<p><strong>ಶ್ರೀನಗರ:</strong> ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪಟ್ಟಣದ ಸಮೀಪ ಉಗ್ರರು ಮಂಗಳವಾರ ಗುಂಡಿನ ದಾಳಿ ನಡೆಸಿದ್ದಾರೆ. ಪ್ರವಾಸಿ ತಾಣವಾದ ಹುಲ್ಲುಗಾವಲಿನಲ್ಲಿ ವಿಹರಿಸುತ್ತಿದ್ದ 28 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.</p><p>ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಡೆದ ಈ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಬ್ಬರು ಕರ್ನಾಟಕದವರು ಹಾಗೂ ಇಬ್ಬರು ವಿದೇಶಿಯರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಕಣಿವೆಯಲ್ಲಿ ಕಳೆದ 25 ವರ್ಷಗಳಲ್ಲಿ (2000ನೇ ಇಸವಿಯಿಂದ) ಈವರೆಗೆ ನಾಗರಿಕರನ್ನು ಗುರಿಯಾಗಿಸಿ ನಡೆದ ಪ್ರಮುಖ ಭಯೋತ್ಪಾದಕ ದಾಳಿಗಳ ಮಾಹಿತಿ ಇಲ್ಲಿದೆ.</p><ul><li><p><strong>ಮಾರ್ಚ್ 2000<br></strong>ಅಲ್ಪಸಂಖ್ಯಾತ ಸಿಖ್ ಸಮುದಾಯದವರನ್ನು ಗುರಿಯಾಗಿಸಿದ್ದ ಉಗ್ರರು ಅನಂತನಾಗ್ ಜಿಲ್ಲೆಯ ಛತ್ತಿಸಿಂಘ್ಪೋರಾ ಗ್ರಾಮದ ಮೇಲೆ 2000ನೇ ಇಸವಿಯ ಮಾರ್ಚ್ 21ರಂದು ದಾಳಿ ಮಾಡಿದ್ದರು. ಉಗ್ರರ ಕೃತ್ಯದಿಂದಾಗಿ 36 ಮಂದಿ ಮೃತಪಟ್ಟಿದ್ದರು.</p></li></ul><ul><li><p><strong>ಆಗಸ್ಟ್ 2000<br></strong>ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ನುನ್ವಾನ್ ಶಿಬಿರದ ಮೇಲೆ ಆಗಸ್ಟ್ನಲ್ಲಿ ದಾಳಿ ನಡೆಸಲಾಗಿತ್ತು. ಆ ವೇಳೆ 20ಕ್ಕೂ ಹೆಚ್ಚು ಯಾತ್ರಿಕರು ಸೇರಿದಂತೆ ಮೂವತ್ತೆರೆಡು ಮಂದಿ ಪ್ರಾಣ ಕಳೆದುಕೊಂಡಿದ್ದರು.</p></li></ul>.Terror Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: 28 ಮಂದಿ ಸಾವು.ವಿಮಾನ ನಿಲ್ದಾಣದಲ್ಲೇ ಜೈಶಂಕರ್, ಡೋಬಾಲ್ ಜೊತೆ ಸಭೆ ನಡೆಸಿದ ಮೋದಿ.<ul><li><p><strong>ಜುಲೈ 2001<br></strong>2001ರ ಜುಲೈನಲ್ಲಿ ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ಮತ್ತೊಮ್ಮೆ ದಾಳಿ ನಡೆದಿತ್ತು. ಈ ಬಾರಿ ಶೇಷನಾಗ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 13 ಮಂದಿ ಸಾವಿಗೀಡಾಗಿದ್ದರು.