<figcaption>""</figcaption>.<p><strong>ನವದೆಹಲಿ:</strong> ದೇಶದ 14 ಜಿಲ್ಲೆಗಳಲ್ಲಿ ಕೊರೊನಾ ವೈರಾಣು ಪಸರಿಸುವಿಕೆ ನಿಯಂತ್ರಿಸುವುದು ಪಿಡುಗಿನ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಎಂಬುದು ಈಗ ಇರುವ ಚಿತ್ರಣ. ಸೋಂಕಿನ ಶೇ 64ರಷ್ಟು ಪ್ರಕರಣಗಳು ಈ ಜಿಲ್ಲೆಗಳಲ್ಲಿಯೇ ಇವೆ. ಈ 14 ಜಿಲ್ಲೆಗಳಲ್ಲಿ ಸೋಂಕು ಪ್ರಸರಣ ತಡೆ ಚಟುವಟಿಕೆಯನ್ನು ಗಟ್ಟಿಗೊಳಿಸಬೇಕಿದೆ ಎಂಬುದರತ್ತ ಸರ್ಕಾರದ ಹೊಸ ಅಂಕಿ ಅಂಶಗಳು ಬೆಳಕು ಚೆಲ್ಲಿವೆ.</p>.<p>ಈ 14 ಜಿಲ್ಲೆಗಳ ಪೈಕಿ, ಐದು ದೊಡ್ಡ ನಗರಗಳಾದ ದೆಹಲಿ, ಪುಣೆ, ಮುಂಬೈ, ಅಹಮದಾಬಾದ್ ಮತ್ತು ಚೆನ್ನೈನಲ್ಲಿ ಸೋಂಕಿತರ ಪ್ರಮಾಣವು ಶೇ 47ರಷ್ಟಿದೆ.</p>.<p>ಈ ಪಟ್ಟಿಯಲ್ಲಿರುವ ದಕ್ಷಿಣದ ನಗರಗಳೆಂದರೆ ಚೆನ್ನೈ ಮತ್ತು ಹೈದರಾಬಾದ್ ಮಾತ್ರ. ದೇಶದ ಒಟ್ಟು ಸೋಂಕಿತರಲ್ಲಿ ಶೇ 7ರಷ್ಟು ಮಂದಿ ಮಾತ್ರ ಇಲ್ಲಿ ಇದ್ದಾರೆ. ಮಹಾರಾಷ್ಟ್ರದ ಒಟ್ಟು ಪ್ರಕರಣಗಳಲ್ಲಿ ಮುಂಬೈ ನಗರದ ಪಾಲು ಶೇ 61ರಷ್ಟು. ಗುಜರಾತ್ನ ಪ್ರಕರಣಗಳಲ್ಲಿ ಶೇ 71ರಷ್ಟು ಅಹಮದಾಬಾದ್ನಲ್ಲಿಯೇ ಇವೆ.</p>.<p>ಕೋವಿಡ್ ನಿಯಂತ್ರಣಕ್ಕೆ ರಾಜ್ಯಗಳು ಅನುಸರಿಸಿದ ಕಾರ್ಯತಂತ್ರವನ್ನು ಪರಿಶೀಲಿಸಲು ಕೇಂದ್ರ ತಂಡವು 20 ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಆ 20 ಜಿಲ್ಲೆಗಳಲ್ಲಿ ನಿರ್ಣಾಯಕವಾದ ಈ 14 ಜಿಲ್ಲೆಗಳೂ ಸೇರಿದ್ದವು.</p>.<p>ಕೆಲವು ನಗರಗಳಲ್ಲಿ ಪ್ರಕರಣಗಳು ಅತಿ ವೇಗವಾಗಿ ದ್ವಿಗುಣವಾಗುತ್ತಿವೆ ಎಂಬುದೂ ಕಳವಳಕಾರಿ ಅಂಶ. ಚೆನ್ನೈಯಲ್ಲಿ 6.2 ದಿನ, ದೆಹಲಿಯಲ್ಲಿ 7.1 ದಿನ, ಪುಣೆಯಲ್ಲಿ 11 ದಿನ ಮತ್ತು ಅಹಮದಾಬಾದ್ನಲ್ಲಿ 7.1 ದಿನದಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿವೆ. ರಾಷ್ಟ್ರಮಟ್ಟದಲ್ಲಿ ಪ್ರಕರಣ ದ್ವಿಗುಣಗೊಳ್ಳುವ ಅವಧಿ 10 ದಿನ.