<p><strong>ಅಮರಾವತಿ</strong>: ಬಡತನ ನಿರ್ಮೂಲನೆ ಯೋಜನೆಯಡಿ 250 ಬಡ ಕುಟುಂಬಗಳನ್ನು ವೈಯಕ್ತಿಕವಾಗಿ ದತ್ತು ತೆಗೆದುಕೊಳ್ಳುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶುಕ್ರವಾರ ಹೇಳಿದ್ದಾರೆ. </p><p>ಮಾರ್ಚ್ 30ರಂದು, ನಾಯ್ಡು ಅವರು 'ಪಿ 4 - ಮಾರ್ಗದರ್ಶಿ ಬಂಗಾರು ಕುಟುಂಬಂ' ಯೋಜನೆಗೆ ಚಾಲನೆ ನೀಡಿದ್ದರು.</p><p>ಇದರಡಿ ಬಡಕುಟುಂಬಗಳನ್ನು ಶ್ರೀಮಂತ ಮಾರ್ಗದರ್ಶಕರೊಂದಿಗೆ ಸಂಪರ್ಕಕ್ಕೆ ತರುವ ಮೂಲಕ ಅವರನ್ನು ಬಡತನದಿಂದ ಮೇಲೆತ್ತುವ ಗುರಿಯನ್ನು ಹೊಂದಲಾಗಿದೆ. </p><p>ಪಿ 4 ಯೋಜನೆಯು ಸಮಾಜದ ಅತ್ಯಂತ ಶ್ರೀಮಂತರು ಬಡ ಕುಟುಂಬಗಳನ್ನು ದತ್ತು ಪಡೆದು ಅವರ ಆರ್ಥಿಕ ಸ್ಥಿರತೆಯತ್ತ ಮಾರ್ಗದರ್ಶನ ಮಾಡಲು ಪ್ರೋತ್ಸಾಹಿಸುತ್ತದೆ. ಬಡವರಿಗೆ ನೆರವು ನೀಡಲು ಬದ್ಧರಾಗಿರುವ ಶ್ರೀಮಂತ ಜನರನ್ನು 'ಮಾರ್ಗದರ್ಶಿಗಳು' (ಮಾರ್ಗದರ್ಶಕರು) ಮತ್ತು ಫಲಾನುಭವಿಗಳನ್ನು 'ಬಂಗಾರು ಕುಟುಂಬ' (ಸುವರ್ಣ ಕುಟುಂಬ) ಎಂದು ಗೊತ್ತುಪಡಿಸಲಾಗುತ್ತದೆ. </p><p>ಈ ಯೋಜನೆಯಡಿ ಕುಪ್ಪಂನ 250 ಬಂಗಾರು ಕುಟುಂಬಗಳನ್ನು (ಬಡ ಕುಟುಂಬಗಳು) ದತ್ತು ತೆಗೆದುಕೊಳ್ಳುವುದಾಗ ಸಿಎಂ ನಾಯ್ಡು ಘೋಷಿಸಿದರು ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.</p><p> ಪಿ 4 ಯೋಜನೆಗಾಗಿ ನಾಯ್ಡು ಅವರು ಇಂದು ಲೋಗೊವನ್ನು ಅನಾವರಣಗೊಳಿಸಿದ್ದಾರೆ. ಇದಲ್ಲದೆ, ಪಿ4 ಅಡಿಯಲ್ಲಿ ಬಡ ಕುಟುಂಬಗಳನ್ನು ದತ್ತು ತೆಗೆದುಕೊಳ್ಳುವಲ್ಲಿ ತಮ್ಮ ಕುಟುಂಬ ಸದಸ್ಯರು ಸಹ ತಮ್ಮೊಂದಿಗೆ ಕೈಜೋಡಿಸುತ್ತಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.</p><p>ಪ್ರಪಂಚದಾದ್ಯಂತ ಇರುವ ತೆಲುಗು ವಲಸಿಗರು ಮತ್ತು ಕಾರ್ಪೊರೇಟ್ ಸಂಸ್ಥೆಗಳನ್ನು ಯೋಜನೆಯಡಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆಗಸ್ಟ್ 15 ರೊಳಗೆ 15 ಲಕ್ಷ 'ಬಂಗಾರು ಕುಟುಂಬ'ಗಳನ್ನು ದತ್ತು ಪಡೆಯುವ ಗುರಿಯನ್ನು ನಾಯ್ಡು ಒತ್ತಿ ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಮರಾವತಿ</strong>: