<p><strong>ಬಿಜಾಪುರ:</strong> ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ತಮ್ಮ ತಲೆ ಮೇಲೆ ₹39 ಲಕ್ಷ ಬಹುಮಾನ ಘೋಷಣೆಯಾಗಿರುವ 9 ಮಂದಿ ಸೇರಿದಂತೆ 30 ನಕ್ಸಲರು ಭದ್ರತಾ ಪಡೆ ಮತ್ತು ಪೊಲೀಸರ ಎದುರು ಶರಣಾಗಿದ್ದಾರೆ.</p><p>ಶರಣಾದವರಲ್ಲಿ 6 ಮಂದಿ ಮಹಿಳೆಯರು ಸೇರಿದ್ದಾರೆ. ಆದಿವಾಸಿಗಳ ಮೇಲೆ ನಡೆದ ದೌರ್ಜನ್ಯ ಮತ್ತು ಟೊಳ್ಳು ಮಾವೋವಾದಿ ಸಿದ್ಧಾಂತದಿಂದ ಬೇಸತ್ತು ಶರಣಾಗಿರುವುದಾಗಿ ನಕ್ಸಲರು ಹೇಳಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.</p><p>ಶರಣಾದ ನಕ್ಸಲರು ಪೊಲೀಸರ ಪುನರ್ವಸತಿ ನೀತಿಯಿಂದಲೂ ಪ್ರೇರಿತರಾಗಿದ್ದಾರೆ ಎಂದೂ ಅದು ಹೇಳಿದೆ.</p><p>ಶರಣಾದ 30 ನಕ್ಸಲರ ಪೈಕಿ ತಮ್ಮ ತಲೆ ಮೇಲೆ ತಲಾ ₹8 ಲಕ್ಷ ಬಹುಮಾನ ಘೋಷಣೆಯಾಗಿರುವ ಮಿಟ್ಕಿ ಕಕೇಮ್ ಅಲಿಯಾಸ್ ಸರಿತಾ(35), ಮುರಿಮುಂಡಾ ಅಲಿಯಾಸ್ ಸುಖ್ಮತಿ(32) ಸೇರಿದ್ದಾರೆ.</p><p>ಆ ಪೈಕಿ ರಜಿತಾ ವೆಟ್ಟಿ(24), ದೇವೆ ಕೊವಸಿ(24), ಆಯ್ತಾ ಸೋಧಿ(22) ಮತ್ತು ಸಿನಿ ಎಂಬರ ತಲೆ ಮೇಲೆ ತಲೆ ಮೇಲೆ ತಲಾ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಮುನ್ನಹೇಮ್ಲಾ (35), ಆಯ್ತು ಮೀದಿಯಂ (38) ಮತ್ತು ಆಯ್ತು ಆಯ್ತು ಕರಮ್(50) ಅವರ ತಲೆ ಮೇಲೆ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು.</p><p>ಈ 9 ಮಂದಿ ನಕ್ಸಲರು ಭದ್ರತಾ ಪಡೆಗಳ ಮೇಲೆ ನಡೆದ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.</p><p>ಶರಣಾದ ನಕ್ಸಲರಿಗೆ ತಲಾ ₹25,000 ನೀಡಲಾಗಿದ್ದು, ಸರ್ಕಾರದ ಪುನರ್ವಸತಿ ನೀತಿ ಅನ್ವಯ ಸೌಲಭ್ಯ ದೊರೆಯಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಿಜಾಪುರ:</strong> ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ತಮ್ಮ ತಲೆ ಮೇಲೆ ₹39 ಲಕ್ಷ ಬಹುಮಾನ ಘೋಷಣೆಯಾಗಿರುವ 9 ಮಂದಿ ಸೇರಿದಂತೆ 30 ನಕ್ಸಲರು ಭದ್ರತಾ ಪಡೆ ಮತ್ತು ಪೊಲೀಸರ ಎದುರು ಶರಣಾಗಿದ್ದಾರೆ.</p><p>ಶರಣಾದವರಲ್ಲಿ 6 ಮಂದಿ ಮಹಿಳೆಯರು ಸೇರಿದ್ದಾರೆ. ಆದಿವಾಸಿಗಳ ಮೇಲೆ ನಡೆದ ದೌರ್ಜನ್ಯ ಮತ್ತು ಟೊಳ್ಳು ಮಾವೋವಾದಿ ಸಿದ್ಧಾಂತದಿಂದ ಬೇಸತ್ತು ಶರಣಾಗಿರುವುದಾಗಿ ನಕ್ಸಲರು ಹೇಳಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.</p><p>ಶರಣಾದ ನಕ್ಸಲರು ಪೊಲೀಸರ ಪುನರ್ವಸತಿ ನೀತಿಯಿಂದಲೂ ಪ್ರೇರಿತರಾಗಿದ್ದಾರೆ ಎಂದೂ ಅದು ಹೇಳಿದೆ.</p><p>ಶರಣಾದ 30 ನಕ್ಸಲರ ಪೈಕಿ ತಮ್ಮ ತಲೆ ಮೇಲೆ ತಲಾ ₹8 ಲಕ್ಷ ಬಹುಮಾನ ಘೋಷಣೆಯಾಗಿರುವ ಮಿಟ್ಕಿ ಕಕೇಮ್ ಅಲಿಯಾಸ್ ಸರಿತಾ(35), ಮುರಿಮುಂಡಾ ಅಲಿಯಾಸ್ ಸುಖ್ಮತಿ(32) ಸೇರಿದ್ದಾರೆ.</p><p>ಆ ಪೈಕಿ ರಜಿತಾ ವೆಟ್ಟಿ(24), ದೇವೆ ಕೊವಸಿ(24), ಆಯ್ತಾ ಸೋಧಿ(22) ಮತ್ತು ಸಿನಿ ಎಂಬರ ತಲೆ ಮೇಲೆ ತಲೆ ಮೇಲೆ ತಲಾ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಮುನ್ನಹೇಮ್ಲಾ (35), ಆಯ್ತು ಮೀದಿಯಂ (38) ಮತ್ತು ಆಯ್ತು ಆಯ್ತು ಕರಮ್(50) ಅವರ ತಲೆ ಮೇಲೆ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು.</p><p>ಈ 9 ಮಂದಿ ನಕ್ಸಲರು ಭದ್ರತಾ ಪಡೆಗಳ ಮೇಲೆ ನಡೆದ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದರು ಎಂದು ಪ್ರಕಟಣೆ ತಿಳಿಸಿದೆ.</p><p>ಶರಣಾದ ನಕ್ಸಲರಿಗೆ ತಲಾ ₹25,000 ನೀಡಲಾಗಿದ್ದು, ಸರ್ಕಾರದ ಪುನರ್ವಸತಿ ನೀತಿ ಅನ್ವಯ ಸೌಲಭ್ಯ ದೊರೆಯಲಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>