ ಎತ್ತುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದರು.</p>.<p class="Briefhead"><strong>ನಾಜಿಯಾ ನಾಮಪತ್ರ ಸಲ್ಲಿಕೆ</strong></p>.<p><strong>ವಿಜಯಪುರ:</strong> ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ್ ಅಂಗಡಿ ಗುರುವಾರ ನಾಮಪತ್ರ ಸಲ್ಲಿಸಿದರು.</p>.<p>ನಾಜಿಯಾ ಅವರ ಬಳಿ 520 ಗ್ರಾಂ ಬಂಗಾರ(24 ಲಕ್ಷ), 50 ಗ್ರಾಂ ಬೆಳ್ಳಿ, ಟಾಟಾ ಸಫಾರಿ ಜೀಪ್(13 ಲಕ್ಷ), ಫೆಡರಲ್ ಬ್ಯಾಂಕ್ ಅಥಣಿ ಶಾಖೆಯಲ್ಲಿ ರೂ 4.24 ಲಕ್ಷ, ನಗದು 2 ಲಕ್ಷ ಹಾಗೂ ಚರಾಸ್ತಿ ರೂ 10.70 ಲಕ್ಷ, ಸ್ಥಿರಾಸ್ತಿ ರೂ 1 ಲಕ್ಷ, ಸಿಂದಗಿಯಲ್ಲಿ 1 ಎಕರೆ ಜಮೀನು(1 ಲಕ್ಷ ಮೌಲ್ಯ), ಫ್ಯಾಟ್ ಖರೀದಿಗೆ ಮುಂಗಡವಾಗಿ ರೂ 7.7 ಲಕ್ಷ ನೀಡಿರುವುದು ಸೇರಿದಂತೆ ಒಟ್ಟು ರೂ.49,85,912 ಲಕ್ಷಗಳ ಒಡತಿಯಾಗಿರುವುದಾಗಿ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.</p>.<p>ಪತಿ, ಸಿಪಿಐ ಶಕೀಲ್ ಅಂಗಡಿ ಅವರ ಬಳಿ 6 ಎಕರೆ ಕೃಷಿ ಭೂಮಿ(9.60 ಲಕ್ಷ ಮೌಲ್ಯ), ಎಸ್ಬಿಐ ಕಲಬುರ್ಗಿ ಶಾಖೆಯಲ್ಲಿ ರೂ 1.65 ಲಕ್ಷ ಹಾಗೂ 50 ಸಾವಿರ ನಗದು, ಎಲ್ಐಎಸಿ ಬಾಂಡ್ ಸೇರಿದಂತೆ ಒಟ್ಟು ರೂ 24.70 ಲಕ್ಷ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಕಾಂಗ್ರೆಸ್ ಮತಬ್ಯಾಂಕ್ ಒಡೆಯುವ ಸಲುವಾಗಿ ಸಿಂದಗಿ, ಹಾನಗಲ್ ಉಪಚುನಾವಣೆಗೆ ಅಲ್ಪ ಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ನಮ್ಮ ಪಕ್ಷವು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದಕ್ಕೆ ಕಾಂಗ್ರೆಸ್ನವರು ಕೀಳುಮಟ್ಟದ ಪ್ರಚಾರ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.</p>.<p>ಸಿಂದಗಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ನಿಜ ಬಣ್ಣ ಬಯಲು ಮಾಡಲೆಂದೇ ಹಾಗೂ ಅವರ ಅಪಪ್ರಚಾರಕ್ಕೆ ಉತ್ತರ ನೀಡಲೆಂದೇ ಎರಡೂ ಕ್ಷೇತ್ರಕ್ಕೆ ಅಲ್ಪ ಸಂಖ್ಯಾತ ಸಮುದಾಯದ ವಿದ್ಯಾವಂತರನ್ನು ಕಣಕ್ಕಿಳಿಸಿದ್ದೇನೆ ಎಂದು ಸಮರ್ಥಿಸಿಕೊಂಡರು.