<p><strong>ನವದೆಹಲಿ</strong>: ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಅಳಿವಿನಂಚಿನಲ್ಲಿರುವ ರಕ್ತ ಚಂದನದ ಸಂರಕ್ಷಣೆ ಮತ್ತು ರೈತರು ಹಾಗೂ ಅರಣ್ಯ ಅವಲಂಬಿತ ಸಮುದಾಯಗಳ ಬದುಕು ಸದೃಢಗೊಳಿಸಲು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ₹6.2 ಕೋಟಿ ಬಿಡುಗಡೆ ಮಾಡಿದೆ ಎಂದು ಪರಿಸರ ಇಲಾಖೆ ಗುರುವಾರ ತಿಳಿಸಿದೆ.</p>.<p>₹6.2 ಕೋಟಿಯಲ್ಲಿ ತೆಲಂಗಾಣದ ರೈತರಿಗೆ ₹ 17.8 ಲಕ್ಷ, ಆಂಧ್ರದ ರೈತರಿಗೆ ₹1.1 ಕೋಟಿ, ತಮಿಳುನಾಡು ಅರಣ್ಯ ಇಲಾಖೆಗೆ ₹2.98 ಕೋಟಿ, ಕರ್ನಾಟಕ ಅರಣ್ಯ ಇಲಾಖೆಗೆ ₹1.05 ಕೋಟಿ, ಮಹಾರಾಷ್ಟ್ರ ಅರಣ್ಯ ಇಲಾಖೆಗೆ ₹ 69.2 ಲಕ್ಷ ಮತ್ತು ತೆಲಂಗಾಣ ಅರಣ್ಯ ಇಲಾಖೆಗೆ ₹ 5.8 ಲಕ್ಷ ತಲುಪಲಿದೆ. ಉಳಿದ ₹ 16 ಲಕ್ಷವನ್ನು ರಾಜ್ಯ ಜೀವ ವೈವಿಧ್ಯ ಪ್ರಾಧಿಕಾರಗಳಿಗೆ ಹಂಚಿಕೆ ಮಾಡಲಾಗುತ್ತದೆ.</p>.<p>ಈವರೆಗೂ ವಿಶೇಷವಾಗಿ ರಕ್ತಚಂದನ ಬೆಳೆಗಾರರಿಗೆ ₹101 ಕೋಟಿ ದೊರೆತಿದೆ. ಸಂಶೋಧನೆ, ಮೂಲಸೌಕರ್ಯ, ಸಮುದಾಯ ಆಧಾರಿತ ಜೀವವೈವಿಧ್ಯ ಕಾರ್ಯಕ್ರಮ ಮತ್ತು ರಕ್ತಚಂದನ ಬೆಳೆಗಾರರ ಸಾಮಾಜಿಕ–ಆರ್ಥಿಕ ಚೇತರಿಕೆಗೆ ಹಣ ಬಳಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಅಳಿವಿನಂಚಿನಲ್ಲಿರುವ ರಕ್ತ ಚಂದನದ ಸಂರಕ್ಷಣೆ ಮತ್ತು ರೈತರು ಹಾಗೂ ಅರಣ್ಯ ಅವಲಂಬಿತ ಸಮುದಾಯಗಳ ಬದುಕು ಸದೃಢಗೊಳಿಸಲು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ₹6.2 ಕೋಟಿ ಬಿಡುಗಡೆ ಮಾಡಿದೆ ಎಂದು ಪರಿಸರ ಇಲಾಖೆ ಗುರುವಾರ ತಿಳಿಸಿದೆ.</p>.<p>₹6.2 ಕೋಟಿಯಲ್ಲಿ ತೆಲಂಗಾಣದ ರೈತರಿಗೆ ₹ 17.8 ಲಕ್ಷ, ಆಂಧ್ರದ ರೈತರಿಗೆ ₹1.1 ಕೋಟಿ, ತಮಿಳುನಾಡು ಅರಣ್ಯ ಇಲಾಖೆಗೆ ₹2.98 ಕೋಟಿ, ಕರ್ನಾಟಕ ಅರಣ್ಯ ಇಲಾಖೆಗೆ ₹1.05 ಕೋಟಿ, ಮಹಾರಾಷ್ಟ್ರ ಅರಣ್ಯ ಇಲಾಖೆಗೆ ₹ 69.2 ಲಕ್ಷ ಮತ್ತು ತೆಲಂಗಾಣ ಅರಣ್ಯ ಇಲಾಖೆಗೆ ₹ 5.8 ಲಕ್ಷ ತಲುಪಲಿದೆ. ಉಳಿದ ₹ 16 ಲಕ್ಷವನ್ನು ರಾಜ್ಯ ಜೀವ ವೈವಿಧ್ಯ ಪ್ರಾಧಿಕಾರಗಳಿಗೆ ಹಂಚಿಕೆ ಮಾಡಲಾಗುತ್ತದೆ.</p>.<p>ಈವರೆಗೂ ವಿಶೇಷವಾಗಿ ರಕ್ತಚಂದನ ಬೆಳೆಗಾರರಿಗೆ ₹101 ಕೋಟಿ ದೊರೆತಿದೆ. ಸಂಶೋಧನೆ, ಮೂಲಸೌಕರ್ಯ, ಸಮುದಾಯ ಆಧಾರಿತ ಜೀವವೈವಿಧ್ಯ ಕಾರ್ಯಕ್ರಮ ಮತ್ತು ರಕ್ತಚಂದನ ಬೆಳೆಗಾರರ ಸಾಮಾಜಿಕ–ಆರ್ಥಿಕ ಚೇತರಿಕೆಗೆ ಹಣ ಬಳಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>