ತೀವ್ರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಮತ್ತು ಗಾಯಗೊಂಡವರೆಲ್ಲರೂ ತಮಿಳುನಾಡಿನ ಸೇಲಂನ ಕಳ್ಳಸಾಗಾಣಿಕೆದಾರರು ಎನ್ನಲಾಗಿದ್ದು, ಅವರು ಭಕರಪೇಟೆ ಕಾಡುಗಳಿಂದ ರಕ್ತ ಚಂದನವನ್ನು ಸಾಗಿಸುತ್ತಿದ್ದರು. ಕಾರುಗಳಲ್ಲಿನ ಬೆಂಕಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ರಕ್ತ ಚಂದನದ ಹಲವಾರು ದಿಮ್ಮಿಗಳು ಸಹ ಸುಟ್ಟುಹೋಗಿವೆ.