<p><strong>ನವದೆಹಲಿ:</strong> ವಿಶ್ವದಾದ್ಯಂತ ಗಾಯಕರಿಗೆ ಸ್ಫೂರ್ತಿದಾಯಕವಾಗಿದ್ದ ಕಿಶೋರ್ ಕುಮಾರ್, ಅಲ್ಕಾ ಯಾಗ್ನಿಕ್ ಅವರನ್ನೂ ಈ ಬಾರಿಯೂ ‘ಪದ್ಮ ಪ್ರಶಸ್ತಿ’ ಆಯ್ಕೆ ವೇಳೆ ಪರಿಗಣಿಸದಿರುವುದಕ್ಕೆ ಗಾಯಕ ಸೋನು ನಿಗಮ್ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>‘ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಸಹೋದ್ಯೋಗಿಗಳಾದ ಅಲ್ಕಾ ಯಾಗ್ನಿಕ್, ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್ ಅವರಿಗೂ ಪದ್ಮ ಪ್ರಶಸ್ತಿ ನೀಡಿ ಗೌರವಿಸಬೇಕು’ ಎಂದು ಇನ್ಸ್ಟಾ ಗ್ರಾಂನಲ್ಲಿ ವಿಡಿಯೊ ಹಂಚಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.</p>.<p class="title">‘ಭಾರತ ಹಾಗೂ ಪದ್ಮ ಪ್ರಶಸ್ತಿಗೆ ಬಾಕಿ ಉಳಿದವರು’ ಎಂದು ಶೀರ್ಷಿಕೆ ಅಡಿಯಲ್ಲಿ ಮಾಹಿತಿ ಹಾಕಿರುವ ಅವರು, ‘ವಿಶ್ವದಾದ್ಯಂತ ಸಾಕಷ್ಟು ಗಾಯಕರಿಗೆ ಸ್ಫೂರ್ತಿದಾಯಕರಾಗಿರುವ ಮೊಹಮ್ಮದ್ ರಫಿ ಅವರನ್ನು ‘ಪದ್ಮಶ್ರೀ‘ ಪ್ರಶಸ್ತಿಗಷ್ಟೇ ಸೀಮಿತಗೊಳಿಸಲಾಗಿದೆ. ಕಿಶೋರ್ ಕುಮಾರ್ ಅವರಿಗೆ ಅದೂ ಕೂಡ ಸಿಕ್ಕಿಲ್ಲ. ಅವರನ್ನು ಮರಣೋತ್ತರವಾಗಿ ಈ ಪ್ರಶಸ್ತಿಗೆ ಪರಿಗಣಿಸಬೇಕು’ ಎಂದು ಆಗ್ರಹಿಸಿದ್ದಾರೆ.</p>.<p class="title">ಮೊಹಮ್ಮದ್ ರಫಿ ಅವರಿಗೆ 1967ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. 1987ರಲ್ಲಿ ಕಿಶೋರ್ಕುಮಾರ್ ಮೃತಪಟ್ಟಿದ್ದು, ಇದುವರೆಗೂ ಅವರನ್ನು ಪದ್ಮ ಪ್ರಶಸ್ತಿಗೆ ಪರಿಗಣಿಸಿಲ್ಲ. </p>.<p class="bodytext">2025ರಲ್ಲಿ ಪ್ರಕಟಿಸಲಾದ ಪದ್ಮಪ್ರಶಸ್ತಿಯಲ್ಲಿ ಶಾರದಾ ಸಿನ್ಹಾ, ಪಂಕಜ್ ಉದಾಸ್ ಅವರಿಗೆ ಮರಣೋತ್ತರವಾಗಿ ‘ಪದ್ಮವಿಭೂಷಣ್’ ಹಾಗೂ ‘ಪದ್ಮಭೂಷಣ್’ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಅರ್ಜಿತ್ ಸಿಂಗ್, ಜಸ್ಪೀಂದರ್ ನರುಲಾ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಲಾಗಿದೆ.</p>.