</p></li></ul><ul><li><p><strong>ಅಕ್ಟೋಬರ್ 2001<br></strong>ಶ್ರೀನಗರದಲ್ಲಿನ ಜಮ್ಮು ಮತ್ತು ಕಾಶ್ಮೀರ ಶಾಸಕಾಂಗ ಭವನದ ಮೇಲೆ 2001ರ ಅಕ್ಟೋಬರ್ 1ರಂದು ನಡೆದ ಆತ್ಮಾಹುತಿ ದಾಳಿಯಲ್ಲಿ 36 ಮಂದಿ ಸಾವನ್ನಪ್ಪಿದ್ದರು.</p></li></ul><ul><li><p><strong>ಆಗಸ್ಟ್ 2002<br></strong>ಉಗ್ರರು ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ 2002ರ ಆಗಸ್ಟ್ನಲ್ಲಿ ಛಂದನ್ವಾರಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ 11 ಯಾತ್ರಿಕರು ಮೃತಪಟ್ಟಿದ್ದರು.</p></li></ul><ul><li><p><strong>ನವೆಂಬರ್ 2002<br></strong>ದಕ್ಷಿಣ ಕಾಶ್ಮೀರದಲ್ಲಿ ಹಾದುಹೋಗುವ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಮೀಪದ ಲೋವರ್ ಮುಂಡಾದಲ್ಲಿ ಎಲ್ಇಡಿ ಸ್ಫೋಟದಲ್ಲಿ 9 ಯೋಧರು, ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 19 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಕೃತ್ಯವು 2002ರ ನವೆಂಬರ್ 23ರಂದು ನಡೆದಿತ್ತು.</p></li></ul><ul><li><p><strong>ಮಾರ್ಚ್ 2003<br></strong>ಪುಲ್ವಾಮಾ ಜಿಲ್ಲೆಯ ನಂದಿಮಾರ್ಗ್ ಗ್ರಾಮದಲ್ಲಿ 11 ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 24 ಕಾಶ್ಮೀರಿ ಪಂಡಿತರನ್ನು 2003ರ ಮಾರ್ಚ್ 23ರಂದು ಹತ್ಯೆ ಮಾಡಲಾಗಿತ್ತು.</p></li></ul>.ಶ್ರೀನಗರ ಪ್ರವಾಸಕ್ಕೆ ತೆರಳಿದ್ದ ಕೊಪ್ಪಳದ 19 ಜನ ಸುರಕ್ಷಿತ.Pahalgam Terror Attack: ಅಮೆರಿಕ, ಪೆರು ಪ್ರವಾಸ ಮೊಟಕುಗೊಳಿಸಿದ ನಿರ್ಮಲಾ.<ul><li><p><strong>ಜೂನ್ 2005<br></strong>ಪುಲ್ವಾಮಾದ ಸರ್ಕಾರಿ ಶಾಲೆಯೊಂದರ ಮುಂಭಾಗ ಜನದಟ್ಟಣೆಯಿಂದ ಕೂಡಿದ್ದ ಮಾರುಕಟ್ಟೆಯಲ್ಲಿ ಸ್ಫೋಟಕಗಳಿದ್ದ ಕಾರು 2005ರ ಜೂನ್ 13ರಂದು ಸ್ಫೋಟಗೊಂಡಿತ್ತು. ದುರಂತದಲ್ಲಿ, ಇಬ್ಬರು ಶಾಲಾ ಮಕ್ಕಳು, ಸಿಆರ್ಪಿಎಫ್ನ ಮೂವರು ಅಧಿಕಾರಿಗಳು ಹಾಗೂ 13 ನಾಗರಿಕರು ಸಾವಿಗೀಡಾಗಿದ್ದರು. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.