ವಿಜೀಶ್ ಈ ಮೊದಲು ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದರು ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಲೇ ವಿಜೀಶ್ ತಪ್ಪಿಸಿಕೊಂಡಿದ್ದು, ನಂತರ ಕಳೆದ ಭಾನುವಾರ ಪೊಲೀಸರ ತಂಡ ಆತನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸಿ, ಕೇರಳಕ್ಕೆ ಕರೆತರಲಾಗಿದೆ. ಬ್ಯಾಂಕ್ ಖಾತೆಗಳಿಂದ ಎಗರಿಸಿದ ಹಣವನ್ನು ಆನ್ಲೈನ್ ಗೇಮ್ ಮತ್ತು ಷೇರು ವ್ಯವಹಾರದಲ್ಲಿ ಬಳಸಿಕೊಂಡಿರುವುದಾಗಿ ವಿಜೀಶ್ ಪೊಲೀಸರಿಗೆ ತಿಳಿಸಿದ್ದಾನೆ.