ಕೇಂದ್ರದ ಕೃಷಿ ಕಾನೂನು ವಿರೋಧಿಸಿ ಪ್ರತಿಭಟಿಸಲು ದೆಹಲಿಗೆ ತೆರಳುತ್ತಿದ್ದ ಪಂಜಾಬ್ ರೈತರು, ಹರಿಯಾಣ ಮತ್ತು ದೆಹಲಿ ಗಡಿಯಲ್ಲಿ ಪೊಲೀಸರ ಜಲಫಿರಂಗಿಗಳನ್ನು, ಅಶ್ರುವಾಯುವನ್ನು ಎದುರಿಸಬೇಕಾಯಿತು. ಈ ಸನ್ನಿವೇಶದ ಚಿತ್ರದ ಜೊತೆಗೆ ಟ್ವೀಟ್ ಮಾಡಿರುವ ಎಚ್.ಡಿ ದೇವೇಗೌಡ ಅವರು, ರೈತರ ಸಮಸ್ಯೆ ಆಲಿಸುವಂತೆ ಸಲಹೆ ನೀಡಿದ್ದಾರೆ.