<p><strong>ನವದೆಹಲಿ</strong>: ಕರ್ನಾಟಕದ ಮೂಲಕ ಸಂಚರಿಸುವ 37 ರೈಲುಗಳನ್ನು ಎಕ್ಸ್ಪ್ರೆಸ್ ರೈಲುಗಳಾಗಿ ಪರಿವರ್ತಿಸಲು ರೈಲ್ವೆ ಮಂಡಳಿ ಬುಧವಾರ ಒಪ್ಪಿಗೆ ನೀಡಿದೆ. ದೇಶದಾದ್ಯಂತ ಒಟ್ಟು 362 ರೈಲುಗಳು ಎಕ್ಸ್ಪ್ರೆಸ್ ಆಗಿ<br />ಪರಿವರ್ತನೆ ಆಗಲಿವೆ.</p>.<p>ಪರಿವರ್ತಿಸಲಾದ ರೈಲುಗಳ ವೇಗವನ್ನು ಹೆಚ್ಚಿಸಲಾಗುತ್ತದೆ ಹಾಗೂ ನಿಲುಗಡೆ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತದೆ.200ಕ್ಕಿಂತ ಅಧಿಕ ಕಿಲೋಮೀಟರ್ ಓಡುವ ರೈಲುಗಳ ಪಟ್ಟಿಯನ್ನುವಿವಿಧ ರೈಲ್ವೆ ವಲಯಗಳು ಮಂಡಳಿಗೆ ಕಳುಹಿಸಿದ್ದವು.</p>.<p>ಕೋವಿಡ್ನಿಂದ ಸ್ಥಗಿತಗೊಂಡಿರುವ ರೈಲುಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಬಂದ ಬಳಿಕ ಹೊಸ ಎಕ್ಸ್ಪ್ರೆಸ್ ರೈಲುಗಳು ಕಾರ್ಯಾಚರಿಸಲಿವೆ. ಸದ್ಯ ರೈಲ್ವೆಯು ವಿಶೇಷ ರೈಲುಗಳನ್ನು ಮಾತ್ರ ಓಡಿಸುತ್ತಿದೆ.</p>.<p>ರೈಲ್ವೆ ಇಲಾಖೆಯು ಮುಂದಿನ ದಿನಗಳಲ್ಲಿ ಪರಿಚಯಿಸಲು ಉದ್ದೇಶಿಸಿರುವ ಶೂನ್ಯ ವೇಳಾಪಟ್ಟಿಯ (ಝೀರೊ ಟೈಮ್ಟೇಬಲ್) ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಾಭದಾಯಕ ಅಲ್ಲದ ಹಾಗೂ ಕಡಿಮೆ ಜನರು ಹತ್ತಿಳಿಯುವ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಸ್ಥಗಿತಗೊಳಿಸಲಾಗುತ್ತದೆ.</p>.<p>ನಿಲುಗಡೆ ತಾಣಗಳನ್ನು ರದ್ದುಗೊಳಿಸುವುದರಿಂದ ಬಡವರು ಮತ್ತು ಸಣ್ಣ ಊರುಗಳ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ವಾದವಿದೆ. ಆದರೆ ಹೆಚ್ಚು ಪ್ರಯಾಣಿಕರು ಇಲ್ಲದ ಹಾಗೂ ಕಾರ್ಯಸಾಧುವಲ್ಲದ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಸ್ಥಗಿತಗೊಳಿಸುವುದಾಗಿ ಇಲಾಖೆ ತಿಳಿಸಿದೆ.</p>.<p>‘ಈ ನಿಲ್ದಾಣಗಳಲ್ಲಿ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಸ್ಥಗಿತಗೊಳಿಸಿದ್ದಕ್ಕೆ ಪರ್ಯಾಯವಾಗಿ ಬೇರೆ ರೈಲುಗಳು ಇಲ್ಲಿ ನಿಲುಗಡೆ ಆಗುವಂತೆ ವ್ಯವಸ್ಥೆ ಮಾಡಲಾಗುವುದು. ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಅನುಕೂಲ<br />ವಾಗುತ್ತದೆ’ ಎಂದು ಇಲಾಖೆ ತಿಳಿಸಿದೆ.</p>.<p>ಇತರೆ ಸಾರಿಗೆಗಳಿಗೆ ಹೋಲಿಸಿದರೆ ಎಕ್ಸ್ಪ್ರೆಸ್ ಆಗಿ ಪರಿವರ್ತನೆ ಆದ ರೈಲುಗಳಲ್ಲಿ ಪ್ರಯಾಣ ದರ ದುಬಾರಿ ಆಗಿರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ಇಲಾಖೆಗೆ ಪ್ರಯಾಣಿಕ ರೈಲುಗಳಿಗಿಂತ ಹೆಚ್ಚಾಗಿ ಸರಕು ಸಾಗಣೆ ರೈಲುಗಳು ಆದಾಯ ತಂದುಕೊಡುತ್ತವೆ.</p>.<p><strong>ಎಕ್ಸ್ಪ್ರೆಸ್ ಆಗಿ ಪರಿವರ್ತಿಸಲಾದ ರೈಲುಗಳು</strong></p>.<p>*ಬಳ್ಳಾರಿ–ಹುಬ್ಬಳ್ಳಿ ( 51411/12)</p>.<p>* ಯಶವಂತಪುರ–ಮೈಸೂರು( 56215/16)</p>.<p>*ಕೆಎಸ್ಆರ್ ಬೆಂಗಳೂರು–ಶಿವಮೊಗ್ಗ ಟೌನ್ ( 56227/28)</p>.<p>*ಸೇಲಂ–ಯಶವಂತಪುರ ( 56241/42)</p>.<p>*ಅರಸೀಕೆರೆ–ಹುಬ್ಬಳ್ಳಿ( 562737/4)</p>.<p>*ತಾಳಗುಪ್ಪ–ಮೈಸೂರು( 56275/76)</p>.<p>* ಚಿಕ್ಕಮಗಳೂರು–ಯಶವಂತಪುರ ( 56277/78)</p>.<p>*ಬೆಂಗಳೂರು ದಂಡು–ವಿಜಯವಾಡ ( 56503/04)</p>.<p>*ಕಾರೈಕಲ್–ಕೆಎಸ್ಆರ್ ಬೆಂಗಳೂರು(56512/13)</p>.<p>*ಕೆಎಸ್ಆರ್ ಬೆಂಗಳೂರು–ಹುಬ್ಬಳ್ಳಿ(56515/16)</p>.<p>*ಸೊಲ್ಲಾಪುರ–ಧಾರವಾಡ( 56903/04)</p>.<p>*ಸೊಲ್ಲಾಪುರ–ಹುಬ್ಬಳ್ಳಿ (56905/06)</p>.<p>*ಕೆಎಸ್ಆರ್ ಬೆಂಗಳೂರು–ಹುಬ್ಬಳ್ಳಿ (56911/12)</p>.<p>*ಕೆಎಸ್ಆರ್ ಬೆಂಗಳೂರು–ಹುಬ್ಬಳ್ಳಿ( 56913/14)</p>.<p>*ಕೆಎಸ್ಆರ್ ಬೆಂಗಳೂರು–ಶಿವಮೊಗ್ಗ ಟೌನ್ (56917/18)</p>.<p>*ಚನ್ನಪಟ್ಟಣ–ಕೋಲಾರ (76525/26)</p>.<p>*ಮಂಗಳೂರು–ಮಡಗಾಂವ್ (56640/41)</p>.<p>* ಮಡಗಾಂವ್–ಮಂಗಳೂರು (70105/06)</p>.<p>* ಮಂಗಳೂರು–ಕೋಯಿಕ್ಕೋಡ್ (56654)</p>.