<p><strong>ಬೆಂಗಳೂರು: </strong>ಶಿಗ್ಗಾವಿಯಲ್ಲಿ ನಡೆದ ಸರ್ಕಾರದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರಲಿಲ್ಲ. ಆದರೆ, ಖಾಲಿ ಕುರ್ಚಿಗಳನ್ನು ತುಂಬಿಸಲು ಸರ್ಕಾರವು ಆಸ್ಪತ್ರೆಗೆ ರೋಗಿಗಳನ್ನು ಬಲವಂತವಾಗಿ ಕರೆ ತಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.</p>.<p>ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ನೆರವೇರಿಸಿದ್ದರು.</p>.<p>ಕಾರ್ಯಕ್ರಮದಲ್ಲಿ ರೋಗಿಗಳು ಕುಳಿತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಹರಿದಾಡಿವೆ. ಗ್ಲೂಕೋಸ್ ಅಥವಾ ಔಷಧ ನೀಡಲು ರೋಗಿಗಳ ಚುಚ್ಚಿದ್ದ ಸೂಜಿಗಳೂ ರೋಗಿಗಳ ಕೈಯಲ್ಲಿ ಇರುವುದು ವಿಡಿಯೊಗಳಲ್ಲಿ ಸೆರೆಯಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/karnataka-news/upgradation-of-shiggavi-hospital-437-our-clinics-to-be-set-up-cm%C2%A0-994391.html" itemprop="url" target="_blank">ಶಿಗ್ಗಾವಿ ಆಸ್ಪತ್ರೆಮೇಲ್ದರ್ಜೆಗೆ:437 ನಮ್ಮ ಕ್ಲಿನಿಕ್ ಸ್ಥಾಪನೆ –ಸಿಎಂ </a></p>.<p>ಅದರ ತುಣುಕೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್,ಖಾಲಿ ಕುರ್ಚಿಗಳನ್ನು ತುಂಬಿಸಲು ಸರ್ಕಾರವು ಅತ್ಯಂತ ಅಮಾನವೀಯ ಹಾಗೂ ಕೀಳು ಹಂತಕ್ಕೆ ಇಳಿದಿದೆ.ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬಲವಂತವಾಗಿ ಕರೆತಂದಿದ್ದೀರಲ್ಲ ಬಸವರಾಜ ಬೊಮ್ಮಾಯಿ ಅವರೇ,ನಿಮಗೆ ಕನಿಷ್ಠ ಮಾನವೀಯತೆ, ಅಂತಃಕರಣ ಇಲ್ಲದಾಯಿತೆ?ಖಾಲಿ ಕುರ್ಚಿಗಳು ನಿಮ್ಮನ್ನು ಆ ಪರಿ ಕಂಗೆಡಿಸಿದೆಯೇ? ಎಂದು ಪ್ರಶ್ನಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಶಿಗ್ಗಾವಿಯಲ್ಲಿ ನಡೆದ ಸರ್ಕಾರದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರಲಿಲ್ಲ. ಆದರೆ, ಖಾಲಿ ಕುರ್ಚಿಗಳನ್ನು ತುಂಬಿಸಲು ಸರ್ಕಾರವು ಆಸ್ಪತ್ರೆಗೆ ರೋಗಿಗಳನ್ನು ಬಲವಂತವಾಗಿ ಕರೆ ತಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.</p>.<p>ಶಿಗ್ಗಾವಿ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ನೆರವೇರಿಸಿದ್ದರು.</p>.<p>ಕಾರ್ಯಕ್ರಮದಲ್ಲಿ ರೋಗಿಗಳು ಕುಳಿತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಹರಿದಾಡಿವೆ. ಗ್ಲೂಕೋಸ್ ಅಥವಾ ಔಷಧ ನೀಡಲು ರೋಗಿಗಳ ಚುಚ್ಚಿದ್ದ ಸೂಜಿಗಳೂ ರೋಗಿಗಳ ಕೈಯಲ್ಲಿ ಇರುವುದು ವಿಡಿಯೊಗಳಲ್ಲಿ ಸೆರೆಯಾಗಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/karnataka-news/upgradation-of-shiggavi-hospital-437-our-clinics-to-be-set-up-cm%C2%A0-994391.html" itemprop="url" target="_blank">ಶಿಗ್ಗಾವಿ ಆಸ್ಪತ್ರೆಮೇಲ್ದರ್ಜೆಗೆ:437 ನಮ್ಮ ಕ್ಲಿನಿಕ್ ಸ್ಥಾಪನೆ –ಸಿಎಂ </a></p>.<p>ಅದರ ತುಣುಕೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್,ಖಾಲಿ ಕುರ್ಚಿಗಳನ್ನು ತುಂಬಿಸಲು ಸರ್ಕಾರವು ಅತ್ಯಂತ ಅಮಾನವೀಯ ಹಾಗೂ ಕೀಳು ಹಂತಕ್ಕೆ ಇಳಿದಿದೆ.ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬಲವಂತವಾಗಿ ಕರೆತಂದಿದ್ದೀರಲ್ಲ ಬಸವರಾಜ ಬೊಮ್ಮಾಯಿ ಅವರೇ,ನಿಮಗೆ ಕನಿಷ್ಠ ಮಾನವೀಯತೆ, ಅಂತಃಕರಣ ಇಲ್ಲದಾಯಿತೆ?ಖಾಲಿ ಕುರ್ಚಿಗಳು ನಿಮ್ಮನ್ನು ಆ ಪರಿ ಕಂಗೆಡಿಸಿದೆಯೇ? ಎಂದು ಪ್ರಶ್ನಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>