<p>ದೇಶದ ವಿವಿಧ ಭಾಗದಲ್ಲಿರುವ ದ್ವಾದಶ (12) ಜ್ಯೋತಿರ್ಲಿಂಗಗಳು ಭಕ್ತರ ಶ್ರದ್ಧಾ, ಭಕ್ತಿಯ ನೆಲೆಗಳಾಗಿವೆ. ಈ ಎಲ್ಲ 12 ಜ್ಯೋತಿರ್ಲಿಂಗಗಳನ್ನು ಪ್ರತ್ಯೇಕ ಗರ್ಭಗುಡಿಗಳು ಹಾಗೂ ಪ್ರತ್ಯೇಕ ವಿಮಾನ ಗೋಪುರಗಳೊಂದಿಗೆ ಒಂದೇ ಕಡೆ ಪ್ರತಿಷ್ಠಾಪಿಸಿದ ವಿಶಿಷ್ಟ ದೇಗುಲವೊಂದು ಬೆಂಗಳೂರಿನಲ್ಲಿದೆ.<br /> <br /> ಇಲ್ಲಿನ ಓಂಕಾರೇಶ್ವರ ಜ್ಯೋತಿರ್ಲಿಂಗವು 6 ಅಡಿ ಎತ್ತರವಿದ್ದು ಮಧ್ಯದಲ್ಲಿ ಸ್ಫಟಿಕದ ಶ್ರೀಯಂತ್ರವಿದೆ. ಇದು ಈ ದೇಗುಲದ ಪ್ರಮುಖ ಜ್ಯೋತಿರ್ಲಿಂಗ. ಇದರ ವಿಮಾನ ಗೋಪುರದ ಎತ್ತರ 100 ಅಡಿ. ವೈದ್ಯನಾಥ, ವಿಶ್ವನಾಥ, ಭೀಮಾಶಂಕರ, ತ್ರಯಂಬಕೇಶ್ವರ, ಘೃಶ್ನೇಶ್ವರ, ರಾಮೇಶ್ವರ, ಸೋಮನಾಥ, ಕೇದಾರನಾಥ, ನಾಗೇಶ್ವರ, ಮಲ್ಲಿಕಾರ್ಜುನ, ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇಗುಲಗಳು ಇದನ್ನು ಸುತ್ತುವರೆದಿವೆ. <br /> ಇಲ್ಲೂ ಸಹ ಶ್ರೀಶೈಲ ಮಲ್ಲಿಕಾರ್ಜುನ ಮತ್ತು ರಾಮೇಶ್ವರ ಜ್ಯೋತಿರ್ಲಿಂಗ ದೇಗುಲಗಳ ವಿಮಾನ ಗೊಪುರಗಳು ದಕ್ಷಿಣ ಭಾರತದ ಶೈಲಿಯಲ್ಲಿದ್ದು ಉಳಿದ ಹತ್ತು ದೇವಾಲಯಗಳ ವಿಮಾನ ಗೋಪುರಗಳು ಉತ್ತರ ಭಾರತದ ಶೈಲಿಯಲ್ಲಿವೆ. ಜ್ಯೋತಿರ್ಲಿಂಗದ ಶಿಲೆಗಳನ್ನು ನರ್ಮದಾ ನದಿಯಿಂದ ತರಲಾಗಿದೆ. <br /> <br /> ಪ್ರತಿಯೊಂದು ಜ್ಯೋತಿರ್ಲಿಂಗದ ಸುತ್ತಲೂ ಒಂದು ಇಂಚು ಎತ್ತರದ ಸಾವಿರ ನರ್ಮದೇಶ್ವರ ಲಿಂಗಗಳನ್ನು, ಓಂಕಾರೇಶ್ವರ ಲಿಂಗದ ತಳದಲ್ಲಿ ಮಾತ್ರ ಎರಡು ಸಾವಿರ ಲಿಂಗಗಳನ್ನು ಇರಿಸಲಾಗಿದೆ. ಹಾಗಾಗಿ ಕಣ್ಣಿಗೆ ಕಾಣುವ ಹನ್ನೆರಡು ಪ್ರಮುಖ ಲಿಂಗಗಳೊಂದಿಗೆ 13000 ಅಗೋಚರ ಲಿಂಗಗಳು ಈ ದೇಗುಲಗಳಲ್ಲಿವೆ. <br /> <br /> ಶಿವರಾತ್ರಿಯಂದು ಭಕ್ತರು ಗರ್ಭಗುಡಿ ಪ್ರವೇಶಿಸಿ ದೇವರನ್ನು ಮುಟ್ಟಿ ಪೂಜಿಸಬಹುದು. ಇಲ್ಲಿ ವಿದ್ಯಾ ಗಣಪತಿ, ಸುಬ್ರಹ್ಮಣ್ಯ, ಕಾಲಭೈರವ, ಚಂಡಿಕೇಶ್ವರ ಮತ್ತು ಹನ್ನೊಂದು ರುದ್ರದೇವತೆಗಳು, ಅಂದಾಜು 