<p><strong>ಮೈಸೂರು:</strong>‘ನಾನು ನಿಮಗೆ ಗೊತ್ತಾ? ನನಗೆ ಕುರ್ತಾ ಹೊಲಿದು ಕೊಡುವಿರಾ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕೇಳಿದಾಗ ಚಾಮರಾಜನಗರದ ಹನೂರಿನ ಟೇಲರ್ ಅಂಬಿಕಾ ಅವರ ಕಣ್ಣಲ್ಲಿ ಅಚ್ಚರಿ, ಸಂತಸ ಏಕಕಾಲಕ್ಕೆ ಮೂಡಿತ್ತು.</p>.<p>ನಗರದ ಮಹಾರಾಜ ಕಾಲೇಜು ಮೈದಾನದ ಬೃಹತ್ ವೇದಿಕೆಯ ಹಿಂಭಾಗದಲ್ಲಿ ಸೋಮವಾರ ಸಂಜೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೈಸೂರು ವಿಭಾಗದ ಫಲಾನುಭವಿಗಳೊಂದಿಗೆ ಪ್ರಧಾನಿ ನಡೆಸಿದ ಸಂವಾದ ಇಂಥ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು.</p>.<p>ಅಂಬಿಕಾ ಅವರು ‘ಮುದ್ರಾ ಯೋಜನೆ<br />ಯಿಂದ ಹೊಲಿಗೆ ವೃತ್ತಿ ಆರಂಭಿ ಸಿದ್ದೇನೆ. ಪತಿಯೂ ಸಹಕರಿಸುತ್ತಿದ್ದಾರೆ’ ಎಂದಾಗ ಪ್ರಧಾನಿ, ‘ಕುರ್ತಾ ಹೊಲಿದು ಕೊಡುವಿರಾ’ ಎಂದು ಕೇಳಿದರು.</p>.<p>‘ಖಂಡಿತಾ.. ಸರ್.. ನಿಮ್ಮೊಂದಿಗೆ ಮಾತನಾಡುತ್ತಿರುವ ಗಳಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು’ ಎಂದು ಅಂಬಿಕಾ ಸಂತಸ ವ್ಯಕ್ತಪಡಿಸಿದರು.</p>.<p><strong>ಪ್ಲಾಸ್ಟಿಕ್ ಹೂ ನಿಷೇಧಿಸಿ:</strong>ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಫಲಾನುಭವಿ ಮಂಡ್ಯ ಜಿಲ್ಲೆ ಮಳವಳ್ಳಿಯ ಕೃಷಿಕ ಸಂದೀಪ್, ‘₹ 14 ಲಕ್ಷ ವೆಚ್ಚದಲ್ಲಿ<br />ಜರ್ಬೆರಾ ಆಲಂಕಾರಿಕ ಹೂ ಬೆಳೆದಿದ್ದೆ. ಚೀನಾ, ಥಾಯ್ಲೆಂಡ್ನ ಪ್ಲಾಸ್ಟಿಕ್ ಹೂಗಳು ಹೊಡೆತ ನೀಡಿವೆ. ಅವುಗಳನ್ನು ಬ್ಯಾನ್ ಮಾಡಿ’ ಎಂದು ಕೋರಿದರು.</p>.<p>ಸೋಮಶೇಖರ್ ಎಂಬುವವರು, ‘ನರೇಗಾ ಯೋಜನೆಯಡಿ ಕುಟುಂಬದ 15 ಮಂದಿಗೆ ಉದ್ಯೋಗ ಸಿಕ್ಕಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ’ ಎಂದು ತಿಳಿಸಿದರು.</p>.<p>‘ನಾಗರಹೊಳೆ ಕಾಡಿನಲ್ಲಿದ್ದ ನಮಗೆ ಪುನರ್ವಸತಿ ಯೋಜನೆಯಲ್ಲಿ 5 ಎಕರೆ ಸಿಕ್ಕಿದೆ. ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಪತಿಯ ಕಿಡ್ನಿ ಶಸ್ತ್ರಚಿಕಿತ್ಸೆ ನಡೆದರೂ ಪತಿ ತೀರಿಕೊಂಡರು’ ಎಂದು ಮೈಸೂರಿನ ಎರವ ಸಮುದಾಯದ ಮಹಿಳೆ ವೀಣಾ ಹೇಳಿದರು.</p>.<p>ಮೋದಿ, ‘ನಿಮಗೆ ಆಯುಷ್ಮಾನ್ ಯೋಜನೆ ಬಗ್ಗೆ ಹೇಗೆ ಗೊತ್ತಾಯಿತು’ ಎಂದರು. ‘ಆಯುಷ್ಮಾನ್ ಯೋಜನೆ ಆರಂಭವಾದಾಗ ಕಾರ್ಡ್ ಮಾಡಿಸಿಕೊಳ್ಳುವಂತೆ ಯಾರೊ ಒಬ್ಬರು ಹೇಳಿದ್ದರು. ಅದು ಪತಿಯ ಶಸ್ತ್ರಚಿಕಿತ್ಸೆಗೆ ನೆರವಾಯಿತು’ ಎಂದರು.</p>.<p>ಹುಣಸೂರು ತಾಲ್ಲೂಕು ಸಿರಿಯೂರಿನ ಮಹೇಶ್, ‘ಬಾಳೆ, ಪಪ್ಪಾಯ ಬೆಳೆಯುತ್ತಿದ್ದೇನೆ. ಪಿಎಂ ಕಿಸಾನ್ ಯೋಜನೆ ಅನುಕೂಲವಾಗಿದೆ. ಕೊರೊನಾ ವೇಳೆ ನಾನೇ ಊರುಗಳಿಗೆ ಹೋಗಿ ವ್ಯಾಪಾರ ಮಾಡಿದೆ. ಕೃಷಿ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುತ್ತಿದ್ದೇನೆ’ ಎಂದರು.</p>.<p>‘ಮೊದಲು ಕೂಲಿ ಮಾಡುತ್ತಿದ್ದೆ. ಸರ್ಕಾರದ ಯೋಜನೆಯ ಸಾಲದಲ್ಲಿ ಟಿಲ್ಲರ್ ಖರೀದಿಸಿ, ಜೀವನ ನಡೆಸುತ್ತಿದ್ದೇನೆ’ ಎಂದು ಹಾಸನ ಜಿಲ್ಲೆಯ ಆಲೂರಿನ ಪುಟ್ಟ ರಂಗನಾಥ ಹೇಳಿದರು.</p>.<p>ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಇರುವ ತಿಳಿವಳಿಕೆಯನ್ನು ಶ್ಲಾಘಿಸಿದ ಪ್ರಧಾನಿ, ‘ಯೋಜನೆಗಳ ಮಾಹಿತಿಯನ್ನು ಬಡವರು, ರೈತರಿಗೆ ತಲುಪಿಸಬೇಕು’ ಎಂದು ಸಲಹೆ ನೀಡಿದರು.</p>.<p><strong>‘ನಾನು ನಿಮ್ಮ ಮನೆಗೆ ಬರಲೇ?’</strong></p>.<p>ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿ ಮಂಡ್ಯದ ಕಿಕ್ಕೇರಿ ಹೋಬಳಿ ಉದ್ದಿನಮಲ್ಲನ ಹೊಸೂರಿನ ಯಶೋದಾ ಸುರೇಶ್, ‘ಮೊದಲು ಮನೆಯಿರಲಿಲ್ಲ, ಎರಡು ವರ್ಷದ ಹಿಂದೆ ಮನೆ ಕಟ್ಟಿಸಿಕೊಂಡಿದ್ದೇನೆ. ಮಹಿಳಾ ಸಂಘದ ಪ್ರತಿನಿಧಿಯಾಗಿದ್ದೇನೆ’ ಎಂದರು.</p>.<p>ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ಮನೆ ಕಟ್ಟಿದ ನಂತರ ಅತಿಥಿಗಳು ಬರುತ್ತಾರಾ? ಚೆನ್ನಾಗಿ ಅಡುಗೆ ಮಾಡುವಿರಾ? ಹಾಗಿದ್ದರೆ ನಿಮ್ಮ ಮನೆಗೆ ಬರಲೇ’ ಎಂದು ಕೇಳಿದರು.</p>.<p>ಸಂತೋಷದಿಂದ ಉತ್ತರಿಸಿದ ಯಶೋದಾ, ‘ಬನ್ನಿ ಸರ್, ಮಾಡೋಣಾ..’ ಎಂದು ನಗುತ್ತ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong>‘ನಾನು ನಿಮಗೆ ಗೊತ್ತಾ? ನನಗೆ ಕುರ್ತಾ ಹೊಲಿದು ಕೊಡುವಿರಾ’ ಎಂದು ಪ್ರಧಾನಿ ನರೇಂದ್ರ ಮೋದಿಯವರು ಕೇಳಿದಾಗ ಚಾಮರಾಜನಗರದ ಹನೂರಿನ ಟೇಲರ್ ಅಂಬಿಕಾ ಅವರ ಕಣ್ಣಲ್ಲಿ ಅಚ್ಚರಿ, ಸಂತಸ ಏಕಕಾಲಕ್ಕೆ ಮೂಡಿತ್ತು.</p>.<p>ನಗರದ ಮಹಾರಾಜ ಕಾಲೇಜು ಮೈದಾನದ ಬೃಹತ್ ವೇದಿಕೆಯ ಹಿಂಭಾಗದಲ್ಲಿ ಸೋಮವಾರ ಸಂಜೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೈಸೂರು ವಿಭಾಗದ ಫಲಾನುಭವಿಗಳೊಂದಿಗೆ ಪ್ರಧಾನಿ ನಡೆಸಿದ ಸಂವಾದ ಇಂಥ ಸನ್ನಿವೇಶಗಳಿಗೆ ಸಾಕ್ಷಿಯಾಗಿತ್ತು.</p>.<p>ಅಂಬಿಕಾ ಅವರು ‘ಮುದ್ರಾ ಯೋಜನೆ<br />ಯಿಂದ ಹೊಲಿಗೆ ವೃತ್ತಿ ಆರಂಭಿ ಸಿದ್ದೇನೆ. ಪತಿಯೂ ಸಹಕರಿಸುತ್ತಿದ್ದಾರೆ’ ಎಂದಾಗ ಪ್ರಧಾನಿ, ‘ಕುರ್ತಾ ಹೊಲಿದು ಕೊಡುವಿರಾ’ ಎಂದು ಕೇಳಿದರು.</p>.<p>‘ಖಂಡಿತಾ.. ಸರ್.. ನಿಮ್ಮೊಂದಿಗೆ ಮಾತನಾಡುತ್ತಿರುವ ಗಳಿಗೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು’ ಎಂದು ಅಂಬಿಕಾ ಸಂತಸ ವ್ಯಕ್ತಪಡಿಸಿದರು.</p>.<p><strong>ಪ್ಲಾಸ್ಟಿಕ್ ಹೂ ನಿಷೇಧಿಸಿ:</strong>ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಫಲಾನುಭವಿ ಮಂಡ್ಯ ಜಿಲ್ಲೆ ಮಳವಳ್ಳಿಯ ಕೃಷಿಕ ಸಂದೀಪ್, ‘₹ 14 ಲಕ್ಷ ವೆಚ್ಚದಲ್ಲಿ<br />ಜರ್ಬೆರಾ ಆಲಂಕಾರಿಕ ಹೂ ಬೆಳೆದಿದ್ದೆ. ಚೀನಾ, ಥಾಯ್ಲೆಂಡ್ನ ಪ್ಲಾಸ್ಟಿಕ್ ಹೂಗಳು ಹೊಡೆತ ನೀಡಿವೆ. ಅವುಗಳನ್ನು ಬ್ಯಾನ್ ಮಾಡಿ’ ಎಂದು ಕೋರಿದರು.</p>.<p>ಸೋಮಶೇಖರ್ ಎಂಬುವವರು, ‘ನರೇಗಾ ಯೋಜನೆಯಡಿ ಕುಟುಂಬದ 15 ಮಂದಿಗೆ ಉದ್ಯೋಗ ಸಿಕ್ಕಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ’ ಎಂದು ತಿಳಿಸಿದರು.</p>.<p>‘ನಾಗರಹೊಳೆ ಕಾಡಿನಲ್ಲಿದ್ದ ನಮಗೆ ಪುನರ್ವಸತಿ ಯೋಜನೆಯಲ್ಲಿ 5 ಎಕರೆ ಸಿಕ್ಕಿದೆ. ಆಯುಷ್ಮಾನ್ ಆರೋಗ್ಯ ಯೋಜನೆಯಡಿ ಪತಿಯ ಕಿಡ್ನಿ ಶಸ್ತ್ರಚಿಕಿತ್ಸೆ ನಡೆದರೂ ಪತಿ ತೀರಿಕೊಂಡರು’ ಎಂದು ಮೈಸೂರಿನ ಎರವ ಸಮುದಾಯದ ಮಹಿಳೆ ವೀಣಾ ಹೇಳಿದರು.