ಭೋಪಾಲ್: ಅಯೋಧ್ಯೆಯಲ್ಲಿ ಇಂದು (ಸೋಮವಾರ) ನಡೆಯಲಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಿಂದ 5 ಲಕ್ಷ ಲಾಡುಗಳುನ್ನು ಪೂರೈಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಆಗಮಿಸುವ ಭಕ್ತಾದಿಗಳಿಗೆ ಹಂಚಲು ಈ ಲಾಡುಗಳನ್ನು ನೀಡಲಾಗುತ್ತಿದ್ದು, ಪ್ರತಿ ಲಾಡು 50 ಗ್ರಾಂ ಇರಲಿದೆ ಎಂದು ಮಹಾಕಾಳೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಮೂಲಚಂದ್ ಜುನ್ವಾಲ್ ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಲಾಡುಗಳನ್ನು ಹೊತ್ತ ಐದು ಟ್ರಕ್ಗಳು ಭಾನುವಾರವೇ ಅಯೋಧ್ಯೆಗೆ ತಲುಪಿವೆ ಎಂದು ಮೂಲಚಂದ್ ಹೇಳಿದ್ದಾರೆ.
ಸುಮಾರು 150 ಮಂದಿ ಲಾಡು ತಯಾರಿಕೆಯಲ್ಲಿ ಕೆಲಸ ಮಾಡಿದ್ದರು. ಇದಕ್ಕೆ ದೇವಾಲಯದ ಸಿಬ್ಬಂದಿ ಸಹ ಕೈ ಜೋಡಿಸಿದ್ದರು. ಐದು ದಿನಗಳ ಕಾಲ ಲಾಡುಗಳನ್ನು ತಯಾರಿಸಲಾಯಿತು ಎಂದು ಮೂಲಚಂದ್ ತಿಳಿಸಿದ್ದಾರೆ