<p><strong>ಬೆಂಗಳೂರು:</strong> ‘ರಾಜಕಾಲುವೆ ಮೇಲೆ ನಿರ್ಮಾಣವಾದ ಇನ್ನೂ 885 ಸ್ವತ್ತುಗಳ ತೆರವು ಕಾರ್ಯ ಬಾಕಿಯಿದ್ದು, ಫೆಬ್ರುವರಿ ಅಂತ್ಯದೊಳಗೆ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ರಾಜಕಾಲುವೆ) ಸಿದ್ದೇಗೌಡ ಮಾಹಿತಿ ನೀಡಿದರು.</p>.<p>ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ಕಾಂಗ್ರೆಸ್ನ ಎಂ.ಕೆ. ಗುಣಶೇಖರ್ ಅವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.</p>.<p>‘ನೀರಿನ ಹರಿವಿಗೆ ಅಡಚಣೆ ಉಂಟುಮಾಡಿ ಪ್ರವಾಹಕ್ಕೆ ಕಾರಣವಾಗುತ್ತಿರುವ ಪ್ರದೇಶಗಳಲ್ಲಿ ಆದ್ಯತೆ ಮೇಲೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಳಿಕ ಮಿಕ್ಕ ಪ್ರದೇಶಗಳತ್ತ ಗಮನ ನೀಡಲಾಗುತ್ತದೆ’ ಎಂದು ತಿಳಿಸಿದರು.</p>.<p>‘ರಾಜ್ಯ ಸರ್ಕಾರ ನೀಡಿರುವ ₹ 800 ಕೋಟಿ ವಿಶೇಷ ಅನುದಾನದಲ್ಲಿ 150 ಕಿ.ಮೀ. ಉದ್ದದ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತದೆ. ಈ ಉದ್ದೇಶಕ್ಕಾಗಿ ಎಂಟು ಪ್ಯಾಕೇಜ್ ಮಾಡಿ ಗುತ್ತಿಗೆ ನೀಡಲಾಗುತ್ತಿದೆ. ನಗರದ ಎಲ್ಲ ವಿಧದ ರಾಜಕಾಲುವೆ ಜಾಲವನ್ನು ಸದೃಢಗೊಳಿಸಲು ಇನ್ನೂ ₹ 4,000 ಕೋಟಿ ಅಗತ್ಯವಿದೆ’ ಎಂದು ವಿವರಿಸಿದರು.</p>.<p>ಬಿಜೆಪಿಯ ಉಮೇಶ್ ಶೆಟ್ಟಿ, ‘ರಾಜಕಾಲುವೆ ನಿರ್ಮಾಣಕ್ಕೆ ಎಂಟು ಪ್ಯಾಕೇಜ್ ಮಾಡುವ ಬದಲು ಹಲವು ಪ್ಯಾಕೇಜ್ಗಳನ್ನಾಗಿ ಮಾಡಿ ಕೊಡಬೇಕಿತ್ತು. ಇದರಿಂದ ಕಾಮಗಾರಿ ಬೇಗ ಮುಗಿಯಲು ಅನುಕೂಲ ಆಗುತ್ತಿತ್ತು’ ಎಂದು ವಾದಿಸಿದರು.</p>.<p>‘ರಾಜಕಾಲುವೆಗಳ ಸ್ವರೂಪ ನೋಡಿಕೊಂಡೇ ಎಂಟು ಪ್ಯಾಕೇಜ್ ಮಾಡಲಾಗಿದೆ’ ಎಂದ ಮುಖ್ಯ ಎಂಜಿನಿಯರ್ ಅವರು, ‘ತೆರವು ಕಾರ್ಯಾಚರಣೆ ನಡೆಸಲಾಗಿದ್ದ ಅವನಿ ಶೃಂಗೇರಿನಗರದಲ್ಲಿ ಈಗಾಗಲೇ ಕಾಂಕ್ರೀಟ್ ಕಾಲುವೆ ನಿರ್ಮಾಣ ಮಾಡಲಾಗಿದೆ. ಮಿಕ್ಕ ಕಡೆಗಳಲ್ಲೂ ಕಾಲುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ’ ಎಂದು ತಿಳಿಸಿದರು.