</p>.<p>ಈ ಜಿಲ್ಲೆಗಳು ಹೆಚ್ಚು ಅಪಾಯದ ಸ್ಥಿತಿಯಲ್ಲಿ ಇರುವುದರಿಂದ ಕೇಂದ್ರದ ಇನ್ನೊಂದು ತಂಡ ಈ ಜಿಲ್ಲೆಗಳಿಗೆ ಭೇಟಿ ನೀಡಲಿದೆ.</p>.<p>ಕೆಲದಿನಗಳ ಹಿಂದೆ ಈ ಪಟ್ಟಿಯಲ್ಲಿ ವಡೋದರ ಮತ್ತು ಕರ್ನೂಲ್ ಕೂಡ ಇದ್ದವು. ಆದರೆ, ಇಲ್ಲಿನ ಪರಿಸ್ಥಿತಿ ಸುಧಾರಿಸಿದೆ. ಕೋಲ್ಕತ್ತ ಈ ಪಟ್ಟಿಗೆ ಹೊಸ ಸೇರ್ಪಡೆ. ಅಲ್ಲಿ ಮರಣ ಪ್ರಮಾಣ ಶೇ 10ರಷ್ಟಿರುವುದು ಕಳವಳವನ್ನು ಹೆಚ್ಚಿಸಿದೆ.</p>.<p class="Subhead">14 ಜಿಲ್ಲೆ ಯಾವುವು?: ಮುಂಬೈ, ದೆಹಲಿ, ಆಗ್ರಾ, ಅಹಮದಾಬಾದ್, ಪುಣೆ, ಇಂದೋರ್, ಠಾಣೆ, ಜೈಪುರ, ಜೋಧಪುರ, ಸೂರತ್, ಕೋಲ್ಕತ್ತ, ಭೋಪಾಲ್, ಹೈದರಾಬಾದ್, ಚೆನ್ನೈ.</p>.<p class="Subhead"><strong>‘ಯಾವುದೇ ಪರಿಸ್ಥಿತಿಗೂ ದೇಶ ಸಜ್ಜು’</strong></p>.<p>ಕೋವಿಡ್ಗೆ ಸಂಬಂಧಿಸಿ ಯಾವುದೇ ಪರಿಸ್ಥಿತಿ ಸೃಷ್ಟಿಯಾದರೂ ಎದುರಿಸಲು ದೇಶ ಸಜ್ಜಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಶನಿವಾರ ಒಂದೇ ದಿನ ಸೋಂಕು ಪ್ರಕರಣಗಳಲ್ಲಿ 3,320 ಏರಿಕೆ<br />ಯಾಗಿದೆ. ಏರಿಕೆಯು ಮೂರು ಸಾವಿರಕ್ಕಿಂತ ಹೆಚ್ಚಾಗಿರುವುದು ಸತತ 3ನೇ ದಿನ. ಪ್ರಕರಣಗಳ ಒಟ್ಟು ಸಂಖ್ಯೆ 59,662 ಎಂದು ಆರೋಗ್ಯ ಇಲಾಖೆ ಹೇಳಿದೆ. ಆದರೆ, ರಾಜ್ಯಗಳು ಕೊಟ್ಟ ಅಂಕಿಅಂಶಗಳನ್ನು ಲೆಕ್ಕ ಹಾಕಿ ಪಿಟಿಐ ಕೊಟ್ಟ ಮಾಹಿತಿ ಪ್ರಕಾರ, ಒಟ್ಟು ಸಂಖ್ಯೆಯು 62,513ಕ್ಕೆ ಏರಿಕೆಯಾಗಿದೆ.</p>.<p><strong>84,600: </strong>ಶನಿವಾರ ನಡೆಸಲಾದ ಪರೀಕ್ಷೆಗಳು</p>.<p><strong>95,000: </strong>ಒಂದು ದಿನದ ಪರೀಕ್ಷೆಯ ಸಾಮರ್ಥ್ಯ</p>.<p><strong>7,645: </strong>ದೇಶದಲ್ಲಿ ಈಗ ಇರುವ ಕ್ವಾರಂಟೈನ್ ಕೇಂದ್ರಗಳು</p>.