<p><span style="font-size: 48px;">ಛಾ</span>ಯಾಚಿತ್ರ ತೆಗೆಯಲು ಅದರದೇ ಆದ ಒಂದು ಶಿಸ್ತು ಇದೆ. ಆದರೆ ಎಲ್ಲರೂ ಅಧ್ಯಯನ ಮಾಡಿಯೇ ಚಿತ್ರ ತೆಗೆಯುತ್ತಾರೆ ಅಥವಾ ತೆಗೆಯಬೇಕು ಎಂಬ ನಿಯಮವೇನಿಲ್ಲ. ಸಂದರ್ಭದ ನೆನಪಿನ ದಾಖಲೆಯಾಗಿ ಅಷ್ಟೆ ಚಿತ್ರ ತೆಗೆಯುವಾಗ ಈ ಯಾವ ನಿಯಮವೂ ಅನ್ವಯಿಸುವುದಿಲ್ಲ.</p>.<p>ಆದರೆ ಛಾಯಾಚಿತ್ರಗ್ರಹಣವನ್ನು ಕಲೆಯಾಗಿ ಕಂಡಾಗ ಅಲ್ಲಿ ಸಂಯೋಜನೆಯೇ (ಕಂಪೋಸಿಷನ್) ಮುಖ್ಯವಾಗುತ್ತದೆ. ಹಾಗಾಗಿಯೇ ಬರಿ ಕಣ್ಣಿಗೆ ಕಾಣುವುದಕ್ಕಿಂತ ಅಗಾಧವಾದದ್ದನ್ನು ಕಾಣಿಸುವ ಶಕ್ತಿ ಛಾಯಾಚಿತ್ರಗಳಿಗಿವೆ.</p>.<p>ಕ್ಯಾಮೆರಾ ಜಗತ್ತಿನಲ್ಲಿ ನಡೆದ ಕ್ರಾಂತಿ ಪ್ರತಿಯೊಬ್ಬನಲ್ಲೂ ಫೋಟೊ ತೆಗೆಯುವ ಹುಚ್ಚು ಹೆಚ್ಚಿಸಿದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದ ಮೇಲೆ ಚಿಕ್ಕಪುಟ್ಟ ಕಾರ್ಯಕ್ರಮಗಳಿಗೆಲ್ಲ ವೃತ್ತಿಪರ ಛಾಯಾಗ್ರಾಹಕರನ್ನು ಅವಲಂಬಿಸಬೇಕಾದ ಅನಿವಾರ್ಯ ಕಡಿಮೆಯಾಗಿದೆ.</p>.<p>ಆದರೆ ಛಾಯಾಗ್ರಹಣವನ್ನೇ ವೃತ್ತಿ ಮಾಡಿಕೊಂಡು ಅಲೆದಾಡಿ ಅದ್ಭುತ ಚಿತ್ರಗಳನ್ನು ದಾಖಲಿಸುವ ದೊಡ್ಡ ಸಮೂಹವೇ ಇದೆ. ನಗರದಲ್ಲಿ ಆಗಾಗ ಇಂತಹ ಅವರೂಪದ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ.ಞ</p>.<p>ಸದ್ಯ ಕ್ರೆಸೆಂಟ್ ರಸ್ತೆಯಲ್ಲಿರುವ `ನಳಪಾದ್ಸ್', `ಹೋಟೆಲ್ ಬೆಂಗಳೂರು ಇಂಟರ್ನ್ಯಾಷನಲ್'ನಲ್ಲಿ ಇಂತಹ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಜುಲೈ 5ರವರೆಗೆ ಪ್ರದರ್ಶನ ನಡೆಯಲಿದೆ.</p>.<table align="right" border="1" cellpadding="1" cellspacing="1" style="width: 189px;"><tbody><tr><td style="width: 183px;"></td> </tr> <tr> <td style="width: 183px;"> ಸ್ನೇಹಲ್ ಅವರ ಮಾನವಾಸಕ್ತಿಯ ಚಿತ್ರ</td> </tr> <tr> <td style="width: 183px;"> </td></tr></tbody></table>.