<p><strong>ನವದೆಹಲಿ</strong>: ಸಕಾರಣವನ್ನು ಉಲ್ಲೇಖಿಸದೇ ಜಾಮೀನು ಮಂಜೂರು ಮಾಡುವುದು ನಿರಾಸಕ್ತಿಯನ್ನು ತೋರಿಸುತ್ತದೆ. ಜಾಮೀನು ನೀಡುವುದು ವಿವೇಚನಾಧಿಕಾರ ಆಗಿದ್ದರೂ, ಆ ಪ್ರಕ್ರಿಯೆ ನ್ಯಾಯಾಂಗ ಪ್ರಕ್ರಿಯೆಯ ಅನುಸಾರವೇ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದೆ.</p>.<p>ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.</p>.<p>ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ತೀವ್ರವಾದಿ ಸಂಘಟನೆಯ ಸೇರಿದ್ದ ಆರೋಪಿ ಅನಿಲ್ ಗಂಜು ಎಂಬವರಿಗೆ ಜಾರ್ಖಂಡ್ ಹೈಕೋರ್ಟ್ 2023ರ ಏಪ್ರಿಲ್ 26ರಂದು ನೀಡಿದ್ದ ಜಾಮೀನನ್ನು ರದ್ದುಪಡಿಸಿತು.</p>.<p>‘ಜಾಮೀನು ನೀಡುವ ಅಧಿಕಾರ ಸಿಆರ್ಪಿಸಿ ಸೆಕ್ಷನ್ 439ರಲ್ಲಿ ಸ್ಪಷ್ಟವಾಗಿದೆ. ಅದು ಕೋರ್ಟ್ನ ವಿವೇಚನಾಧಿಕಾರ. ಅದನ್ನು ನ್ಯಾಯಾಂಗ ಪ್ರಕ್ರಿಯೆಯಡಿ ಇರಬೇಕು. ಸಹಜ ಕಾರ್ಯವಾಗಿ ಅಲ್ಲ’ ಎಂದು ಕೋರ್ಟ್ ಹೇಳಿತು.</p>.<p>ಜಾಮೀನು ನೀಡಿದ್ದನ್ನು ಜಾರ್ಖಂಡ್ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸಕಾರಣವನ್ನು ಉಲ್ಲೇಖಿಸದೇ ಜಾಮೀನು ಮಂಜೂರು ಮಾಡುವುದು ನಿರಾಸಕ್ತಿಯನ್ನು ತೋರಿಸುತ್ತದೆ. ಜಾಮೀನು ನೀಡುವುದು ವಿವೇಚನಾಧಿಕಾರ ಆಗಿದ್ದರೂ, ಆ ಪ್ರಕ್ರಿಯೆ ನ್ಯಾಯಾಂಗ ಪ್ರಕ್ರಿಯೆಯ ಅನುಸಾರವೇ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದೆ.</p>.<p>ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.</p>.<p>ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ತೀವ್ರವಾದಿ ಸಂಘಟನೆಯ ಸೇರಿದ್ದ ಆರೋಪಿ ಅನಿಲ್ ಗಂಜು ಎಂಬವರಿಗೆ ಜಾರ್ಖಂಡ್ ಹೈಕೋರ್ಟ್ 2023ರ ಏಪ್ರಿಲ್ 26ರಂದು ನೀಡಿದ್ದ ಜಾಮೀನನ್ನು ರದ್ದುಪಡಿಸಿತು.</p>.<p>‘ಜಾಮೀನು ನೀಡುವ ಅಧಿಕಾರ ಸಿಆರ್ಪಿಸಿ ಸೆಕ್ಷನ್ 439ರಲ್ಲಿ ಸ್ಪಷ್ಟವಾಗಿದೆ. ಅದು ಕೋರ್ಟ್ನ ವಿವೇಚನಾಧಿಕಾರ. ಅದನ್ನು ನ್ಯಾಯಾಂಗ ಪ್ರಕ್ರಿಯೆಯಡಿ ಇರಬೇಕು. ಸಹಜ ಕಾರ್ಯವಾಗಿ ಅಲ್ಲ’ ಎಂದು ಕೋರ್ಟ್ ಹೇಳಿತು.</p>.<p>ಜಾಮೀನು ನೀಡಿದ್ದನ್ನು ಜಾರ್ಖಂಡ್ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>