ಕೇಂದ್ರಸಚಿವ ಜೋಶಿ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ನೆಲಕ್ಕುರುಳಿದ ಬ್ಯಾರಿಕೇಡ್

ವಿಜಯಪುರ: ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರು ನಗರದ ಸೈನಿಕ್ ಶಾಲೆಯ ಹೆಲಿಪ್ಯಾಡ್ಗೆ ಶನಿವಾರ ಬಂದಿಳಿಯುವಾಗ ಹೆಲಿಪ್ಯಾಡ್ನ ಸುತ್ತಲು ಅಳವಡಿಸಲಾಗಿದ್ದ ಬ್ಯಾರಿಕೇಡ್ಗಳು ನೆಲಕ್ಕುರುಳಿ ಬಿದ್ದವು.
ವಿಜಯಪುರ ನಗರದ ಸೈನಿಕ್ ಶಾಲೆ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕೇಂದ್ರ, ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸಲು ಹೆಲಿಕಾಫ್ಟರ್ನಲ್ಲಿ ಆಗಮಿಸಿದ ಸಚಿವರು ಲ್ಯಾಂಡ್ ಆಗುವ ವೇಳೆ ಐದಾರು ಬ್ಯಾರಿಕೇಡ್ಗಳು ರಭಸದ ಗಾಳಿಗೆ ಅಲ್ಲಿಯೇ ಉರುಳಿಬಿದ್ದವು.
ತಕ್ಷಣ ಪೊಲೀಸರು ಅವುಗಳನ್ನು ಸರಿಪಡಿಸಿದರು. ಘಟನೆಯಿಂದ ಯಾವುದೇ ತೊಂದರೆಯಾಗಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.