<p><strong>ಗರುಡ ನಾಟ್ಯ ಸಂಘ: </strong>ಮಂಗಳವಾರ ಕಥಾಕೀರ್ತನಗಾರ್ತಿ ವರ್ಷಿಣಿ ವಿಜಯ್ ಅವರಿಂದ `ಧನುರ್ಭಂಜನ~ ಕಥಾಕೀರ್ತನ. ಹರಿಕಥಾ ಸಂಪ್ರದಾಯಕ್ಕೆ ಸೇರಿದ ಕುಟುಂಬದ ಹೊಸ ತಲೆಮಾರಿನ ಹರಿಕಥಾಗಾರ್ತಿ ವರ್ಷಿಣಿ ಅವರು ಖ್ಯಾತ ಹರಿಕಥಾಕಾರ ನಾದಗಂಧರ್ವ ಡಾ. ಟಿ.ವಿ. ಕರಿಗಿರಿಯಾಚಾರ್ ಅವರ ಮರಿಮಗಳು. ಅಜ್ಜ ಪ್ರೊ. ಟಿ.ಕೆ. ರಾಮಚಂದ್ರ ಅವರಿಂದ ಹರಿಕಥಾ ಕೀರ್ತನದಲ್ಲಿ ತರಬೇತಿ ಪಡೆದಿದ್ದಾರೆ. <br /> <br /> ಅಷ್ಟೇ ಅಲ್ಲ ಗೋಪಿನಾಥದಾಸ ನ್ಯಾಸ ಮೂಲಕ ಹತ್ತಾರು ಕಾರ್ಯಕ್ರಮ ನೀಡಿದ್ದಾರೆ.ಈಗ ಹೊಸ ತಲೆಮಾರಿನ ಯುವಕ- ಯುವತಿಯರಿಗೂ ಇಷ್ಟವಾಗುವ ರೀತಿಯಲ್ಲಿ ವಿಭಿನ್ನ ರೀತಿಯ ಕಥಾ ವಿವರಣೆಯ ಮೂಲಕ `ಧನುರ್ಭಂಜನ~ ಕೀರ್ತನೆ ನೀಡಲಿದ್ದಾರೆ.<br /> <br /> ಆಧುನಿಕ ಮಾಧ್ಯಮಗಳ ಸ್ಪರ್ಧೆಯ ನಡುವೆಯೂ ಕೀರ್ತನ ಕಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪದ ನಿಟ್ಟಿನಲ್ಲಿ ಇದು ಅವರ ಮೊದಲ ಹೆಜ್ಜೆ.<br /> ಅತಿಥಿಗಳು: ನಿರುಪಮಾ ಮತ್ತು ರಾಜೇಂದ್ರ, ವಿಮಲಾ ಸಿ. ಪದ್ಮನಾಭರಾವ್, ಮಿನಿರಾಜು.<br /> <br /> ಸ್ಥಳ: ಬೆಂಗಳೂರು ಇಂಟರ್ ನ್ಯಾಷನಲ್ ಅಕಾಡೆಮಿ<br /> (ಹಳೆ ಎನ್ಎಸ್ವಿಕೆ ಶಾಲೆ ಆವರಣ) 7 ನೇ ಹಂತ, ಜಯನಗರ. ಸಂಜೆ 6.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗರುಡ ನಾಟ್ಯ ಸಂಘ: </strong>ಮಂಗಳವಾರ ಕಥಾಕೀರ್ತನಗಾರ್ತಿ ವರ್ಷಿಣಿ ವಿಜಯ್ ಅವರಿಂದ `ಧನುರ್ಭಂಜನ~ ಕಥಾಕೀರ್ತನ. ಹರಿಕಥಾ ಸಂಪ್ರದಾಯಕ್ಕೆ ಸೇರಿದ ಕುಟುಂಬದ ಹೊಸ ತಲೆಮಾರಿನ ಹರಿಕಥಾಗಾರ್ತಿ ವರ್ಷಿಣಿ ಅವರು ಖ್ಯಾತ ಹರಿಕಥಾಕಾರ ನಾದಗಂಧರ್ವ ಡಾ. ಟಿ.ವಿ. ಕರಿಗಿರಿಯಾಚಾರ್ ಅವರ ಮರಿಮಗಳು. ಅಜ್ಜ ಪ್ರೊ. ಟಿ.ಕೆ. ರಾಮಚಂದ್ರ ಅವರಿಂದ ಹರಿಕಥಾ ಕೀರ್ತನದಲ್ಲಿ ತರಬೇತಿ ಪಡೆದಿದ್ದಾರೆ. <br /> <br /> ಅಷ್ಟೇ ಅಲ್ಲ ಗೋಪಿನಾಥದಾಸ ನ್ಯಾಸ ಮೂಲಕ ಹತ್ತಾರು ಕಾರ್ಯಕ್ರಮ ನೀಡಿದ್ದಾರೆ.ಈಗ ಹೊಸ ತಲೆಮಾರಿನ ಯುವಕ- ಯುವತಿಯರಿಗೂ ಇಷ್ಟವಾಗುವ ರೀತಿಯಲ್ಲಿ ವಿಭಿನ್ನ ರೀತಿಯ ಕಥಾ ವಿವರಣೆಯ ಮೂಲಕ `ಧನುರ್ಭಂಜನ~ ಕೀರ್ತನೆ ನೀಡಲಿದ್ದಾರೆ.<br /> <br /> ಆಧುನಿಕ ಮಾಧ್ಯಮಗಳ ಸ್ಪರ್ಧೆಯ ನಡುವೆಯೂ ಕೀರ್ತನ ಕಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪದ ನಿಟ್ಟಿನಲ್ಲಿ ಇದು ಅವರ ಮೊದಲ ಹೆಜ್ಜೆ.<br /> ಅತಿಥಿಗಳು: ನಿರುಪಮಾ ಮತ್ತು ರಾಜೇಂದ್ರ, ವಿಮಲಾ ಸಿ. ಪದ್ಮನಾಭರಾವ್, ಮಿನಿರಾಜು.<br /> <br /> ಸ್ಥಳ: ಬೆಂಗಳೂರು ಇಂಟರ್ ನ್ಯಾಷನಲ್ ಅಕಾಡೆಮಿ<br /> (ಹಳೆ ಎನ್ಎಸ್ವಿಕೆ ಶಾಲೆ ಆವರಣ) 7 ನೇ ಹಂತ, ಜಯನಗರ. ಸಂಜೆ 6.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>