<p><strong>ಜೈಪುರ</strong>: ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಬಾಲಕನ ಕಾಲಿಗೆ ಇಲಿ ಕಚ್ಚಿದ್ದರಿಂದ ಮೃತಪಟ್ಟಿದ್ದಾನೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.</p><p>ರಾಜ್ಯ ಕ್ಯಾನ್ಸರ್ ಸಂಸ್ಥೆಯಲ್ಲಿ (ಸವಾಯಿ ಮಾನ್ಸಿಂಗ್ ಮೆಡಿಕಲ್ ಕಾಲೇಜು) ಡಿ. 11ರಂದು ಬಾಲಕನನ್ನು ದಾಖಲಿಸಲಾಗಿತ್ತು. ಆದರೆ ಬಾಲಕ ಇಲಿ ಕಡಿತದಿಂದ ಮೃತಪಟ್ಟಿದ್ದಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ತನಿಖೆಗೆ ರಾಜಸ್ಥಾನ ಸರ್ಕಾರ ಸಮಿತಿ ರಚನೆ ಮಾಡಿದೆ.</p>.ಚಿತ್ರದುರ್ಗ: ಇಲಿ, ಹೆಗ್ಗಣಗಳ ಆಶ್ರಯತಾಣವಾದ ವಾಲ್ಮೀಕಿ ಭವನ.<p>‘ಬಾಲಕನಿಗೆ ಜ್ವರ ಹಾಗೂ ನ್ಯುಮೋನಿಯಾ ಇತ್ತು. ಅತಿಯಾದ ಸೋಂಕು ಸೆಪ್ಟಿಸೆಮಿಯಾ ಆಘಾತದಿಂದ ಶುಕ್ರವಾರ ಮೃತಪಟ್ಟಿದ್ದಾನೆ’ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಡಾ. ಸಂದೀಪ್ ಜಸುಜಾ ತಿಳಿಸಿದ್ದಾರೆ.</p><p>ಘಟನೆ ಸಂಬಂಧ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ಅಂಬರೀಷ್ ಕುಮಾರ್ ಅವರು, ಸವಾಯಿ ಮಾನ್ಸಿಂಗ್ ಮೆಡಿಕಲ್ ಕಾಲೇಜ್ನ ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.</p>.ಅಡುಗೆ ಎಣ್ಣೆ ಪ್ಯಾಕೇಟ್ನಲ್ಲಿ ಸತ್ತ ಇಲಿ!.<p>ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಬಾಲಕ ಅಳಲು ಪ್ರಾರಂಭಿಸಿದ್ದ. ಕುಟುಂಬ ಸದಸ್ಯರು ಹೊದಿಕೆಯನ್ನು ತೆಗೆದಾಗ, ಇಲಿ ಕಡಿತದಿಂದ ಕಾಲ್ಬೆರಳುಗಳಿಂದ ರಕ್ತ ಸೋರುವುದು ಕಂಡಿತ್ತು.</p><p>ಕೂಡಲೇ ಅಲ್ಲಿದ್ದ ನರ್ಸ್ಗೆ ಮಾಹಿತಿ ನೀಡಿದ್ದು, ಪ್ರಥಮ ಚಿಕಿತ್ಸೆ ನೀಡಿ ಕಾಲಿಗೆ ಬ್ಯಾಂಡೇಜ್ ಹಾಕಿದ್ದಾರೆ. </p><p>ಇಲಿ ಕಚ್ಚಿದ ಮಾಹಿತಿ ಬಂದ ಕೂಡಲೇ ಮಗುವಿಗೆ ಚಿಕಿತ್ಸೆ ನೀಡಿದ್ದೇವೆ ಎಂದು ಜಸುಜಾ ತಿಳಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಶುಚಿತ್ವ ಕಾಪಾಡಲು ನಿರ್ದೇಶನವೂ ನೀಡಲಾಗಿದೆ ಎಂದು ಹೇಳಿದ್ದಾರೆ.</p> .