<table align="right" border="1" cellpadding="1" cellspacing="1" style="width: 189px;"><tbody><tr><td style="width: 183px;"></td> </tr> <tr> <td style="width: 183px;"> ಸಿದ್ದಾರ್ಥ್ ವೈದ್ಯನಾಥನ್ ಅವರ ಭಾವನಾತ್ಮಕ ಚಿತ್ರ</td> </tr> <tr> <td style="width: 183px;"> </td></tr></tbody></table>.<table align="right" border="1" cellpadding="1" cellspacing="1" style="width: 189px;"><tbody><tr><td style="width: 183px;"></td> </tr> <tr> <td style="width: 183px;"> ಪ್ರದೀಪ್ ಬಿ.ಆರ್. ಅವರ ಕಾಣಿಸಿ ನಿಸರ್ಗ</td> </tr> <tr> <td style="width: 183px;"> </td></tr></tbody></table>.<table align="right" border="1" cellpadding="1" cellspacing="1" style="width: 189px;"><tbody><tr><td style="width: 183px;"></td> </tr> <tr> <td style="width: 183px;"> ಸಂದೀಪ್ ರಾಜಶೇಖರನ್ ಅವರ ಕಡಿಮೆ ಬೆಳಕಿನ ಛಾಯಾಚಿತ್</td> </tr> </tbody> </table>.<p>ನಿಜಕ್ಕೂ ಪ್ರದರ್ಶನದಲ್ಲಿರುವ ಛಾಯಾಚಿತ್ರಗಳನ್ನು ನೋಡಿದರೆ ವರ್ಣಚಿತ್ರಗಳೇನೋ ಎಂಬ ಸಂಶಯ ಮೊದಲಿಗೆ ಮೂಡುತ್ತದೆ. ನಮ್ಮ ಸುತ್ತಲಿ</p>.<p>ನ ಜಗತ್ತು ಇಷ್ಟು ಅದ್ಭುತವಾಗಿದೆಯೇ ಎಂದು ಅಚ್ಚರಿಯೂ ಆಗುತ್ತದೆ. ಇವರಲ್ಲಿ ಬೇರೆ ಬೇರೆ ವೃತ್ತಿಯಲ್ಲಿದ್ದು ಹವ್ಯಾಸಕ್ಕಾಗಿ ಕ್ಯಾಮೆರಾ ಎತ್ತಿಕೊಂಡವರಿದ್ದಾರೆ. ಕ್ಯಾಮೆರಾ ಹಿಡಿಯುವುದನ್ನೇ ವೃತ್ತಿಯಾಗಿಸಿಕೊಂಡವರಿದ್ದಾರೆ. ಕ್ಯಾಮೆರಾ ಮೋಹದಿಂದ ವೃತ್ತಿ ತೊರೆದವರೂ ಇದ್ದಾರೆ. ಇವರೆಲ್ಲ ಈ ಜಗತ್ತನ್ನು ಅದ್ಭುತವಾಗಿ ಪರಿಭಾವಿಸಿಕೊಂಡಿದ್ದಾರೆ.</p>.<p>ಸಾಫ್ಟ್ವೇರ್ ಎಂಜಿನಿಯರ್ ಕೋದಂಡರಾಮ್ ಅವರಿಗೆ ಸುತ್ತಾಡುವುದು ಇಷ್ಟದ ಹವ್ಯಾಸ. ಮೊದಮೊದಲು ಹವ್ಯಾಸಕ್ಕೆಂದು ಕ್ಯಾಮರಾ ಹಿಡಿದ ಇವರು ನಂತರ ಅದನ್ನೇ ವೃತ್ತಿಯಾಗಿಸಿಕೊಂಡವರು. `ಛಾಯಾಚಿತ್ರಗಳು ಬರಿಗಣ್ಣಿಗೆ ಕಾಣದೆ ತಪ್ಪಿಸಿಕೊಂಡ ಅನೇಕ ದೃಶ್ಯಗಳನ್ನು ನೋಡುವ ದೊಡ್ಡ ಬಾಗಿಲು' ಅಂತಾರೆ ಕೋದಂಡರಾಂ.