</p>.<p>‘ಅವನಿ ಶೃಂಗೇರಿನಗರದಲ್ಲಿ ರಾಜಕಾಲುವೆ ನಿರ್ಮಾಣ ಪೂರ್ಣಗೊಂಡಿಲ್ಲ. ಅಲ್ಲದೆ, ಮುಖ್ಯ ಎಂಜಿನಿಯರ್ ಅವರು ಮೊಬೈಲ್ ಸಂಪರ್ಕಕ್ಕೆ ಯಾವಾಗಲೂ ಲಭ್ಯರಾಗಲ್ಲ’ ಎಂದು ಬಿಜೆಪಿ ಸದಸ್ಯರು ಆಕ್ಷೇಪ ಎತ್ತಿದರು.</p>.<p>‘ರಾಜಕಾಲುವೆ ಒತ್ತುವರಿ ತೆರವು ಹಾಗೂ ಕಾಲುವೆ ಮರು ನಿರ್ಮಾಣದಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ಆಡಳಿತ ಪಕ್ಷದ ಭಾಗವಾಗಿದ್ದರಿಂದ ಹೆಚ್ಚಿನ ವಿಶ್ಲೇಷಣೆ ಮಾಡುವ ಸ್ಥಿತಿಯಲ್ಲಿ ನಾನಿಲ್ಲ’ ಎಂದು ಗುಣಶೇಖರ್ ಹೇಳಿದರು.</p>.<p><strong>ಗುತ್ತಿಗೆದಾರರ ಬಾಕಿ ಪಾವತಿ</strong></p>.<p>ಗುತ್ತಿಗೆದಾರರಿಗೆ 2015ರ ಮಾರ್ಚ್ವರೆಗೆ ₹ 229 ಕೋಟಿ ಬಾಕಿ ನೀಡಬೇಕಿದೆ. ಡಿಸೆಂಬರ್ನಲ್ಲಿ ಪ್ರತಿವಾರ ₹ 15 ಕೋಟಿ, ಜನವರಿಯಲ್ಲಿ ₹ 20 ಕೋಟಿ ಹಾಗೂ ಫೆಬ್ರುವರಿಯಲ್ಲಿ ಪ್ರತಿ ವಾರ ₹ 25 ಕೋಟಿಯಂತೆ ಪಾವತಿಸಿ, ಬಾಕಿ ತೀರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್ 20ರ ವೇಳೆಗೆ ಈ ವರ್ಷ ₹ 102 ಕೋಟಿ ಅಧಿಕ ತೆರಿಗೆ ಸಂಗ್ರಹವಾಗಿದೆ ಎಂದು ಹೇಳಿದರು.</p>.<p><strong>ನಕ್ಷೆ ಮಂಜೂರು ಮಾಡಲ್ಲ</strong></p>.<p>‘ರಾಷ್ಟ್ರೀಯ ಹಸಿರು ಪೀಠದ (ಎನ್ಜಿಟಿ) ಆದೇಶವನ್ನು ಪಾಲನೆ ಮಾಡಲೇಬೇಕಾಗಿರುವ ಕಾರಣ ಕೆರೆ, ರಾಜಕಾಲುವೆ ಸಂರಕ್ಷಿತ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನಕ್ಷೆ ಮಂಜೂರು ಮಾಡುತ್ತಿಲ್ಲ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.</p>.<p>‘ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಕೋರಿ, ರಾಜ್ಯ ಸರ್ಕಾರದ ಮೂಲಕ ಮನವಿ ಸಲ್ಲಿಸಲಾಗಿದೆ. ಆದೇಶದ ಅನುಷ್ಠಾನದಲ್ಲಿ ಹಲವು ಗೊಂದಲಗಳಿದ್ದು, ಸವಾಲನ್ನೂ ಎದುರಿಸಬೇಕಿದೆ. ಆದರೆ, ಖಾತೆ ಬದಲಾವಣೆಗೆ ಸದ್ಯದ ಸನ್ನಿವೇಶದಲ್ಲಿ ಯಾವುದೇ ತೊಂದರೆ ಇಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ರಾಜಕಾಲುವೆ ಮೇಲೆ ನಿರ್ಮಾಣವಾದ ಇನ್ನೂ 885 ಸ್ವತ್ತುಗಳ ತೆರವು ಕಾರ್ಯ ಬಾಕಿಯಿದ್ದು, ಫೆಬ್ರುವರಿ ಅಂತ್ಯದೊಳಗೆ ಕಾರ್ಯಾಚರಣೆ ಪೂರ್ಣಗೊಳ್ಳಲಿದೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ರಾಜಕಾಲುವೆ) ಸಿದ್ದೇಗೌಡ ಮಾಹಿತಿ ನೀಡಿದರು.</p>.<p>ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಮಂಗಳವಾರ ಕಾಂಗ್ರೆಸ್ನ ಎಂ.ಕೆ. ಗುಣಶೇಖರ್ ಅವರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.</p>.<p>‘ನೀರಿನ ಹರಿವಿಗೆ ಅಡಚಣೆ ಉಂಟುಮಾಡಿ ಪ್ರವಾಹಕ್ಕೆ ಕಾರಣವಾಗುತ್ತಿರುವ ಪ್ರದೇಶಗಳಲ್ಲಿ ಆದ್ಯತೆ ಮೇಲೆ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಳಿಕ ಮಿಕ್ಕ ಪ್ರದೇಶಗಳತ್ತ ಗಮನ ನೀಡಲಾಗುತ್ತದೆ’ ಎಂದು ತಿಳಿಸಿದರು.</p>.<p>‘ರಾಜ್ಯ ಸರ್ಕಾರ ನೀಡಿರುವ ₹ 800 ಕೋಟಿ ವಿಶೇಷ ಅನುದಾನದಲ್ಲಿ 150 ಕಿ.ಮೀ. ಉದ್ದದ ರಾಜಕಾಲುವೆ ನಿರ್ಮಾಣ ಮಾಡಲಾಗುತ್ತದೆ. ಈ ಉದ್ದೇಶಕ್ಕಾಗಿ ಎಂಟು ಪ್ಯಾಕೇಜ್ ಮಾಡಿ ಗುತ್ತಿಗೆ ನೀಡಲಾಗುತ್ತಿದೆ. ನಗರದ ಎಲ್ಲ ವಿಧದ ರಾಜಕಾಲುವೆ ಜಾಲವನ್ನು ಸದೃಢಗೊಳಿಸಲು ಇನ್ನೂ ₹ 4,000 ಕೋಟಿ ಅಗತ್ಯವಿದೆ’ ಎಂದು ವಿವರಿಸಿದರು.</p>.<p>ಬಿಜೆಪಿಯ ಉಮೇಶ್ ಶೆಟ್ಟಿ, ‘ರಾಜಕಾಲುವೆ ನಿರ್ಮಾಣಕ್ಕೆ ಎಂಟು ಪ್ಯಾಕೇಜ್ ಮಾಡುವ ಬದಲು ಹಲವು ಪ್ಯಾಕೇಜ್ಗಳನ್ನಾಗಿ ಮಾಡಿ ಕೊಡಬೇಕಿತ್ತು. ಇದರಿಂದ ಕಾಮಗಾರಿ ಬೇಗ ಮುಗಿಯಲು ಅನುಕೂಲ ಆಗುತ್ತಿತ್ತು’ ಎಂದು ವಾದಿಸಿದರು.</p>.<p>‘ರಾಜಕಾಲುವೆಗಳ ಸ್ವರೂಪ ನೋಡಿಕೊಂಡೇ ಎಂಟು ಪ್ಯಾಕೇಜ್ ಮಾಡಲಾಗಿದೆ’ ಎಂದ ಮುಖ್ಯ ಎಂಜಿನಿಯರ್ ಅವರು, ‘ತೆರವು ಕಾರ್ಯಾಚರಣೆ ನಡೆಸಲಾಗಿದ್ದ ಅವನಿ ಶೃಂಗೇರಿನಗರದಲ್ಲಿ ಈಗಾಗಲೇ ಕಾಂಕ್ರೀಟ್ ಕಾಲುವೆ ನಿರ್ಮಾಣ ಮಾಡಲಾಗಿದೆ. ಮಿಕ್ಕ ಕಡೆಗಳಲ್ಲೂ ಕಾಲುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ’ ಎಂದು ತಿಳಿಸಿದರು.