</p></li></ul><ul><li><p><strong>ಜೂನ್ 2006</strong><br>ಉಗ್ರರು ಕುಲ್ಗಾಮ್ ಜಿಲ್ಲೆಯಲ್ಲಿ 2006ರ ಜೂನ್ 12ರಂದು ಬಿಹಾರ ಹಾಗೂ ನೇಪಾಳದ 9 ಕಾರ್ಮಿಕರನ್ನು ಹತ್ಯೆ ಮಾಡಿದ್ದರು.</p></li></ul><ul><li><p><strong>ಜುಲೈ 2017<br></strong>ಅಮರನಾಥ ಯಾತ್ರಿಕರಿದ್ದ ಬಸ್ ಮೇಲೆ 2017ರ ಜುಲೈ 10ರಂದು ಉಗ್ರರು ದಾಳಿ ಮಾಡಿದ್ದರು. ಬಸ್ನಲ್ಲಿದ್ದ 8 ಮಂದಿ ಮೃತಪಟ್ಟಿದ್ದರು.</p></li></ul><p>ಈ ದಾಳಿಗಳಷ್ಟೇ ಅಲ್ಲದೆ, ಉಗ್ರರು ಸೇನಾ ಸಿಬ್ಬಂದಿಯೊಂದಿಗೆ ನಿರಂತರವಾಗಿ ಸಂಘರ್ಷ ನಡೆಸುತ್ತಿದ್ದಾರೆ. ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿ ಪುಲ್ವಾಮಾದಲ್ಲಿ 2019ರಲ್ಲಿ ನಡೆಸಿದ ದಾಳಿ ಅದಕ್ಕೆ ಪ್ರಮುಖ ಉದಾಹರಣೆಯಾಗಿದೆ. ಆ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.</p>.ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಸೌದಿ ಪ್ರವಾಸ ಮೊಟಕುಗೊಳಿಸಿ ಮೋದಿ ವಾಪಸ್.ಭಯೋತ್ಪಾದಕ ದಾಳಿ: ಟ್ರಂಪ್, ಪುಟಿನ್, ನೆತನ್ಯಾಹು ಸೇರಿ ಜಾಗತಿಕ ನಾಯಕರ ಖಂಡನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ:</strong> ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪಟ್ಟಣದ ಸಮೀಪ ಉಗ್ರರು ಮಂಗಳವಾರ ಗುಂಡಿನ ದಾಳಿ ನಡೆಸಿದ್ದಾರೆ. ಪ್ರವಾಸಿ ತಾಣವಾದ ಹುಲ್ಲುಗಾವಲಿನಲ್ಲಿ ವಿಹರಿಸುತ್ತಿದ್ದ 28 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.</p><p>ಮಧ್ಯಾಹ್ನ 3 ಗಂಟೆಯ ಸುಮಾರಿಗೆ ನಡೆದ ಈ ದಾಳಿಯಲ್ಲಿ ಮೃತಪಟ್ಟವರಲ್ಲಿ ಇಬ್ಬರು ಕರ್ನಾಟಕದವರು ಹಾಗೂ ಇಬ್ಬರು ವಿದೇಶಿಯರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಕಣಿವೆಯಲ್ಲಿ ಕಳೆದ 25 ವರ್ಷಗಳಲ್ಲಿ (2000ನೇ ಇಸವಿಯಿಂದ) ಈವರೆಗೆ ನಾಗರಿಕರನ್ನು ಗುರಿಯಾಗಿಸಿ ನಡೆದ ಪ್ರಮುಖ ಭಯೋತ್ಪಾದಕ ದಾಳಿಗಳ ಮಾಹಿತಿ ಇಲ್ಲಿದೆ.</p><ul><li><p><strong>ಮಾರ್ಚ್ 2000<br></strong>ಅಲ್ಪಸಂಖ್ಯಾತ ಸಿಖ್ ಸಮುದಾಯದವರನ್ನು ಗುರಿಯಾಗಿಸಿದ್ದ ಉಗ್ರರು ಅನಂತನಾಗ್ ಜಿಲ್ಲೆಯ ಛತ್ತಿಸಿಂಘ್ಪೋರಾ ಗ್ರಾಮದ ಮೇಲೆ 2000ನೇ ಇಸವಿಯ ಮಾರ್ಚ್ 21ರಂದು ದಾಳಿ ಮಾಡಿದ್ದರು. ಉಗ್ರರ ಕೃತ್ಯದಿಂದಾಗಿ 36 ಮಂದಿ ಮೃತಪಟ್ಟಿದ್ದರು.