<p><strong>453: </strong>ಕೋವಿಡ್ ಪರೀಕ್ಷೆಯ ಪ್ರಯೋಗಾಲಯಗಳ ಸಂಖ್ಯೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ನವದೆಹಲಿ:</strong> ದೇಶದ 14 ಜಿಲ್ಲೆಗಳಲ್ಲಿ ಕೊರೊನಾ ವೈರಾಣು ಪಸರಿಸುವಿಕೆ ನಿಯಂತ್ರಿಸುವುದು ಪಿಡುಗಿನ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ಎಂಬುದು ಈಗ ಇರುವ ಚಿತ್ರಣ. ಸೋಂಕಿನ ಶೇ 64ರಷ್ಟು ಪ್ರಕರಣಗಳು ಈ ಜಿಲ್ಲೆಗಳಲ್ಲಿಯೇ ಇವೆ. ಈ 14 ಜಿಲ್ಲೆಗಳಲ್ಲಿ ಸೋಂಕು ಪ್ರಸರಣ ತಡೆ ಚಟುವಟಿಕೆಯನ್ನು ಗಟ್ಟಿಗೊಳಿಸಬೇಕಿದೆ ಎಂಬುದರತ್ತ ಸರ್ಕಾರದ ಹೊಸ ಅಂಕಿ ಅಂಶಗಳು ಬೆಳಕು ಚೆಲ್ಲಿವೆ.</p>.<p>ಈ 14 ಜಿಲ್ಲೆಗಳ ಪೈಕಿ, ಐದು ದೊಡ್ಡ ನಗರಗಳಾದ ದೆಹಲಿ, ಪುಣೆ, ಮುಂಬೈ, ಅಹಮದಾಬಾದ್ ಮತ್ತು ಚೆನ್ನೈನಲ್ಲಿ ಸೋಂಕಿತರ ಪ್ರಮಾಣವು ಶೇ 47ರಷ್ಟಿದೆ.</p>.<p>ಈ ಪಟ್ಟಿಯಲ್ಲಿರುವ ದಕ್ಷಿಣದ ನಗರಗಳೆಂದರೆ ಚೆನ್ನೈ ಮತ್ತು ಹೈದರಾಬಾದ್ ಮಾತ್ರ. ದೇಶದ ಒಟ್ಟು ಸೋಂಕಿತರಲ್ಲಿ ಶೇ 7ರಷ್ಟು ಮಂದಿ ಮಾತ್ರ ಇಲ್ಲಿ ಇದ್ದಾರೆ. ಮಹಾರಾಷ್ಟ್ರದ ಒಟ್ಟು ಪ್ರಕರಣಗಳಲ್ಲಿ ಮುಂಬೈ ನಗರದ ಪಾಲು ಶೇ 61ರಷ್ಟು. ಗುಜರಾತ್ನ ಪ್ರಕರಣಗಳಲ್ಲಿ ಶೇ 71ರಷ್ಟು ಅಹಮದಾಬಾದ್ನಲ್ಲಿಯೇ ಇವೆ.</p>.<p>ಕೋವಿಡ್ ನಿಯಂತ್ರಣಕ್ಕೆ ರಾಜ್ಯಗಳು ಅನುಸರಿಸಿದ ಕಾರ್ಯತಂತ್ರವನ್ನು ಪರಿಶೀಲಿಸಲು ಕೇಂದ್ರ ತಂಡವು 20 ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಆ 20 ಜಿಲ್ಲೆಗಳಲ್ಲಿ ನಿರ್ಣಾಯಕವಾದ ಈ 14 ಜಿಲ್ಲೆಗಳೂ ಸೇರಿದ್ದವು.</p>.<p>ಕೆಲವು ನಗರಗಳಲ್ಲಿ ಪ್ರಕರಣಗಳು ಅತಿ ವೇಗವಾಗಿ ದ್ವಿಗುಣವಾಗುತ್ತಿವೆ ಎಂಬುದೂ ಕಳವಳಕಾರಿ ಅಂಶ. ಚೆನ್ನೈಯಲ್ಲಿ 6.2 ದಿನ, ದೆಹಲಿಯಲ್ಲಿ 7.1 ದಿನ, ಪುಣೆಯಲ್ಲಿ 11 ದಿನ ಮತ್ತು ಅಹಮದಾಬಾದ್ನಲ್ಲಿ 7.1 ದಿನದಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿವೆ. ರಾಷ್ಟ್ರಮಟ್ಟದಲ್ಲಿ ಪ್ರಕರಣ ದ್ವಿಗುಣಗೊಳ್ಳುವ ಅವಧಿ 10 ದಿನ.</p>.