<p><strong>ಕೋಲ್ಕತ್ತ:</strong> ಯಾರಾದರೂ ಯಾವುದರ ಬಗ್ಗೆಯಾದರು ಭೀತಿಗೊಂಡಿದ್ದೀರಾ ಎಂದು ಪ್ರಶ್ನಿಸಿದರೆ ಹೌದು ಎನ್ನುತ್ತೇನೆ. ಹೆದರಿಕೆಯಾಗಲು ಈಗ ಕಾರಣವಿದೆ. ಪ್ರಸ್ತುತ ರಾಷ್ಟ್ರದಲ್ಲಿನ ಪರಿಸ್ಥಿತಿಯೇ ಈ ಭೀತಿಗೆ ಕಾರಣ ಎಂದು ನೊಬೆಲ್ ಪುರಸ್ಕೃತ ಡಾ. ಅಮರ್ತ್ಯ ಸೇನ್ ಕಳವಳ ವ್ಯಕ್ತಪಡಿಸಿದ್ದಾರೆ.</p>.<p>ಕೋಲ್ಕತ್ತದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಅಮರ್ತ್ಯ ಸಂಶೋಧನಾ ಸಂಸ್ಥೆಯ ಉದ್ಘಾಟನೆಗೆ ಆಗಮಿಸಿದ್ದ ಡಾ. ಆಮರ್ತ್ಯ ಸೇನ್ ಅವರು ಮಾತನಾಡುತ್ತ, ರಾಷ್ಟ್ರವು ಧರ್ಮದ ಆಧಾರದಲ್ಲಿ ವಿಭಜನೆಯಾಗಬಾರದು. ಜನರು ಐಕ್ಯಮತದೆಡೆಗೆ ಸಾಗಬೇಕು ಎಂದರು.</p>.<p>ರಾಷ್ಟ್ರವು ಒಗ್ಗಟ್ಟಿನಿಂದ ಇರಬೇಕು ಎಂದು ಬಯಸುತ್ತೇನೆ. ಐತಿಹಾಸಿಕವಾಗಿ ಉದಾರವಾದಿಯಾಗಿರುವ ರಾಷ್ಟ್ರವು ವಿಭಜನೆಗೊಳ್ಳುವುದನ್ನು ನಾನು ನಿರೀಕ್ಷಿಸುವುದಿಲ್ಲ. ನಾವು ಜೊತೆಯಾಗಿ ಕೆಲಸ ಮಾಡಬೇಕು ಎಂದರು.</p>.<p>ಭಾರತವು ಕೇವಲ ಹಿಂದೂ ಅಥವಾ ಮುಸ್ಲಿಮರಿಗೆ ಸೀಮಿತವಾಗಬಾರದು. ಭಾರತ ಕೇವಲ ಹಿಂದೂಗಳ ರಾಷ್ಟ್ರವಾಗುವುದಿಲ್ಲ. ಅದರಂತೆ ಕೇವಲ ಮುಸ್ಲಿಮರಿಂದ ಭಾರತವಾಗುವುದಿಲ್ಲ. ಎಲ್ಲರೂ ಜೊತೆಗೂಡಿ ಮುಂದುವರಿಯಬೇಕು. ಭಾರತೀಯ ಸಂಪ್ರದಾಯವಾಗಿರುವ ಐಕ್ಯತೆ ಮೇಳೈಸಬೇಕು ಎಂದು ಒತ್ತಿ ಹೇಳಿದರು.</p>.<p>1998 ರಲ್ಲಿ ಡಾ.ಅಮರ್ತ್ಯ ಸೇನ್ ಅವರಿಗೆ ಕಲ್ಯಾಣ ಅರ್ಥಶಾಸ್ತ್ರ (Welfare economy)ಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ನೊಬೆಲ್ ಪ್ರಶಸ್ತಿ ಲಭಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಯಾರಾದರೂ ಯಾವುದರ ಬಗ್ಗೆಯಾದರು ಭೀತಿಗೊಂಡಿದ್ದೀರಾ ಎಂದು ಪ್ರಶ್ನಿಸಿದರೆ ಹೌದು ಎನ್ನುತ್ತೇನೆ. ಹೆದರಿಕೆಯಾಗಲು ಈಗ ಕಾರಣವಿದೆ. ಪ್ರಸ್ತುತ ರಾಷ್ಟ್ರದಲ್ಲಿನ ಪರಿಸ್ಥಿತಿಯೇ ಈ ಭೀತಿಗೆ ಕಾರಣ ಎಂದು ನೊಬೆಲ್ ಪುರಸ್ಕೃತ ಡಾ. ಅಮರ್ತ್ಯ ಸೇನ್ ಕಳವಳ ವ್ಯಕ್ತಪಡಿಸಿದ್ದಾರೆ.</p>.<p>ಕೋಲ್ಕತ್ತದ ಸಾಲ್ಟ್ ಲೇಕ್ ಪ್ರದೇಶದಲ್ಲಿ ಅಮರ್ತ್ಯ ಸಂಶೋಧನಾ ಸಂಸ್ಥೆಯ ಉದ್ಘಾಟನೆಗೆ ಆಗಮಿಸಿದ್ದ ಡಾ. ಆಮರ್ತ್ಯ ಸೇನ್ ಅವರು ಮಾತನಾಡುತ್ತ, ರಾಷ್ಟ್ರವು ಧರ್ಮದ ಆಧಾರದಲ್ಲಿ ವಿಭಜನೆಯಾಗಬಾರದು. ಜನರು ಐಕ್ಯಮತದೆಡೆಗೆ ಸಾಗಬೇಕು ಎಂದರು.</p>.<p>ರಾಷ್ಟ್ರವು ಒಗ್ಗಟ್ಟಿನಿಂದ ಇರಬೇಕು ಎಂದು ಬಯಸುತ್ತೇನೆ. ಐತಿಹಾಸಿಕವಾಗಿ ಉದಾರವಾದಿಯಾಗಿರುವ ರಾಷ್ಟ್ರವು ವಿಭಜನೆಗೊಳ್ಳುವುದನ್ನು ನಾನು ನಿರೀಕ್ಷಿಸುವುದಿಲ್ಲ. ನಾವು ಜೊತೆಯಾಗಿ ಕೆಲಸ ಮಾಡಬೇಕು ಎಂದರು.</p>.<p>ಭಾರತವು ಕೇವಲ ಹಿಂದೂ ಅಥವಾ ಮುಸ್ಲಿಮರಿಗೆ ಸೀಮಿತವಾಗಬಾರದು. ಭಾರತ ಕೇವಲ ಹಿಂದೂಗಳ ರಾಷ್ಟ್ರವಾಗುವುದಿಲ್ಲ. ಅದರಂತೆ ಕೇವಲ ಮುಸ್ಲಿಮರಿಂದ ಭಾರತವಾಗುವುದಿಲ್ಲ. ಎಲ್ಲರೂ ಜೊತೆಗೂಡಿ ಮುಂದುವರಿಯಬೇಕು. ಭಾರತೀಯ ಸಂಪ್ರದಾಯವಾಗಿರುವ ಐಕ್ಯತೆ ಮೇಳೈಸಬೇಕು ಎಂದು ಒತ್ತಿ ಹೇಳಿದರು.</p>.<p>1998 ರಲ್ಲಿ ಡಾ.ಅಮರ್ತ್ಯ ಸೇನ್ ಅವರಿಗೆ ಕಲ್ಯಾಣ ಅರ್ಥಶಾಸ್ತ್ರ (Welfare economy)ಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ನೊಬೆಲ್ ಪ್ರಶಸ್ತಿ ಲಭಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>