</p></li></ul><ul><li><p><strong>ಆಗಸ್ಟ್ 2000<br></strong>ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ನುನ್ವಾನ್ ಶಿಬಿರದ ಮೇಲೆ ಆಗಸ್ಟ್ನಲ್ಲಿ ದಾಳಿ ನಡೆಸಲಾಗಿತ್ತು. ಆ ವೇಳೆ 20ಕ್ಕೂ ಹೆಚ್ಚು ಯಾತ್ರಿಕರು ಸೇರಿದಂತೆ ಮೂವತ್ತೆರೆಡು ಮಂದಿ ಪ್ರಾಣ ಕಳೆದುಕೊಂಡಿದ್ದರು.</p></li></ul>.Terror Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: 28 ಮಂದಿ ಸಾವು.ವಿಮಾನ ನಿಲ್ದಾಣದಲ್ಲೇ ಜೈಶಂಕರ್, ಡೋಬಾಲ್ ಜೊತೆ ಸಭೆ ನಡೆಸಿದ ಮೋದಿ.<ul><li><p><strong>ಜುಲೈ 2001<br></strong>2001ರ ಜುಲೈನಲ್ಲಿ ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ ಮತ್ತೊಮ್ಮೆ ದಾಳಿ ನಡೆದಿತ್ತು. ಈ ಬಾರಿ ಶೇಷನಾಗ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ 13 ಮಂದಿ ಸಾವಿಗೀಡಾಗಿದ್ದರು.</p></li></ul><ul><li><p><strong>ಅಕ್ಟೋಬರ್ 2001<br></strong>ಶ್ರೀನಗರದಲ್ಲಿನ ಜಮ್ಮು ಮತ್ತು ಕಾಶ್ಮೀರ ಶಾಸಕಾಂಗ ಭವನದ ಮೇಲೆ 2001ರ ಅಕ್ಟೋಬರ್ 1ರಂದು ನಡೆದ ಆತ್ಮಾಹುತಿ ದಾಳಿಯಲ್ಲಿ 36 ಮಂದಿ ಸಾವನ್ನಪ್ಪಿದ್ದರು.</p></li></ul><ul><li><p><strong>ಆಗಸ್ಟ್ 2002<br></strong>ಉಗ್ರರು ಅಮರನಾಥ ಯಾತ್ರಿಕರನ್ನು ಗುರಿಯಾಗಿಸಿ 2002ರ ಆಗಸ್ಟ್ನಲ್ಲಿ ಛಂದನ್ವಾರಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ 11 ಯಾತ್ರಿಕರು ಮೃತಪಟ್ಟಿದ್ದರು.</p></li></ul><ul><li><p><strong>ನವೆಂಬರ್ 2002<br></strong>ದಕ್ಷಿಣ ಕಾಶ್ಮೀರದಲ್ಲಿ ಹಾದುಹೋಗುವ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಸಮೀಪದ ಲೋವರ್ ಮುಂಡಾದಲ್ಲಿ ಎಲ್ಇಡಿ ಸ್ಫೋಟದಲ್ಲಿ 9 ಯೋಧರು, ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 19 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಕೃತ್ಯವು 2002ರ ನವೆಂಬರ್ 23ರಂದು ನಡೆದಿತ್ತು.