<p class="bodytext">ಸೋನು ನಿಗಮ್ ಅವರಿಗೆ 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಿಶ್ವದಾದ್ಯಂತ ಗಾಯಕರಿಗೆ ಸ್ಫೂರ್ತಿದಾಯಕವಾಗಿದ್ದ ಕಿಶೋರ್ ಕುಮಾರ್, ಅಲ್ಕಾ ಯಾಗ್ನಿಕ್ ಅವರನ್ನೂ ಈ ಬಾರಿಯೂ ‘ಪದ್ಮ ಪ್ರಶಸ್ತಿ’ ಆಯ್ಕೆ ವೇಳೆ ಪರಿಗಣಿಸದಿರುವುದಕ್ಕೆ ಗಾಯಕ ಸೋನು ನಿಗಮ್ ಬೇಸರ ವ್ಯಕ್ತಪಡಿಸಿದ್ದಾರೆ.</p>.<p>‘ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಸಹೋದ್ಯೋಗಿಗಳಾದ ಅಲ್ಕಾ ಯಾಗ್ನಿಕ್, ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್ ಅವರಿಗೂ ಪದ್ಮ ಪ್ರಶಸ್ತಿ ನೀಡಿ ಗೌರವಿಸಬೇಕು’ ಎಂದು ಇನ್ಸ್ಟಾ ಗ್ರಾಂನಲ್ಲಿ ವಿಡಿಯೊ ಹಂಚಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.</p>.<p class="title">‘ಭಾರತ ಹಾಗೂ ಪದ್ಮ ಪ್ರಶಸ್ತಿಗೆ ಬಾಕಿ ಉಳಿದವರು’ ಎಂದು ಶೀರ್ಷಿಕೆ ಅಡಿಯಲ್ಲಿ ಮಾಹಿತಿ ಹಾಕಿರುವ ಅವರು, ‘ವಿಶ್ವದಾದ್ಯಂತ ಸಾಕಷ್ಟು ಗಾಯಕರಿಗೆ ಸ್ಫೂರ್ತಿದಾಯಕರಾಗಿರುವ ಮೊಹಮ್ಮದ್ ರಫಿ ಅವರನ್ನು ‘ಪದ್ಮಶ್ರೀ‘ ಪ್ರಶಸ್ತಿಗಷ್ಟೇ ಸೀಮಿತಗೊಳಿಸಲಾಗಿದೆ. ಕಿಶೋರ್ ಕುಮಾರ್ ಅವರಿಗೆ ಅದೂ ಕೂಡ ಸಿಕ್ಕಿಲ್ಲ. ಅವರನ್ನು ಮರಣೋತ್ತರವಾಗಿ ಈ ಪ್ರಶಸ್ತಿಗೆ ಪರಿಗಣಿಸಬೇಕು’ ಎಂದು ಆಗ್ರಹಿಸಿದ್ದಾರೆ.</p>.<p class="title">ಮೊಹಮ್ಮದ್ ರಫಿ ಅವರಿಗೆ 1967ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. 1987ರಲ್ಲಿ ಕಿಶೋರ್ಕುಮಾರ್ ಮೃತಪಟ್ಟಿದ್ದು, ಇದುವರೆಗೂ ಅವರನ್ನು ಪದ್ಮ ಪ್ರಶಸ್ತಿಗೆ ಪರಿಗಣಿಸಿಲ್ಲ. </p>.<p class="bodytext">2025ರಲ್ಲಿ ಪ್ರಕಟಿಸಲಾದ ಪದ್ಮಪ್ರಶಸ್ತಿಯಲ್ಲಿ ಶಾರದಾ ಸಿನ್ಹಾ, ಪಂಕಜ್ ಉದಾಸ್ ಅವರಿಗೆ ಮರಣೋತ್ತರವಾಗಿ ‘ಪದ್ಮವಿಭೂಷಣ್’ ಹಾಗೂ ‘ಪದ್ಮಭೂಷಣ್’ ಪ್ರಶಸ್ತಿಗೆ ಪರಿಗಣಿಸಲಾಗಿದೆ. ಅರ್ಜಿತ್ ಸಿಂಗ್, ಜಸ್ಪೀಂದರ್ ನರುಲಾ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಲಾಗಿದೆ.</p>.<p class="bodytext">ಸೋನು ನಿಗಮ್ ಅವರಿಗೆ 2022ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>