<p><strong>ಗೋಣಿಕೊಪ್ಪಲು</strong>: ‘ಭತ್ತದ ಖಣಜ’ವಾದ ದಕ್ಷಿಣ ಕೊಡಗು ಈಗ ಹವಾಮಾನ ವೈಪರೀತ್ಯ, ಕಾರ್ಮಿಕರ ಸಮಸ್ಯೆ, ಬೆಲೆ ಕುಸಿತ... ಈ ರೀತಿಯ ಹತ್ತಾರು ಸಮಸ್ಯೆಗಳಿಂದ ನಲುಗುತ್ತಿದೆ; ಭತ್ತ ಬೆಳೆಯುವ ಪ್ರದೇಶವೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಸಂಬಾಳಿಸಿಕೊಂಡು ಭತ್ತದ ಕೃಷಿಯಲ್ಲಿ ಯಶಸ್ಸು ಕಂಡವರು ಬಾಳೆಲೆ ದೇವನೂರು ಗ್ರಾಮದ ಪೋಡಮಾಡ ಮೋಹನ್.</p>.<p>ಇವರು ಕೇವಲ 2.5 ಎಕರೆ ಭೂಮಿಯಲ್ಲಿ ಮಾತ್ರ ಭತ್ತದ ಕೃಷಿ ಕೈಗೊಂಡಿದ್ದಾರೆ. ಇಷ್ಟರಲ್ಲಿಯೇ ಸಮೃದ್ಧಿಯಾಗಿ ಬೆಳೆ ತೆಗೆಯುತ್ತಿದ್ದಾರೆ. ಬಾಳೆಲೆ ಭಾಗಕ್ಕೆ ಮಳೆ ಯಾವತ್ತೂ ಕಡಿಮೆ. ಹೀಗಾಗಿ, ಈ ಭಾಗದ ಜನರು ಕಾಫಿಗೆ ಕೊಡುವಷ್ಟು ಆದ್ಯತೆಯನ್ನು ಭತ್ತಕ್ಕೆ ಕೊಡಲಾರರು. ಇಂತಹ ಸನ್ನಿವೇಶದಲ್ಲಿ ಮೋಹನ್ ಅವರು ತೋಡುಗಳಲ್ಲಿ ಹರಿಯವ ನೀರನ್ನು ಬಳಸಿಕೊಂಡು ಉತ್ತಮ ಕೃಷಿ ಕೈಗೊಂಡಿದ್ದಾರೆ.</p>.<p>ಮಳೆಗಾಲದಲ್ಲಿ ಸಂಗ್ರಹಿಸಿಕೊಂಡು ಕೆರೆಗಳಿಗೆ ತುಂಬಿಸಿಕೊಳ್ಳುತ್ತಾರೆ. ಬಳಿಕ ಗದ್ದೆಯಲ್ಲಿ ನೀರು ಕಡಿಮೆಯಾದರೆ ಕೆರೆಯಿಂದ ನೀರು ಹಾಯಿಸಿಕೊಳ್ಳುತ್ತಾರೆ. ಹೀಗಾಗಿ, ಪ್ರತಿ ವರ್ಷವೂ ಗದ್ದೆಯನ್ನು ಖಾಲಿ ಬಿಡದೇ ಕೃಷಿಮಾಡಿ ಉತ್ತಮ ಬೆಳೆ ತೆಗೆಯುತ್ತಿದ್ದಾರೆ.</p>.<p>2015–16ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಂದು ಹೆಕ್ಟೇರ್ಗೆ 62.64 ಕ್ವಿಂಟಲ್ ಭತ್ತ ಬೆಳೆದು ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಇಳುವರಿ ಪಡೆದ ರೈತರಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಹೀಗಾಗಿ ಇವರನ್ನು ಕೃಷಿ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಿದೆ.</p>.<p>ಕಾಫಿ ತೋಟದ ನಡುವಿನ ಹಳ್ಳದಲ್ಲಿರುವ ಗದ್ದೆಗಳು ಯಾವಾಗಲೂ ನೀರಿನ ಪಸೆಯಿಂದ ಕೂಡಿರುತ್ತವೆ. ಗದ್ದೆ ಮಣ್ಣು ಕೂಡ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರದಿಂದ ಫಲವತ್ತಾಗಿದೆ. ಈ ವರ್ಷವೂ ಗದ್ದೆಯಲ್ಲಿ ಭತ್ತ ಸುಮಾರು 5 ಅಡಿಯಷ್ಟು ಎತ್ತರವಾಗಿ ಸಮೃದ್ಧಿಯಾಗಿ ಬೆಳೆದಿದೆ. ಗೊನೆಗಳು ಕೂಡ ನೀಳವಾಗಿದ್ದು ಕಾಳುಬಿಟ್ಟು ತಲೆದೂಗುತ್ತಿವೆ. ಭತ್ತದ ಗೊನೆ ಹಿಡಿದು ಮುದ್ದಿಸುವ ಮೋಹನ್ ಅದರೊಳಗೆ ಸುತ್ತುತ್ತಾ ಆನಂದಿಸುತ್ತಾರೆ.