</p></li></ul><ul><li><p><strong>ಮಾರ್ಚ್ 2003<br></strong>ಪುಲ್ವಾಮಾ ಜಿಲ್ಲೆಯ ನಂದಿಮಾರ್ಗ್ ಗ್ರಾಮದಲ್ಲಿ 11 ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 24 ಕಾಶ್ಮೀರಿ ಪಂಡಿತರನ್ನು 2003ರ ಮಾರ್ಚ್ 23ರಂದು ಹತ್ಯೆ ಮಾಡಲಾಗಿತ್ತು.</p></li></ul>.ಶ್ರೀನಗರ ಪ್ರವಾಸಕ್ಕೆ ತೆರಳಿದ್ದ ಕೊಪ್ಪಳದ 19 ಜನ ಸುರಕ್ಷಿತ.Pahalgam Terror Attack: ಅಮೆರಿಕ, ಪೆರು ಪ್ರವಾಸ ಮೊಟಕುಗೊಳಿಸಿದ ನಿರ್ಮಲಾ.<ul><li><p><strong>ಜೂನ್ 2005<br></strong>ಪುಲ್ವಾಮಾದ ಸರ್ಕಾರಿ ಶಾಲೆಯೊಂದರ ಮುಂಭಾಗ ಜನದಟ್ಟಣೆಯಿಂದ ಕೂಡಿದ್ದ ಮಾರುಕಟ್ಟೆಯಲ್ಲಿ ಸ್ಫೋಟಕಗಳಿದ್ದ ಕಾರು 2005ರ ಜೂನ್ 13ರಂದು ಸ್ಫೋಟಗೊಂಡಿತ್ತು. ದುರಂತದಲ್ಲಿ, ಇಬ್ಬರು ಶಾಲಾ ಮಕ್ಕಳು, ಸಿಆರ್ಪಿಎಫ್ನ ಮೂವರು ಅಧಿಕಾರಿಗಳು ಹಾಗೂ 13 ನಾಗರಿಕರು ಸಾವಿಗೀಡಾಗಿದ್ದರು. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.</p></li></ul><ul><li><p><strong>ಜೂನ್ 2006</strong><br>ಉಗ್ರರು ಕುಲ್ಗಾಮ್ ಜಿಲ್ಲೆಯಲ್ಲಿ 2006ರ ಜೂನ್ 12ರಂದು ಬಿಹಾರ ಹಾಗೂ ನೇಪಾಳದ 9 ಕಾರ್ಮಿಕರನ್ನು ಹತ್ಯೆ ಮಾಡಿದ್ದರು.</p></li></ul><ul><li><p><strong>ಜುಲೈ 2017<br></strong>ಅಮರನಾಥ ಯಾತ್ರಿಕರಿದ್ದ ಬಸ್ ಮೇಲೆ 2017ರ ಜುಲೈ 10ರಂದು ಉಗ್ರರು ದಾಳಿ ಮಾಡಿದ್ದರು. ಬಸ್ನಲ್ಲಿದ್ದ 8 ಮಂದಿ ಮೃತಪಟ್ಟಿದ್ದರು.</p></li></ul><p>ಈ ದಾಳಿಗಳಷ್ಟೇ ಅಲ್ಲದೆ, ಉಗ್ರರು ಸೇನಾ ಸಿಬ್ಬಂದಿಯೊಂದಿಗೆ ನಿರಂತರವಾಗಿ ಸಂಘರ್ಷ ನಡೆಸುತ್ತಿದ್ದಾರೆ. ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿ ಪುಲ್ವಾಮಾದಲ್ಲಿ 2019ರಲ್ಲಿ ನಡೆಸಿದ ದಾಳಿ ಅದಕ್ಕೆ ಪ್ರಮುಖ ಉದಾಹರಣೆಯಾಗಿದೆ. ಆ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.</p>.ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಸೌದಿ ಪ್ರವಾಸ ಮೊಟಕುಗೊಳಿಸಿ ಮೋದಿ ವಾಪಸ್.ಭಯೋತ್ಪಾದಕ ದಾಳಿ: ಟ್ರಂಪ್, ಪುಟಿನ್, ನೆತನ್ಯಾಹು ಸೇರಿ ಜಾಗತಿಕ ನಾಯಕರ ಖಂಡನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>