<br /> <br /> ಬೆಂಗಳೂರು ಮೂಲದ 21 ವರ್ಷದ ಸ್ನೇಹಲ್ಗೆ ವ್ಯಾಸಂಗಕ್ಕೆಂದು ಕೋಲ್ಕತ್ತಾಗೆ ಹೋಗುವ ಹಾದಿಯಲ್ಲಿ ಛಾಯಾಚಿತ್ರಗಳ ಪ್ರಭಾವದ ಬಗ್ಗೆ ಜ್ಞಾನೋದಯವಾಯಿತಂತೆ. `ನನ್ನ ಛಾಯಾಚಿತ್ರಗಳು ಕಥೆ ಹೇಳುತ್ತವೆ. ನಾನು ತೆಗೆಯುವ ಚಿತ್ರಗಳಲ್ಲಿ ನನ್ನ ಅನುಭವದ ಛಾಯೆ ಇರುತ್ತದೆ. ಹಾಗಾಗಿ ಹೆಚ್ಚಿನ ಚಿತ್ರಗಳು ಪ್ರವಾಸದ ಸಂದರ್ಭದಲ್ಲಿ ಬೀದಿಯಿಂದ ಹುಟ್ಟಿದ್ದು' ಎನ್ನುತ್ತಾರೆ ಅವರು.<br /> <br /> ಛಾಯಾಗ್ರಹಣ ನನ್ನ ಹವ್ಯಾಸ. ನನಗೆ ಫೋಟೊ ತೆಗೆದು ಎಲ್ಲರೊಂದಿಗೆ ಹಂಚಿಕೊಳ್ಳುವುದು ಖುಷಿಯ ಕೆಲಸ ಎನ್ನುವ ಮಧುಸೂದನ್, `ಛಾಯಾಗ್ರಹಣ ಒಂದು ಕಲೆ. ಯಾಕೆಂದರೆ ಒಂದು ಚಿತ್ರ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ನೀಡುತ್ತದೆ. ನೋಡುಗನ ದೃಷ್ಟಿಕೋನ ಮತ್ತು ಆತನ ಅಭಿರುಚಿ ಸೇರಿ ಬೇರೆಯೇ ಅರ್ಥ ಕೊಡುತ್ತದೆ' ಎನ್ನುತ್ತಾರೆ.<br /> <br /> ಎಂಜಿನಿಯರಿಂಗ್ ಪದವೀಧರ ಪ್ರದೀಪ್ ಎಚ್ಎಸ್ಬಿಸಿ ಬ್ಯಾಂಕ್ನಲ್ಲಿ ಉದ್ಯೋಗಿ. ಎಸ್ಎಲ್ಆರ್ಬಿಬಿ ಫೋರಂನಲ್ಲಿ ಛಾಯಾಗ್ರಹಣದ ಮೂಲ ಪಾಠ ಕಲಿತವರು. `ಛಾಯಾಗ್ರಹಣದ ಜೊತೆಗೆ ಚಾರಣ, ಸೈಕ್ಲಿಂಗ್, ಕ್ರಿಕೆಟ್ ಆಟಗಳ ಒಡನಾಟವೇ ನಾನು ಉತ್ತಮ ಫೋಟೋಗ್ರಾಫರ್ ಆಗಲು ಸಹಕಾರಿಯಾಗಿದೆ' ಎನ್ನುತ್ತಾರೆ ಪ್ರದೀಪ್.<br /> <br /> ಭಾರತದ ಪುರಾತನ ಇತಿಹಾಸ, ಶಿಲ್ಪಕಲೆಗಳಲ್ಲಿರುವ ಅಧ್ಯಾತ್ಮ ಮತ್ತು ಮಿಥ್ಯಗಳನ್ನು ಪ್ರಕಟಪಡಿಸುವ ಎಂಜಿನಿಯರಿಂಗ್ ಕೌಶಲಗಳನ್ನು ದಾಖಲಿಸುವುದು ಸಂದೀಪ್ಗೆ ಇಷ್ಟ. ಸೀಮಿತ ಬೆಳಕಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಚಿತ್ರ ಸೆರೆ ಹಿಡಿಯುವುದು ಅವರ ವಿಶೇಷತೆ.<br /> <br /> `ನನಗೆ ನನ್ನ ಸುತ್ತಲಿನ ಜನರ ಭಾವನಾತ್ಮ ಕ ನಡವಳಿಕೆಗಳನ್ನು ಗಮನಿಸುವುದು ಇಷ್ಟ. ಈ ಕಲಿಕೆಗೆ ಫೋಟೊಗ್ರಫಿ ಉತ್ತಮ ದಾರಿ' ಎನ್ನುತ್ತಾರೆ ಸಿದ್ಧಾರ್ಥ್ ವೈದ್ಯನಾಥನ್.