</p>.<p>ಮೋಹನ್ ಅವರು ಉಳುಮೆಗೆ ಟಿಲ್ಲರ್ ಬಳಸಿದರೂ ನಾಟಿ ಮತ್ತು ಕೊಯ್ಲನ್ನು ಕೈಯಿಂದಲೇ ಮಾಡಿಸುತ್ತಾರೆ. ಒಕ್ಕಣೆಯನ್ನೂ ಸಾಂಪ್ರದಾಯಿಕವಾಗಿ ಕಾರ್ಮಿಕರಿಂದಲೇ ಮಾಡಿಸುತ್ತಾರೆ. ಇದರಿಂದ ಹುಲ್ಲು ಮತ್ತು ಭತ್ತ ಎರಡರಲ್ಲಿಯೂ ಅವರಿಗೆ ಆದಾಯ ಬರುತ್ತಿದೆ.</p>.<p>ಭತ್ತದ ಹುಲ್ಲಿಗೂ ಉತ್ತಮ ಬೆಲೆ ಇರುವುದರಿಂದ ಹುಲ್ಲನ್ನು ಹಾಳು ಮಾಡುತ್ತಿಲ್ಲ. ಹೀಗಾಗಿ ಅವರಿಗೆ ಭತ್ತದ ಕೃಷಿ ಕೈಹಿಡಿದಿದೆ. ಲಾಭದಾಯಕ ಎನ್ನಿಸಿದೆ. ಜತೆಗೆ ಕಾಫಿ, ಅಡಿಕೆ, ತೆಂಗು, ಬಾಳೆ, ಸಪೋಟ ಮೊದಲಾದವುಗಳನ್ನು ಅಚುಕಟ್ಟಾಗಿ ಬೆಳೆದಿದ್ದಾರೆ.</p>.<p>ಕಾಫಿ ತೋಟವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಭತ್ತದ ಗದ್ದೆಯ ಮಧ್ಯದಲ್ಲಿರುವ ವಿಶಾಲವಾದ ಕೆರೆಯಲ್ಲಿ ಸಾವಿರಾರು ಮೀನುಗಳನ್ನು ಸಾಕಿದ್ದಾರೆ. ಪಪ್ಪಾಯಿ, ಸಪೋಟ, ಸೀಬೆ ಮೊದಲಾದ ಹಣ್ಣುಗಳಿರುವ ಇವರ ತೋಟದಲ್ಲಿ ಪಕ್ಷಿಗಳ ಕಲರವ ಕಿವಿಗಡಚಿಕ್ಕುತ್ತದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಣಿಕೊಪ್ಪಲು</strong>: ‘ಭತ್ತದ ಖಣಜ’ವಾದ ದಕ್ಷಿಣ ಕೊಡಗು ಈಗ ಹವಾಮಾನ ವೈಪರೀತ್ಯ, ಕಾರ್ಮಿಕರ ಸಮಸ್ಯೆ, ಬೆಲೆ ಕುಸಿತ... ಈ ರೀತಿಯ ಹತ್ತಾರು ಸಮಸ್ಯೆಗಳಿಂದ ನಲುಗುತ್ತಿದೆ; ಭತ್ತ ಬೆಳೆಯುವ ಪ್ರದೇಶವೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಸಂಬಾಳಿಸಿಕೊಂಡು ಭತ್ತದ ಕೃಷಿಯಲ್ಲಿ ಯಶಸ್ಸು ಕಂಡವರು ಬಾಳೆಲೆ ದೇವನೂರು ಗ್ರಾಮದ ಪೋಡಮಾಡ ಮೋಹನ್.</p>.<p>ಇವರು ಕೇವಲ 2.5 ಎಕರೆ ಭೂಮಿಯಲ್ಲಿ ಮಾತ್ರ ಭತ್ತದ ಕೃಷಿ ಕೈಗೊಂಡಿದ್ದಾರೆ. ಇಷ್ಟರಲ್ಲಿಯೇ ಸಮೃದ್ಧಿಯಾಗಿ ಬೆಳೆ ತೆಗೆಯುತ್ತಿದ್ದಾರೆ. ಬಾಳೆಲೆ ಭಾಗಕ್ಕೆ ಮಳೆ ಯಾವತ್ತೂ ಕಡಿಮೆ. ಹೀಗಾಗಿ, ಈ ಭಾಗದ ಜನರು ಕಾಫಿಗೆ ಕೊಡುವಷ್ಟು ಆದ್ಯತೆಯನ್ನು ಭತ್ತಕ್ಕೆ ಕೊಡಲಾರರು. ಇಂತಹ ಸನ್ನಿವೇಶದಲ್ಲಿ ಮೋಹನ್ ಅವರು ತೋಡುಗಳಲ್ಲಿ ಹರಿಯವ ನೀರನ್ನು ಬಳಸಿಕೊಂಡು ಉತ್ತಮ ಕೃಷಿ ಕೈಗೊಂಡಿದ್ದಾರೆ.</p>.