</p>.<p>ಮೋದಿ, ‘ನಿಮಗೆ ಆಯುಷ್ಮಾನ್ ಯೋಜನೆ ಬಗ್ಗೆ ಹೇಗೆ ಗೊತ್ತಾಯಿತು’ ಎಂದರು. ‘ಆಯುಷ್ಮಾನ್ ಯೋಜನೆ ಆರಂಭವಾದಾಗ ಕಾರ್ಡ್ ಮಾಡಿಸಿಕೊಳ್ಳುವಂತೆ ಯಾರೊ ಒಬ್ಬರು ಹೇಳಿದ್ದರು. ಅದು ಪತಿಯ ಶಸ್ತ್ರಚಿಕಿತ್ಸೆಗೆ ನೆರವಾಯಿತು’ ಎಂದರು.</p>.<p>ಹುಣಸೂರು ತಾಲ್ಲೂಕು ಸಿರಿಯೂರಿನ ಮಹೇಶ್, ‘ಬಾಳೆ, ಪಪ್ಪಾಯ ಬೆಳೆಯುತ್ತಿದ್ದೇನೆ. ಪಿಎಂ ಕಿಸಾನ್ ಯೋಜನೆ ಅನುಕೂಲವಾಗಿದೆ. ಕೊರೊನಾ ವೇಳೆ ನಾನೇ ಊರುಗಳಿಗೆ ಹೋಗಿ ವ್ಯಾಪಾರ ಮಾಡಿದೆ. ಕೃಷಿ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುತ್ತಿದ್ದೇನೆ’ ಎಂದರು.</p>.<p>‘ಮೊದಲು ಕೂಲಿ ಮಾಡುತ್ತಿದ್ದೆ. ಸರ್ಕಾರದ ಯೋಜನೆಯ ಸಾಲದಲ್ಲಿ ಟಿಲ್ಲರ್ ಖರೀದಿಸಿ, ಜೀವನ ನಡೆಸುತ್ತಿದ್ದೇನೆ’ ಎಂದು ಹಾಸನ ಜಿಲ್ಲೆಯ ಆಲೂರಿನ ಪುಟ್ಟ ರಂಗನಾಥ ಹೇಳಿದರು.</p>.<p>ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಇರುವ ತಿಳಿವಳಿಕೆಯನ್ನು ಶ್ಲಾಘಿಸಿದ ಪ್ರಧಾನಿ, ‘ಯೋಜನೆಗಳ ಮಾಹಿತಿಯನ್ನು ಬಡವರು, ರೈತರಿಗೆ ತಲುಪಿಸಬೇಕು’ ಎಂದು ಸಲಹೆ ನೀಡಿದರು.</p>.<p><strong>‘ನಾನು ನಿಮ್ಮ ಮನೆಗೆ ಬರಲೇ?’</strong></p>.<p>ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿ ಮಂಡ್ಯದ ಕಿಕ್ಕೇರಿ ಹೋಬಳಿ ಉದ್ದಿನಮಲ್ಲನ ಹೊಸೂರಿನ ಯಶೋದಾ ಸುರೇಶ್, ‘ಮೊದಲು ಮನೆಯಿರಲಿಲ್ಲ, ಎರಡು ವರ್ಷದ ಹಿಂದೆ ಮನೆ ಕಟ್ಟಿಸಿಕೊಂಡಿದ್ದೇನೆ. ಮಹಿಳಾ ಸಂಘದ ಪ್ರತಿನಿಧಿಯಾಗಿದ್ದೇನೆ’ ಎಂದರು.</p>.<p>ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ಮನೆ ಕಟ್ಟಿದ ನಂತರ ಅತಿಥಿಗಳು ಬರುತ್ತಾರಾ? ಚೆನ್ನಾಗಿ ಅಡುಗೆ ಮಾಡುವಿರಾ? ಹಾಗಿದ್ದರೆ ನಿಮ್ಮ ಮನೆಗೆ ಬರಲೇ’ ಎಂದು ಕೇಳಿದರು.</p>.<p>ಸಂತೋಷದಿಂದ ಉತ್ತರಿಸಿದ ಯಶೋದಾ, ‘ಬನ್ನಿ ಸರ್, ಮಾಡೋಣಾ..’ ಎಂದು ನಗುತ್ತ ಉತ್ತರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>