1 ಸಾವಿರ ಕಿಲೊ ತೂಗುವ ಪಂಚಲೋಹ ನಟರಾಜ, ಶ್ರೀ ಯಂತ್ರಗಳೂ ಕಾಣಸಿಗುತ್ತವೆ. ಅಲ್ಲದೆ ಶ್ರೀ ಮತ್ಸ್ಯನಾರಾಯಣ, ಶ್ರೀ ನಾಗದೇವತಾ, ಶ್ರೀ ವನದುರ್ಗಾ, ಶ್ರೀ ಮುನೀಶ್ವರ ದೇಗುಲಗಳಿವೆ. ಇವುಗಳೊಂದಿಗೆ ಬೃಹದಾಕಾರದ ಗಡಿಯಾರ ಇಲ್ಲಿಯ ಆಕರ್ಷಣೆ. <br /> <br /> ಓಂಕಾರ ನಾದ, ಶಂಖ, ತಮಟೆ, ಜಾಗಟೆಗಳೊಂದಿಗೆ ಸಮಯ ತೋರಿಸುವ ಎಚ್ಎಂಟಿ ನಿರ್ಮಿತ ಈ ಗಡಿಯಾರ ಲಂಡನ್ನಿನ `ಬಿಗ್ಬೆನ್~ಗಿಂತಲೂ ದೊಡ್ಡದಾಗಿದ್ದು ಸದ್ಯಕ್ಕೆ ದುರಸ್ತಿಯಲ್ಲಿದೆ. ಇಲ್ಲಿಯ ಇನ್ನೊಂದು ಆಕರ್ಷಣೆಯೆಂದರೆ `ಓಂಕಾರ್ ಹಿಲ್ಸ್~ ತುದಿಯ ವಿಶಾಲ ಮಂಟಪ. ಇಲ್ಲಿಂದ ಬೆಂಗಳೂರಿನ ಬಹುತೇಕ ಭಾಗಗಳ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಇಲ್ಲೊಂದು ಸರ್ವ ಧರ್ಮ ಸಮನ್ವಯ ಮಂಟಪವಿದೆ. <br /> <br /> ಏಕೆಂದರೆ ವಿವಿಧ ಧರ್ಮಗುರುಗಳ ಶಿಲಾ ಪ್ರತಿಮೆಗಳು ಇಲ್ಲಿವೆ. ಪುಟ್ಟ ಪ್ರವಾಸಕ್ಕೂ ಇದು ಸೂಕ್ತ ಸ್ಥಳ. ಈ ದೇಗುಲಗಳ ಪರಿಕಲ್ಪನೆ ಬ್ರಹ್ಮೈಕ್ಯ ಸದ್ಗುರು ಶಿವಪುರಿ ಮಹಾಸ್ವಾಮೀಜಿಯವರದು.<br /> <br /> <strong>ಎಲ್ಲಿದೆ?</strong><br /> ಬೆಂಗಳೂರು ನಗರದಿಂದ ಸುಮಾರು 16 ಕಿ.ಮಿ. ದೂರದಲ್ಲಿ ಕೆಂಗೇರಿ- ಉತ್ತರಹಳ್ಳಿ ಮಾರ್ಗದ ಶ್ರೀನಿವಾಸಪುರದ ಓಂಕಾರ್ ಹಿಲ್ಸ್ನಲ್ಲಿ ಈ ಸುಂದರ ದೇಗುಲವಿದೆ. 375, 378 ಮತ್ತು 222ಡಿ ಸಂಖ್ಯೆಯ ಬಸ್ಗಳಿಂದ ಇಲ್ಲಿ ತಲುಪಬಹುದು.<br /> <strong><br /> ಪೂಜೆ<br /> * </strong>ಪ್ರತಿ ದಿನ ರುದ್ರಾಭಿಷೇಕ, ಹಬ್ಬಗಳಂದು ಹೋಮ ನಡೆಯುತ್ತದೆ.<br /> <strong>* </strong>ಪ್ರದೋಷ ಪೂಜಾ ಹಾಗು ಸಂಕಷ್ಟಹರ ಗಣಪತಿ ಪೂಜೆ.<br /> <strong>* </strong>ನವಗ್ರಹ ಜಪ ಮತ್ತು ಹೋಮ.<br /> <br /> ಮಾಹಿತಿಗೆ: 2860 2586, 91419 20920, 91419 30930.