ರಾಜ್ಯಸಭೆಯಲ್ಲಿ ಇಂದು ಈ ವಿಚಾರ ತಿಳಿಸಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಸಂಜಯ್ ದೋತ್ರೆ, ‘2019ರ ಡಿಸೆಂಬರ್ 31ಕ್ಕೆ ಅಂತ್ಯವಾದಂತೆ ಏಳು ರಾಜ್ಯಗಳಲ್ಲಿ ಅಲ್ಲಿನ ಜನಸಂಖ್ಯೆಗಿಂತಲೂ ಹೆಚ್ಚಿನ ಆಧಾರ್ಗಳಿವೆ. ಈಗಾಗಲೇ ಮೃತಪಟ್ಟವರ ಕಾರಣಕ್ಕಾಗಿ ಈ ವ್ಯತ್ಯಾಸ ಕಂಡು ಬಂದಿಲ್ಲ. ಯಾಕೆಂದರೆ, ಈಗಾಗಲೇ ಮೃತಪಟ್ಟವರ ಮಾಹಿತಿಯನ್ನು ಆಧಾರ್ ಪರಿಷ್ಕರಣೆಯಲ್ಲಿ ಸೇರಿಸಲಾಗಿದೆ. ಜನಸಂಖ್ಯೆಯ ಅಂದಾಜು ಲೆಕ್ಕಾಚಾರದಲ್ಲಿನ ದೋಷ ಮತ್ತು ವಲಸಿಗರ ಮಾಹಿತಿ ಇದರಲ್ಲಿ ಸೇರಿಸದಿರುವುದೇ ವ್ಯತ್ಯಾಸಕ್ಕೆ ಕಾರಣ,’ ಎಂದು ಅವರು ಹೇಳಿದ್ದಾರೆ.