‘ಘಟನಾ ಸ್ಥಳದಲ್ಲಿದ್ದ ಪೊಲೀಸರು ಮತ್ತು ಕಾರ್ಯಕರ್ತರು ದಾಳಿಗೆ ಯತ್ನಿಸಿದ ಗೂಂಡಾಗಳನ್ನು ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ದರು. ಆದರೆ ಅಲ್ಲಿ ಅವರಿಗೆ ಶಿಕ್ಷೆ ನೀಡುವ ಬದಲು ರಕ್ಷಣೆ ನೀಡಲಾಯಿತು. ಸಚಿವರು ಅವರ ಕೆಲಸ ಮಾಡುತ್ತಾರೆ, ಗೂಂಡಾಗಳು ಕೂಡ ಅವರ ಕೆಲಸ ಮಾಡುತ್ತಾರೆ ಎಂಬ ಉದ್ದಟತನದ ಮಾತು ಡಿವೈಎಸ್ಪಿ ಬಾಯಿಯಿಂದ ಕೇಳಿಬರುತ್ತದೆ. ಕೆಲವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ತಮ್ಮ ಮೇಲೆ ಹಲ್ಲೆ ನಡೆಸಿದ ಮೂವರನ್ನು ನಂತರ ಬಿಡುಗಡೆ ಮಾಡಲಾಯಿತು’ ಎಂದು ಚೌಬೆ ಆಕ್ರೋಶ ವ್ಯಕ್ತಪಡಿಸಿದರು.