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇಶದ ವಿವಿಧ ಭಾಗದಲ್ಲಿರುವ ದ್ವಾದಶ (12) ಜ್ಯೋತಿರ್ಲಿಂಗಗಳು ಭಕ್ತರ ಶ್ರದ್ಧಾ, ಭಕ್ತಿಯ ನೆಲೆಗಳಾಗಿವೆ. ಈ ಎಲ್ಲ 12 ಜ್ಯೋತಿರ್ಲಿಂಗಗಳನ್ನು ಪ್ರತ್ಯೇಕ ಗರ್ಭಗುಡಿಗಳು ಹಾಗೂ ಪ್ರತ್ಯೇಕ ವಿಮಾನ ಗೋಪುರಗಳೊಂದಿಗೆ ಒಂದೇ ಕಡೆ ಪ್ರತಿಷ್ಠಾಪಿಸಿದ ವಿಶಿಷ್ಟ ದೇಗುಲವೊಂದು ಬೆಂಗಳೂರಿನಲ್ಲಿದೆ.<br /> <br /> ಇಲ್ಲಿನ ಓಂಕಾರೇಶ್ವರ ಜ್ಯೋತಿರ್ಲಿಂಗವು 6 ಅಡಿ ಎತ್ತರವಿದ್ದು ಮಧ್ಯದಲ್ಲಿ ಸ್ಫಟಿಕದ ಶ್ರೀಯಂತ್ರವಿದೆ. ಇದು ಈ ದೇಗುಲದ ಪ್ರಮುಖ ಜ್ಯೋತಿರ್ಲಿಂಗ. ಇದರ ವಿಮಾನ ಗೋಪುರದ ಎತ್ತರ 100 ಅಡಿ. ವೈದ್ಯನಾಥ, ವಿಶ್ವನಾಥ, ಭೀಮಾಶಂಕರ, ತ್ರಯಂಬಕೇಶ್ವರ, ಘೃಶ್ನೇಶ್ವರ, ರಾಮೇಶ್ವರ, ಸೋಮನಾಥ, ಕೇದಾರನಾಥ, ನಾಗೇಶ್ವರ, ಮಲ್ಲಿಕಾರ್ಜುನ, ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇಗುಲಗಳು ಇದನ್ನು ಸುತ್ತುವರೆದಿವೆ. <br /> ಇಲ್ಲೂ ಸಹ ಶ್ರೀಶೈಲ ಮಲ್ಲಿಕಾರ್ಜುನ ಮತ್ತು ರಾಮೇಶ್ವರ ಜ್ಯೋತಿರ್ಲಿಂಗ ದೇಗುಲಗಳ ವಿಮಾನ ಗೊಪುರಗಳು ದಕ್ಷಿಣ ಭಾರತದ ಶೈಲಿಯಲ್ಲಿದ್ದು ಉಳಿದ ಹತ್ತು ದೇವಾಲಯಗಳ ವಿಮಾನ ಗೋಪುರಗಳು ಉತ್ತರ ಭಾರತದ ಶೈಲಿಯಲ್ಲಿವೆ. ಜ್ಯೋತಿರ್ಲಿಂಗದ ಶಿಲೆಗಳನ್ನು ನರ್ಮದಾ ನದಿಯಿಂದ ತರಲಾಗಿದೆ. <br /> <br /> ಪ್ರತಿಯೊಂದು ಜ್ಯೋತಿರ್ಲಿಂಗದ ಸುತ್ತಲೂ ಒಂದು ಇಂಚು ಎತ್ತರದ ಸಾವಿರ ನರ್ಮದೇಶ್ವರ ಲಿಂಗಗಳನ್ನು, ಓಂಕಾರೇಶ್ವರ ಲಿಂಗದ ತಳದಲ್ಲಿ ಮಾತ್ರ ಎರಡು ಸಾವಿರ ಲಿಂಗಗಳನ್ನು ಇರಿಸಲಾಗಿದೆ. ಹಾಗಾಗಿ ಕಣ್ಣಿಗೆ ಕಾಣುವ ಹನ್ನೆರಡು ಪ್ರಮುಖ ಲಿಂಗಗಳೊಂದಿಗೆ 13000 ಅಗೋಚರ ಲಿಂಗಗಳು ಈ ದೇಗುಲಗಳಲ್ಲಿವೆ. <br /> <br /> ಶಿವರಾತ್ರಿಯಂದು ಭಕ್ತರು ಗರ್ಭಗುಡಿ ಪ್ರವೇಶಿಸಿ ದೇವರನ್ನು ಮುಟ್ಟಿ ಪೂಜಿಸಬಹುದು. ಇಲ್ಲಿ ವಿದ್ಯಾ ಗಣಪತಿ, ಸುಬ್ರಹ್ಮಣ್ಯ, ಕಾಲಭೈರವ, ಚಂಡಿಕೇಶ್ವರ ಮತ್ತು ಹನ್ನೊಂದು ರುದ್ರದೇವತೆಗಳು, ಅಂದಾಜು 