ಬಡತನ ನಿರ್ಮೂಲನೆ ಯೋಜನೆಯಡಿ 250 ಬಡ ಕುಟುಂಬಗಳನ್ನು ವೈಯಕ್ತಿಕವಾಗಿ ದತ್ತು ತೆಗೆದುಕೊಳ್ಳುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಶುಕ್ರವಾರ ಹೇಳಿದ್ದಾರೆ. </p><p>ಮಾರ್ಚ್ 30ರಂದು, ನಾಯ್ಡು ಅವರು 'ಪಿ 4 - ಮಾರ್ಗದರ್ಶಿ ಬಂಗಾರು ಕುಟುಂಬಂ' ಯೋಜನೆಗೆ ಚಾಲನೆ ನೀಡಿದ್ದರು.</p><p>ಇದರಡಿ ಬಡಕುಟುಂಬಗಳನ್ನು ಶ್ರೀಮಂತ ಮಾರ್ಗದರ್ಶಕರೊಂದಿಗೆ ಸಂಪರ್ಕಕ್ಕೆ ತರುವ ಮೂಲಕ ಅವರನ್ನು ಬಡತನದಿಂದ ಮೇಲೆತ್ತುವ ಗುರಿಯನ್ನು ಹೊಂದಲಾಗಿದೆ. </p><p>ಪಿ 4 ಯೋಜನೆಯು ಸಮಾಜದ ಅತ್ಯಂತ ಶ್ರೀಮಂತರು ಬಡ ಕುಟುಂಬಗಳನ್ನು ದತ್ತು ಪಡೆದು ಅವರ ಆರ್ಥಿಕ ಸ್ಥಿರತೆಯತ್ತ ಮಾರ್ಗದರ್ಶನ ಮಾಡಲು ಪ್ರೋತ್ಸಾಹಿಸುತ್ತದೆ. ಬಡವರಿಗೆ ನೆರವು ನೀಡಲು ಬದ್ಧರಾಗಿರುವ ಶ್ರೀಮಂತ ಜನರನ್ನು 'ಮಾರ್ಗದರ್ಶಿಗಳು' (ಮಾರ್ಗದರ್ಶಕರು) ಮತ್ತು ಫಲಾನುಭವಿಗಳನ್ನು 'ಬಂಗಾರು ಕುಟುಂಬ' (ಸುವರ್ಣ ಕುಟುಂಬ) ಎಂದು ಗೊತ್ತುಪಡಿಸಲಾಗುತ್ತದೆ. </p><p>ಈ ಯೋಜನೆಯಡಿ ಕುಪ್ಪಂನ 250 ಬಂಗಾರು ಕುಟುಂಬಗಳನ್ನು (ಬಡ ಕುಟುಂಬಗಳು) ದತ್ತು ತೆಗೆದುಕೊಳ್ಳುವುದಾಗ ಸಿಎಂ ನಾಯ್ಡು ಘೋಷಿಸಿದರು ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.</p><p> ಪಿ 4 ಯೋಜನೆಗಾಗಿ ನಾಯ್ಡು ಅವರು ಇಂದು ಲೋಗೊವನ್ನು ಅನಾವರಣಗೊಳಿಸಿದ್ದಾರೆ. ಇದಲ್ಲದೆ, ಪಿ4 ಅಡಿಯಲ್ಲಿ ಬಡ ಕುಟುಂಬಗಳನ್ನು ದತ್ತು ತೆಗೆದುಕೊಳ್ಳುವಲ್ಲಿ ತಮ್ಮ ಕುಟುಂಬ ಸದಸ್ಯರು ಸಹ ತಮ್ಮೊಂದಿಗೆ ಕೈಜೋಡಿಸುತ್ತಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.</p><p>ಪ್ರಪಂಚದಾದ್ಯಂತ ಇರುವ ತೆಲುಗು ವಲಸಿಗರು ಮತ್ತು ಕಾರ್ಪೊರೇಟ್ ಸಂಸ್ಥೆಗಳನ್ನು ಯೋಜನೆಯಡಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆಗಸ್ಟ್ 15 ರೊಳಗೆ 15 ಲಕ್ಷ 'ಬಂಗಾರು ಕುಟುಂಬ'ಗಳನ್ನು ದತ್ತು ಪಡೆಯುವ ಗುರಿಯನ್ನು ನಾಯ್ಡು ಒತ್ತಿ ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>