<p><strong>ಗುವಾಹಟಿ</strong>: ಬೋಡೊ ಮತ್ತು ಆದಿವಾಸಿಗಳ ನಡುವೆ ಘರ್ಷಣೆ ನಡೆದಿರುವ ಅಸ್ಸಾಂನ ಕೊಕ್ರಾಝಾರ್ನ ಸೂಕ್ಷ್ಮಪ್ರದೇಶಗಳಲ್ಲಿ ಸೇನೆಗಳು ಬೀಡುಬಿಟ್ಟಿವೆ.</p><p>ಸಂಘರ್ಷ ಪೀಡಿತ ಕರಿಗ್ರಾಮ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿ ಮಂಗಳವಾರ ರಾತ್ರಿ ಗಸ್ತು ನಡೆಸಿದ್ದಾರೆ. ಬುಧವಾರ ಪಥಸಂಚಲನ ನಡೆಸಲಾಯಿತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.</p><p>ಭಯಭೀತರಾಗಿರುವ ಜನರಿಗಾಗಿ ಸ್ಥಳೀಯ ಶಾಲೆಗಳಲ್ಲಿ ಸಂತ್ರಸ್ತರ ಶಿಬಿರಗಳನ್ನು ಆರಂಭಿಸಲಾಗಿದೆ. ಕೊಕ್ರಾಝಾರ್ ಮತ್ತು ಛಿರಾಂಗ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.</p><p>ಬೋಡೊಗಳಿದ್ದ ವಾಹನವು ಸೋಮವಾರ ರಾತ್ರಿ ಇಬ್ಬರು ಆದಿವಾಸಿಗಳಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಕೆರಳಿದ್ದ ಆದಿವಾಸಿಗಳು ವಾಹನಕ್ಕೆ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದರು. ಉಭಯ ಜನಾಂಗಗಳ ಜನರು ಮಂಗಳವಾರ ಹೆದ್ದಾರಿ ತಡೆ ನಡೆಸಿ, ಕೆಲವು ಮನೆಗಳಿಗೆ, ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚಿದ್ದರು. ಪೊಲೀಸ್ ಠಾಣೆಯ ಮೇಲೆಯೂ ದಾಳಿ ನಡೆಸಿದ್ದರು. </p>.ಸಂತರ ಶಾಂತಿ ನಡಿಗೆಯ 'ನಾಯಿ'ಕ: ಬೀದಿಯಿಂದ ಸೀದಾ ಹೃದಯಕ್ಕೆ ಕಾಲಿಟ್ಟ 'ಅಲೋಕ'.ಆಹಾರ, ಆರೋಗ್ಯಕರ ಪಾನೀಯಗಳ ಸೇವನೆ: ಚಳಿಗಾಲದಲ್ಲಿ ಹೀಗಿರಲಿ ದಿನಚರಿ.ಧನ್ವೀರ್ ನಟನೆಯ ‘ಹಯಗ್ರೀವ‘ ಸಿನಿಮಾದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ.ಭದ್ರಾವತಿ | ಹಣದ ಆಸೆಗೆ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಂದ ವೈದ್ಯ: ಆರೋಪಿ ಬಂಧನ.ಕಲಬುರಗಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ: ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ.ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ: ವರದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ</strong>: ಬೋಡೊ ಮತ್ತು ಆದಿವಾಸಿಗಳ ನಡುವೆ ಘರ್ಷಣೆ ನಡೆದಿರುವ ಅಸ್ಸಾಂನ ಕೊಕ್ರಾಝಾರ್ನ ಸೂಕ್ಷ್ಮಪ್ರದೇಶಗಳಲ್ಲಿ ಸೇನೆಗಳು ಬೀಡುಬಿಟ್ಟಿವೆ.</p><p>ಸಂಘರ್ಷ ಪೀಡಿತ ಕರಿಗ್ರಾಮ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿ ಮಂಗಳವಾರ ರಾತ್ರಿ ಗಸ್ತು ನಡೆಸಿದ್ದಾರೆ. ಬುಧವಾರ ಪಥಸಂಚಲನ ನಡೆಸಲಾಯಿತು ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.</p><p>ಭಯಭೀತರಾಗಿರುವ ಜನರಿಗಾಗಿ ಸ್ಥಳೀಯ ಶಾಲೆಗಳಲ್ಲಿ ಸಂತ್ರಸ್ತರ ಶಿಬಿರಗಳನ್ನು ಆರಂಭಿಸಲಾಗಿದೆ. ಕೊಕ್ರಾಝಾರ್ ಮತ್ತು ಛಿರಾಂಗ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.</p><p>ಬೋಡೊಗಳಿದ್ದ ವಾಹನವು ಸೋಮವಾರ ರಾತ್ರಿ ಇಬ್ಬರು ಆದಿವಾಸಿಗಳಿಗೆ ಡಿಕ್ಕಿ ಹೊಡೆದಿತ್ತು. ಇದರಿಂದ ಕೆರಳಿದ್ದ ಆದಿವಾಸಿಗಳು ವಾಹನಕ್ಕೆ ಬೆಂಕಿ ಹಚ್ಚಿದ್ದರು. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದರು. ಉಭಯ ಜನಾಂಗಗಳ ಜನರು ಮಂಗಳವಾರ ಹೆದ್ದಾರಿ ತಡೆ ನಡೆಸಿ, ಕೆಲವು ಮನೆಗಳಿಗೆ, ಸರ್ಕಾರಿ ಕಚೇರಿಗೆ ಬೆಂಕಿ ಹಚ್ಚಿದ್ದರು. ಪೊಲೀಸ್ ಠಾಣೆಯ ಮೇಲೆಯೂ ದಾಳಿ ನಡೆಸಿದ್ದರು. </p>.ಸಂತರ ಶಾಂತಿ ನಡಿಗೆಯ 'ನಾಯಿ'ಕ: ಬೀದಿಯಿಂದ ಸೀದಾ ಹೃದಯಕ್ಕೆ ಕಾಲಿಟ್ಟ 'ಅಲೋಕ'.ಆಹಾರ, ಆರೋಗ್ಯಕರ ಪಾನೀಯಗಳ ಸೇವನೆ: ಚಳಿಗಾಲದಲ್ಲಿ ಹೀಗಿರಲಿ ದಿನಚರಿ.ಧನ್ವೀರ್ ನಟನೆಯ ‘ಹಯಗ್ರೀವ‘ ಸಿನಿಮಾದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ.ಭದ್ರಾವತಿ | ಹಣದ ಆಸೆಗೆ ದೊಡ್ಡಪ್ಪ-ದೊಡ್ಡಮ್ಮನನ್ನೇ ಕೊಂದ ವೈದ್ಯ: ಆರೋಪಿ ಬಂಧನ.ಕಲಬುರಗಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ: ಹೆಲಿಕಾಪ್ಟರ್ನಿಂದ ಪುಷ್ಪವೃಷ್ಟಿ.ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ: ವರದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>