<p>ಈ ಜಿಲ್ಲೆಗಳು ಹೆಚ್ಚು ಅಪಾಯದ ಸ್ಥಿತಿಯಲ್ಲಿ ಇರುವುದರಿಂದ ಕೇಂದ್ರದ ಇನ್ನೊಂದು ತಂಡ ಈ ಜಿಲ್ಲೆಗಳಿಗೆ ಭೇಟಿ ನೀಡಲಿದೆ.</p>.<p>ಕೆಲದಿನಗಳ ಹಿಂದೆ ಈ ಪಟ್ಟಿಯಲ್ಲಿ ವಡೋದರ ಮತ್ತು ಕರ್ನೂಲ್ ಕೂಡ ಇದ್ದವು. ಆದರೆ, ಇಲ್ಲಿನ ಪರಿಸ್ಥಿತಿ ಸುಧಾರಿಸಿದೆ. ಕೋಲ್ಕತ್ತ ಈ ಪಟ್ಟಿಗೆ ಹೊಸ ಸೇರ್ಪಡೆ. ಅಲ್ಲಿ ಮರಣ ಪ್ರಮಾಣ ಶೇ 10ರಷ್ಟಿರುವುದು ಕಳವಳವನ್ನು ಹೆಚ್ಚಿಸಿದೆ.</p>.<p class="Subhead">14 ಜಿಲ್ಲೆ ಯಾವುವು?: ಮುಂಬೈ, ದೆಹಲಿ, ಆಗ್ರಾ, ಅಹಮದಾಬಾದ್, ಪುಣೆ, ಇಂದೋರ್, ಠಾಣೆ, ಜೈಪುರ, ಜೋಧಪುರ, ಸೂರತ್, ಕೋಲ್ಕತ್ತ, ಭೋಪಾಲ್, ಹೈದರಾಬಾದ್, ಚೆನ್ನೈ.</p>.<p class="Subhead"><strong>‘ಯಾವುದೇ ಪರಿಸ್ಥಿತಿಗೂ ದೇಶ ಸಜ್ಜು’</strong></p>.<p>ಕೋವಿಡ್ಗೆ ಸಂಬಂಧಿಸಿ ಯಾವುದೇ ಪರಿಸ್ಥಿತಿ ಸೃಷ್ಟಿಯಾದರೂ ಎದುರಿಸಲು ದೇಶ ಸಜ್ಜಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ. ಶನಿವಾರ ಒಂದೇ ದಿನ ಸೋಂಕು ಪ್ರಕರಣಗಳಲ್ಲಿ 3,320 ಏರಿಕೆ<br />ಯಾಗಿದೆ. ಏರಿಕೆಯು ಮೂರು ಸಾವಿರಕ್ಕಿಂತ ಹೆಚ್ಚಾಗಿರುವುದು ಸತತ 3ನೇ ದಿನ. ಪ್ರಕರಣಗಳ ಒಟ್ಟು ಸಂಖ್ಯೆ 59,662 ಎಂದು ಆರೋಗ್ಯ ಇಲಾಖೆ ಹೇಳಿದೆ. ಆದರೆ, ರಾಜ್ಯಗಳು ಕೊಟ್ಟ ಅಂಕಿಅಂಶಗಳನ್ನು ಲೆಕ್ಕ ಹಾಕಿ ಪಿಟಿಐ ಕೊಟ್ಟ ಮಾಹಿತಿ ಪ್ರಕಾರ, ಒಟ್ಟು ಸಂಖ್ಯೆಯು 62,513ಕ್ಕೆ ಏರಿಕೆಯಾಗಿದೆ.</p>.<p><strong>84,600: </strong>ಶನಿವಾರ ನಡೆಸಲಾದ ಪರೀಕ್ಷೆಗಳು</p>.<p><strong>95,000: </strong>ಒಂದು ದಿನದ ಪರೀಕ್ಷೆಯ ಸಾಮರ್ಥ್ಯ</p>.<p><strong>7,645: </strong>ದೇಶದಲ್ಲಿ ಈಗ ಇರುವ ಕ್ವಾರಂಟೈನ್ ಕೇಂದ್ರಗಳು</p>.<p><strong>453: </strong>ಕೋವಿಡ್ ಪರೀಕ್ಷೆಯ ಪ್ರಯೋಗಾಲಯಗಳ ಸಂಖ್ಯೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>