ಅದರ ತುಣುಕೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್,ಖಾಲಿ ಕುರ್ಚಿಗಳನ್ನು ತುಂಬಿಸಲು ಸರ್ಕಾರವು ಅತ್ಯಂತ ಅಮಾನವೀಯ ಹಾಗೂ ಕೀಳು ಹಂತಕ್ಕೆ ಇಳಿದಿದೆ.ಆಸ್ಪತ್ರೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಬಲವಂತವಾಗಿ ಕರೆತಂದಿದ್ದೀರಲ್ಲ ಬಸವರಾಜ ಬೊಮ್ಮಾಯಿ ಅವರೇ,ನಿಮಗೆ ಕನಿಷ್ಠ ಮಾನವೀಯತೆ, ಅಂತಃಕರಣ ಇಲ್ಲದಾಯಿತೆ?ಖಾಲಿ ಕುರ್ಚಿಗಳು ನಿಮ್ಮನ್ನು ಆ ಪರಿ ಕಂಗೆಡಿಸಿದೆಯೇ? ಎಂದು ಪ್ರಶ್ನಿಸಿದೆ.