<p><strong>ರಾಂಚಿ</strong>: ಜಾರ್ಖಂಡ್ನಲ್ಲಿ ಪ್ರಸಕ್ತ ವರ್ಷ ಸೆಪ್ಟೆಂಬರ್ ಅಂತ್ಯದ ವೇಳೆಗೆ 266 ನಕ್ಸಲರನ್ನು ಬಂಧಿಸಲಾಗಿದೆ, 32 ಮಂದಿಯನ್ನು ಹತ್ಯೆ ಮಾಡಲಾಗಿದೆ ಮತ್ತು 30 ಮಂದಿ ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಬಂಧಿತರಲ್ಲಿ ಸಿಪಿಐಗೆ ಸೇರಿದ ಪ್ರಾದೇಶಿಕ ಸಮಿತಿಯ ಇಬ್ಬರು ಸದಸ್ಯರು, ಒಬ್ಬರು ವಲಯ ಕಮಾಂಡರ್, ಇಬ್ಬರು ಉಪ ವಲಯ ಕಮಾಂಡರ್ ಮತ್ತು ಒಂಬತ್ತು ಮಂದಿ ಪ್ರದೇಶ ಕಮಾಂಡರ್ ಸೇರಿದ್ದಾರೆ ಎಂದು ಅವರು ಮಂಗಳವಾರ ತಿಳಿಸಿದರು.</p>.<p>‘ಜನವರಿ 1ರಿಂದ ಈವರೆಗೆ 32ಮಂದಿ ನಕ್ಸಲರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ವಿವೇಕ್ ಅಲಿಯಾಸ್ ಪ್ರಯಾಗ್ ಮಾಂಝಿ, ಅನುಜ್ ಅಲಿಯಾಸ್ ಸಹದೇವ್ ಸೊರೇನ್ ಸೇರಿದಂತೆ ಪ್ರಮುಖರು ಎನ್ಕೌಂಟರ್ಗಳಲ್ಲಿ ಮೃತಪಟ್ಟಿದ್ದಾರೆ. ಈ ಇಬ್ಬರ ಸುಳಿವು ನೀಡಿದವರಿಗೆ ತಲಾ ₹1 ಕೋಟಿ ಬಹುಮಾನ ಘೋಷಿಸಲಾಗಿತ್ತು’ ಎಂದು ಜಾರ್ಖಂಡ್ ಪೊಲೀಸ್ ವಕ್ತಾರ ಮೈಕೆಲ್ ರಾಜ್ ತಿಳಿಸಿದರು.</p>.<p>ಇದೇ ಅವಧಿಯಲ್ಲಿ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ</strong>: ಜಾರ್ಖಂಡ್ನಲ್ಲಿ ಪ್ರಸಕ್ತ ವರ್ಷ ಸೆಪ್ಟೆಂಬರ್ ಅಂತ್ಯದ ವೇಳೆಗೆ 266 ನಕ್ಸಲರನ್ನು ಬಂಧಿಸಲಾಗಿದೆ, 32 ಮಂದಿಯನ್ನು ಹತ್ಯೆ ಮಾಡಲಾಗಿದೆ ಮತ್ತು 30 ಮಂದಿ ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಬಂಧಿತರಲ್ಲಿ ಸಿಪಿಐಗೆ ಸೇರಿದ ಪ್ರಾದೇಶಿಕ ಸಮಿತಿಯ ಇಬ್ಬರು ಸದಸ್ಯರು, ಒಬ್ಬರು ವಲಯ ಕಮಾಂಡರ್, ಇಬ್ಬರು ಉಪ ವಲಯ ಕಮಾಂಡರ್ ಮತ್ತು ಒಂಬತ್ತು ಮಂದಿ ಪ್ರದೇಶ ಕಮಾಂಡರ್ ಸೇರಿದ್ದಾರೆ ಎಂದು ಅವರು ಮಂಗಳವಾರ ತಿಳಿಸಿದರು.</p>.<p>‘ಜನವರಿ 1ರಿಂದ ಈವರೆಗೆ 32ಮಂದಿ ನಕ್ಸಲರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ವಿವೇಕ್ ಅಲಿಯಾಸ್ ಪ್ರಯಾಗ್ ಮಾಂಝಿ, ಅನುಜ್ ಅಲಿಯಾಸ್ ಸಹದೇವ್ ಸೊರೇನ್ ಸೇರಿದಂತೆ ಪ್ರಮುಖರು ಎನ್ಕೌಂಟರ್ಗಳಲ್ಲಿ ಮೃತಪಟ್ಟಿದ್ದಾರೆ. ಈ ಇಬ್ಬರ ಸುಳಿವು ನೀಡಿದವರಿಗೆ ತಲಾ ₹1 ಕೋಟಿ ಬಹುಮಾನ ಘೋಷಿಸಲಾಗಿತ್ತು’ ಎಂದು ಜಾರ್ಖಂಡ್ ಪೊಲೀಸ್ ವಕ್ತಾರ ಮೈಕೆಲ್ ರಾಜ್ ತಿಳಿಸಿದರು.</p>.<p>ಇದೇ ಅವಧಿಯಲ್ಲಿ ಪೊಲೀಸರು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>