‘ನಾಡಗೀತೆ ಬಗ್ಗೆ ಅವಹೇಳನಕಾರಿಯಾಗಿ ಬರೆದ ಸಂದೇಶವನ್ನು
ರೋಹಿತ್ ಚಕ್ರತೀರ್ಥ ಹಂಚಿಕೊಂಡಿದ್ದಾರೆ. ಅಂದಿನ ಸರ್ಕಾರ ಅವರ ಮೇಲೆ ಪ್ರಕರಣ ದಾಖಲಿಸಿ, ಬಿ ರಿಪೋರ್ಟ್ ಕೂಡಾ ಹಾಕಿತ್ತು. ಅದು ತಾವು ಬರೆದದ್ದು ಅಲ್ಲ ಎಂದು ಚಕ್ರತೀರ್ಥ ಸ್ಪಷ್ಟನೆ ನೀಡಿದ್ದಾರೆ. ಆದರೆ, ಕೆಲವರು ಆ ವಿಷಯವನ್ನು ಕೆದಕುತ್ತಿದ್ದಾರೆ. ಆದಿಚುಂಚನಗಿರಿಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಎಲ್ಲ ವಿಷಯವನ್ನು ತಿಳಿಸಿದ್ದೇನೆ’ ಎಂದರು.