ಗುಡಿಬಂಡೆ: ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರದಲ್ಲಿ ಸತ್ತ ಇಲಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ</strong>: ಇಲ್ಲಿನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದ 10 ವರ್ಷದ ಬಾಲಕನ ಕಾಲಿಗೆ ಇಲಿ ಕಚ್ಚಿದ್ದರಿಂದ ಮೃತಪಟ್ಟಿದ್ದಾನೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.</p><p>ರಾಜ್ಯ ಕ್ಯಾನ್ಸರ್ ಸಂಸ್ಥೆಯಲ್ಲಿ (ಸವಾಯಿ ಮಾನ್ಸಿಂಗ್ ಮೆಡಿಕಲ್ ಕಾಲೇಜು) ಡಿ. 11ರಂದು ಬಾಲಕನನ್ನು ದಾಖಲಿಸಲಾಗಿತ್ತು. ಆದರೆ ಬಾಲಕ ಇಲಿ ಕಡಿತದಿಂದ ಮೃತಪಟ್ಟಿದ್ದಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ತನಿಖೆಗೆ ರಾಜಸ್ಥಾನ ಸರ್ಕಾರ ಸಮಿತಿ ರಚನೆ ಮಾಡಿದೆ.</p>.ಚಿತ್ರದುರ್ಗ: ಇಲಿ, ಹೆಗ್ಗಣಗಳ ಆಶ್ರಯತಾಣವಾದ ವಾಲ್ಮೀಕಿ ಭವನ.<p>‘ಬಾಲಕನಿಗೆ ಜ್ವರ ಹಾಗೂ ನ್ಯುಮೋನಿಯಾ ಇತ್ತು. ಅತಿಯಾದ ಸೋಂಕು ಸೆಪ್ಟಿಸೆಮಿಯಾ ಆಘಾತದಿಂದ ಶುಕ್ರವಾರ ಮೃತಪಟ್ಟಿದ್ದಾನೆ’ ಎಂದು ಆಸ್ಪತ್ರೆಯ ವ್ಯವಸ್ಥಾಪಕ ಡಾ. ಸಂದೀಪ್ ಜಸುಜಾ ತಿಳಿಸಿದ್ದಾರೆ.</p><p>ಘಟನೆ ಸಂಬಂಧ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ಅಂಬರೀಷ್ ಕುಮಾರ್ ಅವರು, ಸವಾಯಿ ಮಾನ್ಸಿಂಗ್ ಮೆಡಿಕಲ್ ಕಾಲೇಜ್ನ ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.</p>.ಅಡುಗೆ ಎಣ್ಣೆ ಪ್ಯಾಕೇಟ್ನಲ್ಲಿ ಸತ್ತ ಇಲಿ!.<p>ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಬಾಲಕ ಅಳಲು ಪ್ರಾರಂಭಿಸಿದ್ದ. ಕುಟುಂಬ ಸದಸ್ಯರು ಹೊದಿಕೆಯನ್ನು ತೆಗೆದಾಗ, ಇಲಿ ಕಡಿತದಿಂದ ಕಾಲ್ಬೆರಳುಗಳಿಂದ ರಕ್ತ ಸೋರುವುದು ಕಂಡಿತ್ತು.</p><p>ಕೂಡಲೇ ಅಲ್ಲಿದ್ದ ನರ್ಸ್ಗೆ ಮಾಹಿತಿ ನೀಡಿದ್ದು, ಪ್ರಥಮ ಚಿಕಿತ್ಸೆ ನೀಡಿ ಕಾಲಿಗೆ ಬ್ಯಾಂಡೇಜ್ ಹಾಕಿದ್ದಾರೆ. </p><p>ಇಲಿ ಕಚ್ಚಿದ ಮಾಹಿತಿ ಬಂದ ಕೂಡಲೇ ಮಗುವಿಗೆ ಚಿಕಿತ್ಸೆ ನೀಡಿದ್ದೇವೆ ಎಂದು ಜಸುಜಾ ತಿಳಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಶುಚಿತ್ವ ಕಾಪಾಡಲು ನಿರ್ದೇಶನವೂ ನೀಡಲಾಗಿದೆ ಎಂದು ಹೇಳಿದ್ದಾರೆ.</p> .ಗುಡಿಬಂಡೆ: ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರದಲ್ಲಿ ಸತ್ತ ಇಲಿ!.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>