<br /> <strong>-ಹೇಮಾ ವೆಂಕಟ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 48px;">ಛಾ</span>ಯಾಚಿತ್ರ ತೆಗೆಯಲು ಅದರದೇ ಆದ ಒಂದು ಶಿಸ್ತು ಇದೆ. ಆದರೆ ಎಲ್ಲರೂ ಅಧ್ಯಯನ ಮಾಡಿಯೇ ಚಿತ್ರ ತೆಗೆಯುತ್ತಾರೆ ಅಥವಾ ತೆಗೆಯಬೇಕು ಎಂಬ ನಿಯಮವೇನಿಲ್ಲ. ಸಂದರ್ಭದ ನೆನಪಿನ ದಾಖಲೆಯಾಗಿ ಅಷ್ಟೆ ಚಿತ್ರ ತೆಗೆಯುವಾಗ ಈ ಯಾವ ನಿಯಮವೂ ಅನ್ವಯಿಸುವುದಿಲ್ಲ.</p>.<p>ಆದರೆ ಛಾಯಾಚಿತ್ರಗ್ರಹಣವನ್ನು ಕಲೆಯಾಗಿ ಕಂಡಾಗ ಅಲ್ಲಿ ಸಂಯೋಜನೆಯೇ (ಕಂಪೋಸಿಷನ್) ಮುಖ್ಯವಾಗುತ್ತದೆ. ಹಾಗಾಗಿಯೇ ಬರಿ ಕಣ್ಣಿಗೆ ಕಾಣುವುದಕ್ಕಿಂತ ಅಗಾಧವಾದದ್ದನ್ನು ಕಾಣಿಸುವ ಶಕ್ತಿ ಛಾಯಾಚಿತ್ರಗಳಿಗಿವೆ.</p>.<p>ಕ್ಯಾಮೆರಾ ಜಗತ್ತಿನಲ್ಲಿ ನಡೆದ ಕ್ರಾಂತಿ ಪ್ರತಿಯೊಬ್ಬನಲ್ಲೂ ಫೋಟೊ ತೆಗೆಯುವ ಹುಚ್ಚು ಹೆಚ್ಚಿಸಿದೆ. ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಕ್ಯಾಮೆರಾಗಳು ಮಾರುಕಟ್ಟೆಗೆ ಬಂದ ಮೇಲೆ ಚಿಕ್ಕಪುಟ್ಟ ಕಾರ್ಯಕ್ರಮಗಳಿಗೆಲ್ಲ ವೃತ್ತಿಪರ ಛಾಯಾಗ್ರಾಹಕರನ್ನು ಅವಲಂಬಿಸಬೇಕಾದ ಅನಿವಾರ್ಯ ಕಡಿಮೆಯಾಗಿದೆ.</p>.<p>ಆದರೆ ಛಾಯಾಗ್ರಹಣವನ್ನೇ ವೃತ್ತಿ ಮಾಡಿಕೊಂಡು ಅಲೆದಾಡಿ ಅದ್ಭುತ ಚಿತ್ರಗಳನ್ನು ದಾಖಲಿಸುವ ದೊಡ್ಡ ಸಮೂಹವೇ ಇದೆ. ನಗರದಲ್ಲಿ ಆಗಾಗ ಇಂತಹ ಅವರೂಪದ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ.ಞ</p>.<p>ಸದ್ಯ ಕ್ರೆಸೆಂಟ್ ರಸ್ತೆಯಲ್ಲಿರುವ `ನಳಪಾದ್ಸ್', `ಹೋಟೆಲ್ ಬೆಂಗಳೂರು ಇಂಟರ್ನ್ಯಾಷನಲ್'ನಲ್ಲಿ ಇಂತಹ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಜುಲೈ 5ರವರೆಗೆ ಪ್ರದರ್ಶನ ನಡೆಯಲಿದೆ.</p>.<table align="right" border="1" cellpadding="1" cellspacing="1" style="width: 189px;"><tbody><tr><td style="width: 183px;"></td> </tr> <tr> <td style="width: 183px;"> ಸ್ನೇಹಲ್ ಅವರ ಮಾನವಾಸಕ್ತಿಯ ಚಿತ್ರ</td> </tr> <tr> <td style="width: 183px;"> </td></tr></tbody></table>.