ಸರಿ: ಕೊರೊನಾ ಕಾರಣವಾಗಿ ದೇಶದಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಿದ್ದರಿಂದ ಮದ್ಯಪ್ರಿಯರು ಭಾರೀ ಬೇಸರ
ದಲ್ಲಿದ್ದಾರೆ. ಇವರ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಹೊಡೆಯಲು ಖದೀಮರು ಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರದ ನಾಗಪುರದ ವಿಳಾಸವಿದ್ದ ಈ ಮದ್ಯದಂಗಡಿಗಳು ಅಲ್ಲಿನ ಪೊಲೀಸರ ನಿದ್ದೆಗೆಡಿಸಿದ್ದವು. ಆದರೀಗ ಖದೀಮರ ಕಳ್ಳಾಟ ಬಯಲು ಮಾಡಿದ್ದಾರೆ. ಒಡಿಶಾ, ಮಹಾರಾಷ್ಟ್ರದ ಮದ್ಯದಂಗಡಿಗಳಿಗೆ ಒಂದೇ ಸಂಖ್ಯೆಯ ಪೇಮೆಂಟ್ ಲಿಂಕ್ ನೀಡಲಾಗಿದ್ದನ್ನು ಅವರು ಪತ್ತೆ ಮಾಡಿದ್ದಾರೆ. ಇವು ದಾರಿ ತಪ್ಪಿಸುವ ಸಂದೇಶಗಳಾಗಿದ್ದು, ವಂಚನೆಗೆ ಒಳಗಾಗದಿರಿ ಎಂದು ಪೊಲೀಸರು ಎಚ್ಚರಿಸಿದ್ದಾರೆ. ಈ ನಕಲಿ ಜಾಹೀರಾತುಗಳ ಸ್ಕ್ರೀನ್ಶಾಟ್ಗಳನ್ನು ಪೊಲೀಸರು ಟ್ವಿಟರ್ನಲ್ಲೂ ಲಗತ್ತಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ನಲ್ಲಿ ಈ ಬಗ್ಗೆ ವರದಿಯಾಗಿದೆ.