<p>* ಮಂಗಳೂರು–ಕೊಯಮತ್ತೂರು (56323/24)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕರ್ನಾಟಕದ ಮೂಲಕ ಸಂಚರಿಸುವ 37 ರೈಲುಗಳನ್ನು ಎಕ್ಸ್ಪ್ರೆಸ್ ರೈಲುಗಳಾಗಿ ಪರಿವರ್ತಿಸಲು ರೈಲ್ವೆ ಮಂಡಳಿ ಬುಧವಾರ ಒಪ್ಪಿಗೆ ನೀಡಿದೆ. ದೇಶದಾದ್ಯಂತ ಒಟ್ಟು 362 ರೈಲುಗಳು ಎಕ್ಸ್ಪ್ರೆಸ್ ಆಗಿ<br />ಪರಿವರ್ತನೆ ಆಗಲಿವೆ.</p>.<p>ಪರಿವರ್ತಿಸಲಾದ ರೈಲುಗಳ ವೇಗವನ್ನು ಹೆಚ್ಚಿಸಲಾಗುತ್ತದೆ ಹಾಗೂ ನಿಲುಗಡೆ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತದೆ.200ಕ್ಕಿಂತ ಅಧಿಕ ಕಿಲೋಮೀಟರ್ ಓಡುವ ರೈಲುಗಳ ಪಟ್ಟಿಯನ್ನುವಿವಿಧ ರೈಲ್ವೆ ವಲಯಗಳು ಮಂಡಳಿಗೆ ಕಳುಹಿಸಿದ್ದವು.</p>.<p>ಕೋವಿಡ್ನಿಂದ ಸ್ಥಗಿತಗೊಂಡಿರುವ ರೈಲುಗಳ ಕಾರ್ಯಾಚರಣೆ ಸಹಜ ಸ್ಥಿತಿಗೆ ಬಂದ ಬಳಿಕ ಹೊಸ ಎಕ್ಸ್ಪ್ರೆಸ್ ರೈಲುಗಳು ಕಾರ್ಯಾಚರಿಸಲಿವೆ. ಸದ್ಯ ರೈಲ್ವೆಯು ವಿಶೇಷ ರೈಲುಗಳನ್ನು ಮಾತ್ರ ಓಡಿಸುತ್ತಿದೆ.</p>.<p>ರೈಲ್ವೆ ಇಲಾಖೆಯು ಮುಂದಿನ ದಿನಗಳಲ್ಲಿ ಪರಿಚಯಿಸಲು ಉದ್ದೇಶಿಸಿರುವ ಶೂನ್ಯ ವೇಳಾಪಟ್ಟಿಯ (ಝೀರೊ ಟೈಮ್ಟೇಬಲ್) ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಲಾಭದಾಯಕ ಅಲ್ಲದ ಹಾಗೂ ಕಡಿಮೆ ಜನರು ಹತ್ತಿಳಿಯುವ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಸ್ಥಗಿತಗೊಳಿಸಲಾಗುತ್ತದೆ.</p>.<p>ನಿಲುಗಡೆ ತಾಣಗಳನ್ನು ರದ್ದುಗೊಳಿಸುವುದರಿಂದ ಬಡವರು ಮತ್ತು ಸಣ್ಣ ಊರುಗಳ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ವಾದವಿದೆ. ಆದರೆ ಹೆಚ್ಚು ಪ್ರಯಾಣಿಕರು ಇಲ್ಲದ ಹಾಗೂ ಕಾರ್ಯಸಾಧುವಲ್ಲದ ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆ ಸ್ಥಗಿತಗೊಳಿಸುವುದಾಗಿ ಇಲಾಖೆ ತಿಳಿಸಿದೆ.</p>.<p>‘ಈ ನಿಲ್ದಾಣಗಳಲ್ಲಿ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಸ್ಥಗಿತಗೊಳಿಸಿದ್ದಕ್ಕೆ ಪರ್ಯಾಯವಾಗಿ ಬೇರೆ ರೈಲುಗಳು ಇಲ್ಲಿ ನಿಲುಗಡೆ ಆಗುವಂತೆ ವ್ಯವಸ್ಥೆ ಮಾಡಲಾಗುವುದು. ಇದರಿಂದ ಸ್ಥಳೀಯ ಪ್ರಯಾಣಿಕರಿಗೆ ಅನುಕೂಲ<br />ವಾಗುತ್ತದೆ’ ಎಂದು ಇಲಾಖೆ ತಿಳಿಸಿದೆ.