<table align="right" border="1" cellpadding="1" cellspacing="1" style="width: 189px;"><tbody><tr><td style="width: 183px;"></td> </tr> <tr> <td style="width: 183px;"> ಸಿದ್ದಾರ್ಥ್ ವೈದ್ಯನಾಥನ್ ಅವರ ಭಾವನಾತ್ಮಕ ಚಿತ್ರ</td> </tr> <tr> <td style="width: 183px;"> </td></tr></tbody></table>.<table align="right" border="1" cellpadding="1" cellspacing="1" style="width: 189px;"><tbody><tr><td style="width: 183px;"></td> </tr> <tr> <td style="width: 183px;"> ಪ್ರದೀಪ್ ಬಿ.ಆರ್. ಅವರ ಕಾಣಿಸಿ ನಿಸರ್ಗ</td> </tr> <tr> <td style="width: 183px;"> </td></tr></tbody></table>.<table align="right" border="1" cellpadding="1" cellspacing="1" style="width: 189px;"><tbody><tr><td style="width: 183px;"></td> </tr> <tr> <td style="width: 183px;"> ಸಂದೀಪ್ ರಾಜಶೇಖರನ್ ಅವರ ಕಡಿಮೆ ಬೆಳಕಿನ ಛಾಯಾಚಿತ್</td> </tr> </tbody> </table>.<p>ನಿಜಕ್ಕೂ ಪ್ರದರ್ಶನದಲ್ಲಿರುವ ಛಾಯಾಚಿತ್ರಗಳನ್ನು ನೋಡಿದರೆ ವರ್ಣಚಿತ್ರಗಳೇನೋ ಎಂಬ ಸಂಶಯ ಮೊದಲಿಗೆ ಮೂಡುತ್ತದೆ. ನಮ್ಮ ಸುತ್ತಲಿ</p>.<p>ನ ಜಗತ್ತು ಇಷ್ಟು ಅದ್ಭುತವಾಗಿದೆಯೇ ಎಂದು ಅಚ್ಚರಿಯೂ ಆಗುತ್ತದೆ. ಇವರಲ್ಲಿ ಬೇರೆ ಬೇರೆ ವೃತ್ತಿಯಲ್ಲಿದ್ದು ಹವ್ಯಾಸಕ್ಕಾಗಿ ಕ್ಯಾಮೆರಾ ಎತ್ತಿಕೊಂಡವರಿದ್ದಾರೆ. ಕ್ಯಾಮೆರಾ ಹಿಡಿಯುವುದನ್ನೇ ವೃತ್ತಿಯಾಗಿಸಿಕೊಂಡವರಿದ್ದಾರೆ. ಕ್ಯಾಮೆರಾ ಮೋಹದಿಂದ ವೃತ್ತಿ ತೊರೆದವರೂ ಇದ್ದಾರೆ. ಇವರೆಲ್ಲ ಈ ಜಗತ್ತನ್ನು ಅದ್ಭುತವಾಗಿ ಪರಿಭಾವಿಸಿಕೊಂಡಿದ್ದಾರೆ.</p>.<p>ಸಾಫ್ಟ್ವೇರ್ ಎಂಜಿನಿಯರ್ ಕೋದಂಡರಾಮ್ ಅವರಿಗೆ ಸುತ್ತಾಡುವುದು ಇಷ್ಟದ ಹವ್ಯಾಸ. ಮೊದಮೊದಲು ಹವ್ಯಾಸಕ್ಕೆಂದು ಕ್ಯಾಮರಾ ಹಿಡಿದ ಇವರು ನಂತರ ಅದನ್ನೇ ವೃತ್ತಿಯಾಗಿಸಿಕೊಂಡವರು. `ಛಾಯಾಚಿತ್ರಗಳು ಬರಿಗಣ್ಣಿಗೆ ಕಾಣದೆ ತಪ್ಪಿಸಿಕೊಂಡ ಅನೇಕ ದೃಶ್ಯಗಳನ್ನು ನೋಡುವ ದೊಡ್ಡ ಬಾಗಿಲು' ಅಂತಾರೆ ಕೋದಂಡರಾಂ.