ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ಹೇಳಿಕೆ ಹಾಸ್ಯಾಸ್ಪದವಾಗಿದೆ. ರಾಯಚೂರು ಜಿಲ್ಲೆ ಈಗಾಗಲೇ ಅಭಿವೃದ್ಧಿಯತ್ತ ಸಾಗಿದೆ. ತೆಲಂಗಾಣವು ಹಿಂದುಳಿದ ಪ್ರದೇಶವೆಂದು ಅವರು ಹೋರಾಟ ಮಾಡಿ, ಈಗ ಮುಖ್ಯಮಂತ್ರಿ ಆಗಿದ್ದಾರೆ. ತೆಲಂಗಾಣ ಅಭಿವೃದ್ಧಿ ಆಗದಿರುವುದನ್ನು ಮರೆಮಾಚಲು ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.