</p>.<p>ಕಾಂಗ್ರೆಸ್ ನಾಯಕರ ಅನುಮತಿ ಪಡೆದು ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡ ಬೇಕಿತ್ತೇ? ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಉಪ ಚುನಾವಣೆಗೆ ಅಲ್ಪ ಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಳಿಸಿದ್ದೇ ಆಗಿದ್ದರೆ ನಾನೇಕೆ ಬಿಜೆಪಿ, ಆರ್ಎಸ್ಎಸ್ ವಿರುದ್ಧ ಮಾತನಾಡುತ್ತಿದ್ದೆ ಎಂದು ಪ್ರಶ್ನಿಸಿದರು.</p>.<p>ದೇಶದಲ್ಲಿ ಪ್ರಸ್ತುತ ಪ್ರಜಾಪ್ರಭುತ್ವ ಸರ್ಕಾರ ಅಧಿಕಾರದಲ್ಲಿ ಇಲ್ಲ. ಆರ್ಎಸ್ಎಸ್ ಕಪಿಮುಷ್ಠಿಯಲ್ಲಿ ಇರುವ ಸರ್ಕಾರ ಅಧಿಕಾರದಲ್ಲಿದೆ. ಇಂದಿನ ಆರ್ಎಸ್ಎಸ್ ಚಟುವಟಿಕೆಗಳ ಬಗ್ಗೆ ಕಾಂಗ್ರೆಸ್ನ ಯಾರಿಗಾದರೂ ಧ್ವನಿ ಎತ್ತುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದರು.</p>.<p class="Briefhead"><strong>ನಾಜಿಯಾ ನಾಮಪತ್ರ ಸಲ್ಲಿಕೆ</strong></p>.<p><strong>ವಿಜಯಪುರ:</strong> ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ್ ಅಂಗಡಿ ಗುರುವಾರ ನಾಮಪತ್ರ ಸಲ್ಲಿಸಿದರು.</p>.<p>ನಾಜಿಯಾ ಅವರ ಬಳಿ 520 ಗ್ರಾಂ ಬಂಗಾರ(24 ಲಕ್ಷ), 50 ಗ್ರಾಂ ಬೆಳ್ಳಿ, ಟಾಟಾ ಸಫಾರಿ ಜೀಪ್(13 ಲಕ್ಷ), ಫೆಡರಲ್ ಬ್ಯಾಂಕ್ ಅಥಣಿ ಶಾಖೆಯಲ್ಲಿ ರೂ 4.24 ಲಕ್ಷ, ನಗದು 2 ಲಕ್ಷ ಹಾಗೂ ಚರಾಸ್ತಿ ರೂ 10.70 ಲಕ್ಷ, ಸ್ಥಿರಾಸ್ತಿ ರೂ 1 ಲಕ್ಷ, ಸಿಂದಗಿಯಲ್ಲಿ 1 ಎಕರೆ ಜಮೀನು(1 ಲಕ್ಷ ಮೌಲ್ಯ), ಫ್ಯಾಟ್ ಖರೀದಿಗೆ ಮುಂಗಡವಾಗಿ ರೂ 7.7 ಲಕ್ಷ ನೀಡಿರುವುದು ಸೇರಿದಂತೆ ಒಟ್ಟು ರೂ.49,85,912 ಲಕ್ಷಗಳ ಒಡತಿಯಾಗಿರುವುದಾಗಿ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.</p>.<p>ಪತಿ, ಸಿಪಿಐ ಶಕೀಲ್ ಅಂಗಡಿ ಅವರ ಬಳಿ 6 ಎಕರೆ ಕೃಷಿ ಭೂಮಿ(9.60 ಲಕ್ಷ ಮೌಲ್ಯ), ಎಸ್ಬಿಐ ಕಲಬುರ್ಗಿ ಶಾಖೆಯಲ್ಲಿ ರೂ 1.65 ಲಕ್ಷ ಹಾಗೂ 50 ಸಾವಿರ ನಗದು, ಎಲ್ಐಎಸಿ ಬಾಂಡ್ ಸೇರಿದಂತೆ ಒಟ್ಟು ರೂ 24.70 ಲಕ್ಷ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>