<br /> <br /> ಬೆಂಗಳೂರು ಮೂಲದ 21 ವರ್ಷದ ಸ್ನೇಹಲ್ಗೆ ವ್ಯಾಸಂಗಕ್ಕೆಂದು ಕೋಲ್ಕತ್ತಾಗೆ ಹೋಗುವ ಹಾದಿಯಲ್ಲಿ ಛಾಯಾಚಿತ್ರಗಳ ಪ್ರಭಾವದ ಬಗ್ಗೆ ಜ್ಞಾನೋದಯವಾಯಿತಂತೆ. `ನನ್ನ ಛಾಯಾಚಿತ್ರಗಳು ಕಥೆ ಹೇಳುತ್ತವೆ. ನಾನು ತೆಗೆಯುವ ಚಿತ್ರಗಳಲ್ಲಿ ನನ್ನ ಅನುಭವದ ಛಾಯೆ ಇರುತ್ತದೆ. ಹಾಗಾಗಿ ಹೆಚ್ಚಿನ ಚಿತ್ರಗಳು ಪ್ರವಾಸದ ಸಂದರ್ಭದಲ್ಲಿ ಬೀದಿಯಿಂದ ಹುಟ್ಟಿದ್ದು' ಎನ್ನುತ್ತಾರೆ ಅವರು.<br /> <br /> ಛಾಯಾಗ್ರಹಣ ನನ್ನ ಹವ್ಯಾಸ. ನನಗೆ ಫೋಟೊ ತೆಗೆದು ಎಲ್ಲರೊಂದಿಗೆ ಹಂಚಿಕೊಳ್ಳುವುದು ಖುಷಿಯ ಕೆಲಸ ಎನ್ನುವ ಮಧುಸೂದನ್, `ಛಾಯಾಗ್ರಹಣ ಒಂದು ಕಲೆ. ಯಾಕೆಂದರೆ ಒಂದು ಚಿತ್ರ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ನೀಡುತ್ತದೆ. ನೋಡುಗನ ದೃಷ್ಟಿಕೋನ ಮತ್ತು ಆತನ ಅಭಿರುಚಿ ಸೇರಿ ಬೇರೆಯೇ ಅರ್ಥ ಕೊಡುತ್ತದೆ' ಎನ್ನುತ್ತಾರೆ.<br /> <br /> ಎಂಜಿನಿಯರಿಂಗ್ ಪದವೀಧರ ಪ್ರದೀಪ್ ಎಚ್ಎಸ್ಬಿಸಿ ಬ್ಯಾಂಕ್ನಲ್ಲಿ ಉದ್ಯೋಗಿ. ಎಸ್ಎಲ್ಆರ್ಬಿಬಿ ಫೋರಂನಲ್ಲಿ ಛಾಯಾಗ್ರಹಣದ ಮೂಲ ಪಾಠ ಕಲಿತವರು. `ಛಾಯಾಗ್ರಹಣದ ಜೊತೆಗೆ ಚಾರಣ, ಸೈಕ್ಲಿಂಗ್, ಕ್ರಿಕೆಟ್ ಆಟಗಳ ಒಡನಾಟವೇ ನಾನು ಉತ್ತಮ ಫೋಟೋಗ್ರಾಫರ್ ಆಗಲು ಸಹಕಾರಿಯಾಗಿದೆ' ಎನ್ನುತ್ತಾರೆ ಪ್ರದೀಪ್.<br /> <br /> ಭಾರತದ ಪುರಾತನ ಇತಿಹಾಸ, ಶಿಲ್ಪಕಲೆಗಳಲ್ಲಿರುವ ಅಧ್ಯಾತ್ಮ ಮತ್ತು ಮಿಥ್ಯಗಳನ್ನು ಪ್ರಕಟಪಡಿಸುವ ಎಂಜಿನಿಯರಿಂಗ್ ಕೌಶಲಗಳನ್ನು ದಾಖಲಿಸುವುದು ಸಂದೀಪ್ಗೆ ಇಷ್ಟ. ಸೀಮಿತ ಬೆಳಕಿನಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಚಿತ್ರ ಸೆರೆ ಹಿಡಿಯುವುದು ಅವರ ವಿಶೇಷತೆ.<br /> <br /> `ನನಗೆ ನನ್ನ ಸುತ್ತಲಿನ ಜನರ ಭಾವನಾತ್ಮ ಕ ನಡವಳಿಕೆಗಳನ್ನು ಗಮನಿಸುವುದು ಇಷ್ಟ. ಈ ಕಲಿಕೆಗೆ ಫೋಟೊಗ್ರಫಿ ಉತ್ತಮ ದಾರಿ' ಎನ್ನುತ್ತಾರೆ ಸಿದ್ಧಾರ್ಥ್ ವೈದ್ಯನಾಥನ್.<br /> <strong>-ಹೇಮಾ ವೆಂಕಟ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>