ಮುದುಡಿದ ಮನಸ್ಸಿಗೆ ಒಂದಿಷ್ಟು ಖುಷಿ ತುಂಬಲು, ಪುನಃ ಬದುಕಿನ ಏರಿಳಿತಗಳನ್ನು ಎದುರಿಸುವ ಶಕ್ತಿಯನ್ನು ಕ್ರೋಢೀಕರಿಸಲು ಏನೆಲ್ಲಾ ಕಸರತ್ತು ನಡೆಸುತ್ತೇವೆ. ಪ್ರವಾಸ, ವ್ಯಾಯಾಮ, ಯೋಗ, ಮುದ್ದುಪ್ರಾಣಿಗಳು, ಶಾಪಿಂಗ್.. ಹೀಗೆ ಎಲ್ಲಾ ಸಲಹೆಗಳ ಸುರಿಮಳೆ ಸ್ನೇಹಿತರಿಂದ, ಬಂಧುಗಳಿಂದ ಆಗುವುದು ಸಹಜವೇ. ಮನೆಯೊಳಗೆ, ಮನಸ್ಸಿನೊಳಗೆ ಒಂದಿಷ್ಟು ಆಹ್ಲಾದ ತುಂಬಲು ಇನ್ನೊಂದು ಮಾರ್ಗವೂ ಇದೆ. ಅದೆಂದರೆ ಪರಿಮಳ ಸೂಸುವ ಗಿಡಗಳನ್ನು ಬೆಳೆಯುವುದು.