</p>.<p>‘ಅವನಿ ಶೃಂಗೇರಿನಗರದಲ್ಲಿ ರಾಜಕಾಲುವೆ ನಿರ್ಮಾಣ ಪೂರ್ಣಗೊಂಡಿಲ್ಲ. ಅಲ್ಲದೆ, ಮುಖ್ಯ ಎಂಜಿನಿಯರ್ ಅವರು ಮೊಬೈಲ್ ಸಂಪರ್ಕಕ್ಕೆ ಯಾವಾಗಲೂ ಲಭ್ಯರಾಗಲ್ಲ’ ಎಂದು ಬಿಜೆಪಿ ಸದಸ್ಯರು ಆಕ್ಷೇಪ ಎತ್ತಿದರು.</p>.<p>‘ರಾಜಕಾಲುವೆ ಒತ್ತುವರಿ ತೆರವು ಹಾಗೂ ಕಾಲುವೆ ಮರು ನಿರ್ಮಾಣದಲ್ಲಿ ಪಾರದರ್ಶಕತೆ ಕಾಣುತ್ತಿಲ್ಲ. ಆಡಳಿತ ಪಕ್ಷದ ಭಾಗವಾಗಿದ್ದರಿಂದ ಹೆಚ್ಚಿನ ವಿಶ್ಲೇಷಣೆ ಮಾಡುವ ಸ್ಥಿತಿಯಲ್ಲಿ ನಾನಿಲ್ಲ’ ಎಂದು ಗುಣಶೇಖರ್ ಹೇಳಿದರು.</p>.<p><strong>ಗುತ್ತಿಗೆದಾರರ ಬಾಕಿ ಪಾವತಿ</strong></p>.<p>ಗುತ್ತಿಗೆದಾರರಿಗೆ 2015ರ ಮಾರ್ಚ್ವರೆಗೆ ₹ 229 ಕೋಟಿ ಬಾಕಿ ನೀಡಬೇಕಿದೆ. ಡಿಸೆಂಬರ್ನಲ್ಲಿ ಪ್ರತಿವಾರ ₹ 15 ಕೋಟಿ, ಜನವರಿಯಲ್ಲಿ ₹ 20 ಕೋಟಿ ಹಾಗೂ ಫೆಬ್ರುವರಿಯಲ್ಲಿ ಪ್ರತಿ ವಾರ ₹ 25 ಕೋಟಿಯಂತೆ ಪಾವತಿಸಿ, ಬಾಕಿ ತೀರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಡಿಸೆಂಬರ್ 20ರ ವೇಳೆಗೆ ಈ ವರ್ಷ ₹ 102 ಕೋಟಿ ಅಧಿಕ ತೆರಿಗೆ ಸಂಗ್ರಹವಾಗಿದೆ ಎಂದು ಹೇಳಿದರು.</p>.<p><strong>ನಕ್ಷೆ ಮಂಜೂರು ಮಾಡಲ್ಲ</strong></p>.<p>‘ರಾಷ್ಟ್ರೀಯ ಹಸಿರು ಪೀಠದ (ಎನ್ಜಿಟಿ) ಆದೇಶವನ್ನು ಪಾಲನೆ ಮಾಡಲೇಬೇಕಾಗಿರುವ ಕಾರಣ ಕೆರೆ, ರಾಜಕಾಲುವೆ ಸಂರಕ್ಷಿತ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ನಕ್ಷೆ ಮಂಜೂರು ಮಾಡುತ್ತಿಲ್ಲ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.</p>.<p>‘ಆದೇಶದಲ್ಲಿ ಮಾರ್ಪಾಡು ಮಾಡುವಂತೆ ಕೋರಿ, ರಾಜ್ಯ ಸರ್ಕಾರದ ಮೂಲಕ ಮನವಿ ಸಲ್ಲಿಸಲಾಗಿದೆ. ಆದೇಶದ ಅನುಷ್ಠಾನದಲ್ಲಿ ಹಲವು ಗೊಂದಲಗಳಿದ್ದು, ಸವಾಲನ್ನೂ ಎದುರಿಸಬೇಕಿದೆ. ಆದರೆ, ಖಾತೆ ಬದಲಾವಣೆಗೆ ಸದ್ಯದ ಸನ್ನಿವೇಶದಲ್ಲಿ ಯಾವುದೇ ತೊಂದರೆ ಇಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>