</p>.<p>ಇತರೆ ಸಾರಿಗೆಗಳಿಗೆ ಹೋಲಿಸಿದರೆ ಎಕ್ಸ್ಪ್ರೆಸ್ ಆಗಿ ಪರಿವರ್ತನೆ ಆದ ರೈಲುಗಳಲ್ಲಿ ಪ್ರಯಾಣ ದರ ದುಬಾರಿ ಆಗಿರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.</p>.<p>ಇಲಾಖೆಗೆ ಪ್ರಯಾಣಿಕ ರೈಲುಗಳಿಗಿಂತ ಹೆಚ್ಚಾಗಿ ಸರಕು ಸಾಗಣೆ ರೈಲುಗಳು ಆದಾಯ ತಂದುಕೊಡುತ್ತವೆ.</p>.<p><strong>ಎಕ್ಸ್ಪ್ರೆಸ್ ಆಗಿ ಪರಿವರ್ತಿಸಲಾದ ರೈಲುಗಳು</strong></p>.<p>*ಬಳ್ಳಾರಿ–ಹುಬ್ಬಳ್ಳಿ ( 51411/12)</p>.<p>* ಯಶವಂತಪುರ–ಮೈಸೂರು( 56215/16)</p>.<p>*ಕೆಎಸ್ಆರ್ ಬೆಂಗಳೂರು–ಶಿವಮೊಗ್ಗ ಟೌನ್ ( 56227/28)</p>.<p>*ಸೇಲಂ–ಯಶವಂತಪುರ ( 56241/42)</p>.<p>*ಅರಸೀಕೆರೆ–ಹುಬ್ಬಳ್ಳಿ( 562737/4)</p>.<p>*ತಾಳಗುಪ್ಪ–ಮೈಸೂರು( 56275/76)</p>.<p>* ಚಿಕ್ಕಮಗಳೂರು–ಯಶವಂತಪುರ ( 56277/78)</p>.<p>*ಬೆಂಗಳೂರು ದಂಡು–ವಿಜಯವಾಡ ( 56503/04)</p>.<p>*ಕಾರೈಕಲ್–ಕೆಎಸ್ಆರ್ ಬೆಂಗಳೂರು(56512/13)</p>.<p>*ಕೆಎಸ್ಆರ್ ಬೆಂಗಳೂರು–ಹುಬ್ಬಳ್ಳಿ(56515/16)</p>.<p>*ಸೊಲ್ಲಾಪುರ–ಧಾರವಾಡ( 56903/04)</p>.<p>*ಸೊಲ್ಲಾಪುರ–ಹುಬ್ಬಳ್ಳಿ (56905/06)</p>.<p>*ಕೆಎಸ್ಆರ್ ಬೆಂಗಳೂರು–ಹುಬ್ಬಳ್ಳಿ (56911/12)</p>.<p>*ಕೆಎಸ್ಆರ್ ಬೆಂಗಳೂರು–ಹುಬ್ಬಳ್ಳಿ( 56913/14)</p>.<p>*ಕೆಎಸ್ಆರ್ ಬೆಂಗಳೂರು–ಶಿವಮೊಗ್ಗ ಟೌನ್ (56917/18)</p>.<p>*ಚನ್ನಪಟ್ಟಣ–ಕೋಲಾರ (76525/26)</p>.<p>*ಮಂಗಳೂರು–ಮಡಗಾಂವ್ (56640/41)</p>.<p>* ಮಡಗಾಂವ್–ಮಂಗಳೂರು (70105/06)</p>.<p>* ಮಂಗಳೂರು–ಕೋಯಿಕ್ಕೋಡ್ (56654)</p>.<p>* ಮಂಗಳೂರು–ಕೊಯಮತ್ತೂರು (56323/24)</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>