ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ 6 ತಿಂಗಳ ಬೆಳೆಯಾಗಿದ್ದು, ಬಿತ್ತನೆ ಮಾಡಿದ 2 ತಿಂಗಳು ಮಳೆ ಬರದೇ ಬೆಳವಣಿಗೆ ಕುಂಠಿತವಾಯಿತು. ನಂತರ ನಿರಂತರವಾಗಿ 1 ತಿಂಗಳು ಬಂದು ತೊಗರಿಗೆ ನೆಟೆ ರೋಗ, ಇನ್ನೊಂದು ಕಡೆ ಮಂಜು ಕಾಣಿಸಿಕೊಂಡು ತೊಗರಿ ಬೆಳವಣಿಗೆ ಕುಂಠಿತವಾಯಿತು. ನಂತರ ತೇವಾಂಶ ಕಡಿಮೆಯಾಗಿ ತೊಗರಿ ಬೆಳೆ ಹೂವು ಉದರಿಹೋಯಿತು. ಅದೆಲ್ಲ ಆದ ಮೇಲೆ ತೊಗರಿ ಗಿಡದಲ್ಲಿ ಅಲ್ಪಸ್ವಲ್ಪ ಕಾಯಿ ಉಳಿದಿದ್ದು, ಇನ್ನೂ ಕೆಲವು ಕಡೆ ಕಾಳು ಮಾಗುವ ಹಂತದಲ್ಲಿದೆ. ಆಗಲೇ ಗೊಡ್ಡು ರೋಗ ಕಾಣಿಸಿಕೊಂಡಿದ್ದು, ಇದರಿಂದ ರೈತರು ಕಷ್ಟಕ್ಕೀಡಾಗಿದ್ದಾರೆ.