<p>ಮಳೆಗಾಲದಲ್ಲಿ ಸಂಗ್ರಹಿಸಿಕೊಂಡು ಕೆರೆಗಳಿಗೆ ತುಂಬಿಸಿಕೊಳ್ಳುತ್ತಾರೆ. ಬಳಿಕ ಗದ್ದೆಯಲ್ಲಿ ನೀರು ಕಡಿಮೆಯಾದರೆ ಕೆರೆಯಿಂದ ನೀರು ಹಾಯಿಸಿಕೊಳ್ಳುತ್ತಾರೆ. ಹೀಗಾಗಿ, ಪ್ರತಿ ವರ್ಷವೂ ಗದ್ದೆಯನ್ನು ಖಾಲಿ ಬಿಡದೇ ಕೃಷಿಮಾಡಿ ಉತ್ತಮ ಬೆಳೆ ತೆಗೆಯುತ್ತಿದ್ದಾರೆ.</p>.<p>2015–16ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಂದು ಹೆಕ್ಟೇರ್ಗೆ 62.64 ಕ್ವಿಂಟಲ್ ಭತ್ತ ಬೆಳೆದು ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಇಳುವರಿ ಪಡೆದ ರೈತರಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ಹೀಗಾಗಿ ಇವರನ್ನು ಕೃಷಿ ಇಲಾಖೆ ಪ್ರಶಸ್ತಿ ನೀಡಿ ಗೌರವಿಸಿದೆ.</p>.<p>ಕಾಫಿ ತೋಟದ ನಡುವಿನ ಹಳ್ಳದಲ್ಲಿರುವ ಗದ್ದೆಗಳು ಯಾವಾಗಲೂ ನೀರಿನ ಪಸೆಯಿಂದ ಕೂಡಿರುತ್ತವೆ. ಗದ್ದೆ ಮಣ್ಣು ಕೂಡ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರದಿಂದ ಫಲವತ್ತಾಗಿದೆ. ಈ ವರ್ಷವೂ ಗದ್ದೆಯಲ್ಲಿ ಭತ್ತ ಸುಮಾರು 5 ಅಡಿಯಷ್ಟು ಎತ್ತರವಾಗಿ ಸಮೃದ್ಧಿಯಾಗಿ ಬೆಳೆದಿದೆ. ಗೊನೆಗಳು ಕೂಡ ನೀಳವಾಗಿದ್ದು ಕಾಳುಬಿಟ್ಟು ತಲೆದೂಗುತ್ತಿವೆ. ಭತ್ತದ ಗೊನೆ ಹಿಡಿದು ಮುದ್ದಿಸುವ ಮೋಹನ್ ಅದರೊಳಗೆ ಸುತ್ತುತ್ತಾ ಆನಂದಿಸುತ್ತಾರೆ.</p>.<p>ಮೋಹನ್ ಅವರು ಉಳುಮೆಗೆ ಟಿಲ್ಲರ್ ಬಳಸಿದರೂ ನಾಟಿ ಮತ್ತು ಕೊಯ್ಲನ್ನು ಕೈಯಿಂದಲೇ ಮಾಡಿಸುತ್ತಾರೆ. ಒಕ್ಕಣೆಯನ್ನೂ ಸಾಂಪ್ರದಾಯಿಕವಾಗಿ ಕಾರ್ಮಿಕರಿಂದಲೇ ಮಾಡಿಸುತ್ತಾರೆ. ಇದರಿಂದ ಹುಲ್ಲು ಮತ್ತು ಭತ್ತ ಎರಡರಲ್ಲಿಯೂ ಅವರಿಗೆ ಆದಾಯ ಬರುತ್ತಿದೆ.</p>.<p>ಭತ್ತದ ಹುಲ್ಲಿಗೂ ಉತ್ತಮ ಬೆಲೆ ಇರುವುದರಿಂದ ಹುಲ್ಲನ್ನು ಹಾಳು ಮಾಡುತ್ತಿಲ್ಲ. ಹೀಗಾಗಿ ಅವರಿಗೆ ಭತ್ತದ ಕೃಷಿ ಕೈಹಿಡಿದಿದೆ. ಲಾಭದಾಯಕ ಎನ್ನಿಸಿದೆ. ಜತೆಗೆ ಕಾಫಿ, ಅಡಿಕೆ, ತೆಂಗು, ಬಾಳೆ, ಸಪೋಟ ಮೊದಲಾದವುಗಳನ್ನು ಅಚುಕಟ್ಟಾಗಿ ಬೆಳೆದಿದ್ದಾರೆ.</p>.<p>ಕಾಫಿ ತೋಟವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಭತ್ತದ ಗದ್ದೆಯ ಮಧ್ಯದಲ್ಲಿರುವ ವಿಶಾಲವಾದ ಕೆರೆಯಲ್ಲಿ ಸಾವಿರಾರು ಮೀನುಗಳನ್ನು ಸಾಕಿದ್ದಾರೆ. ಪಪ್ಪಾಯಿ, ಸಪೋಟ, ಸೀಬೆ ಮೊದಲಾದ ಹಣ್ಣುಗಳಿರುವ ಇವರ ತೋಟದಲ್ಲಿ ಪಕ್ಷಿಗಳ ಕಲರವ ಕಿವಿಗಡಚಿಕ್ಕುತ್ತದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>