1 ಸಾವಿರ ಕಿಲೊ ತೂಗುವ ಪಂಚಲೋಹ ನಟರಾಜ, ಶ್ರೀ ಯಂತ್ರಗಳೂ ಕಾಣಸಿಗುತ್ತವೆ. ಅಲ್ಲದೆ ಶ್ರೀ ಮತ್ಸ್ಯನಾರಾಯಣ, ಶ್ರೀ ನಾಗದೇವತಾ, ಶ್ರೀ ವನದುರ್ಗಾ, ಶ್ರೀ ಮುನೀಶ್ವರ ದೇಗುಲಗಳಿವೆ. ಇವುಗಳೊಂದಿಗೆ ಬೃಹದಾಕಾರದ ಗಡಿಯಾರ ಇಲ್ಲಿಯ ಆಕರ್ಷಣೆ. <br /> <br /> ಓಂಕಾರ ನಾದ, ಶಂಖ, ತಮಟೆ, ಜಾಗಟೆಗಳೊಂದಿಗೆ ಸಮಯ ತೋರಿಸುವ ಎಚ್ಎಂಟಿ ನಿರ್ಮಿತ ಈ ಗಡಿಯಾರ ಲಂಡನ್ನಿನ `ಬಿಗ್ಬೆನ್~ಗಿಂತಲೂ ದೊಡ್ಡದಾಗಿದ್ದು ಸದ್ಯಕ್ಕೆ ದುರಸ್ತಿಯಲ್ಲಿದೆ. ಇಲ್ಲಿಯ ಇನ್ನೊಂದು ಆಕರ್ಷಣೆಯೆಂದರೆ `ಓಂಕಾರ್ ಹಿಲ್ಸ್~ ತುದಿಯ ವಿಶಾಲ ಮಂಟಪ. ಇಲ್ಲಿಂದ ಬೆಂಗಳೂರಿನ ಬಹುತೇಕ ಭಾಗಗಳ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು. ಇಲ್ಲೊಂದು ಸರ್ವ ಧರ್ಮ ಸಮನ್ವಯ ಮಂಟಪವಿದೆ. <br /> <br /> ಏಕೆಂದರೆ ವಿವಿಧ ಧರ್ಮಗುರುಗಳ ಶಿಲಾ ಪ್ರತಿಮೆಗಳು ಇಲ್ಲಿವೆ. ಪುಟ್ಟ ಪ್ರವಾಸಕ್ಕೂ ಇದು ಸೂಕ್ತ ಸ್ಥಳ. ಈ ದೇಗುಲಗಳ ಪರಿಕಲ್ಪನೆ ಬ್ರಹ್ಮೈಕ್ಯ ಸದ್ಗುರು ಶಿವಪುರಿ ಮಹಾಸ್ವಾಮೀಜಿಯವರದು.<br /> <br /> <strong>ಎಲ್ಲಿದೆ?</strong><br /> ಬೆಂಗಳೂರು ನಗರದಿಂದ ಸುಮಾರು 16 ಕಿ.ಮಿ. ದೂರದಲ್ಲಿ ಕೆಂಗೇರಿ- ಉತ್ತರಹಳ್ಳಿ ಮಾರ್ಗದ ಶ್ರೀನಿವಾಸಪುರದ ಓಂಕಾರ್ ಹಿಲ್ಸ್ನಲ್ಲಿ ಈ ಸುಂದರ ದೇಗುಲವಿದೆ. 375, 378 ಮತ್ತು 222ಡಿ ಸಂಖ್ಯೆಯ ಬಸ್ಗಳಿಂದ ಇಲ್ಲಿ ತಲುಪಬಹುದು.<br /> <strong><br /> ಪೂಜೆ<br /> * </strong>ಪ್ರತಿ ದಿನ ರುದ್ರಾಭಿಷೇಕ, ಹಬ್ಬಗಳಂದು ಹೋಮ ನಡೆಯುತ್ತದೆ.<br /> <strong>* </strong>ಪ್ರದೋಷ ಪೂಜಾ ಹಾಗು ಸಂಕಷ್ಟಹರ ಗಣಪತಿ ಪೂಜೆ.<br /> <strong>* </strong>ನವಗ್ರಹ ಜಪ ಮತ್ತು ಹೋಮ.<br /> <br /> ಮಾಹಿತಿಗೆ: 2860 2586, 91419 20920, 91419 30930.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>