ಬೆಂಗಳೂರು: ಕಾಂಗ್ರೆಸ್–ಜೆಡಿಎಸ್ ಪ್ರಾಬಲ್ಯದ ಮೈಸೂರು ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಯಾಕೆ ಮಾತನಾಡಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ದೇಶದಲ್ಲಿ ಒಂದರ ಹಿಂದೆ ಹಗರಣಗಳು ನಡೆಯುತ್ತಿದ್ದರೂ ಮೋದಿ ಮೌನ ಪಾಲಿಸುತ್ತಿರುವುದು ಯಾಕೆ?. ಅವರ ಮೌನ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಸಹಾಯ ಮಾಡುತ್ತದೆ ಎಂದು ಅವರು ನಂಬಿರಬೇಕು- ಕಾಂಗ್ರೆಸ್ ಟ್ವೀಟ್ ಮಾಡಿದೆ.
PM Modi has mastered the art of remaining silent while scam after scam hits the nation. He possibly believes that his silence will help distract the nation. #MaunModihttps://t.co/mEPHzKUOvw