<p><strong>ನವದೆಹಲಿ:</strong> ಬಿಹಾರ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷಾ ವರದಿಗಳು ಬುಧವಾರವೂ ಹೊರಬರುತ್ತಿವೆ. ಆ್ಯಕ್ಸಿಸ್ ಮೈ ಇಂಡಿಯಾ, ಟುಡೇಸ್ ಚಾಣಕ್ಯ ಮತ್ತು ಕಾಮಾಕ್ಯ ಅನಾಲಿಟಿಕ್ಸ್ ಸಂಸ್ಥೆಗಳು ತಮ್ಮ ವರದಿಗಳನ್ನು ಬಿಡುಗಡೆ ಮಾಡಿವೆ. ಈ ಸಮೀಕ್ಷೆಗಳ ಪ್ರಕಾರ ಎನ್ಡಿಎ ಮೈತ್ರಿಕೂಟವು ಭಾರಿ ಬಹುಮತ ಪಡೆದುಕೊಳ್ಳಲಿದೆ.</p>.<p>ಆದರೆ, ‘ಆರ್ಜೆಡಿ ಪಕ್ಷವು ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ (67-76). ಎನ್ಡಿಎ ಪಾಳಯವು ಬಹುಮತ ಪಡೆದುಕೊಳ್ಳಲಿದೆಯಾದರೂ ಬಿಜೆಪಿಯು ಕಳೆದ ಬಾರಿಗಿಂತ 18-23 ಸ್ಥಾನ ಕಳೆದುಕೊಳ್ಳಲಿದೆ. ಈ ಮೈತ್ರಿಕೂಟದಲ್ಲಿ ಜೆಡಿಯು ಪಕ್ಷವೇ ಅತಿ ದೊಡ್ಡ ಪಕ್ಷವಾಗಲಿದೆ’ ಎಂದು ಆ್ಯಕ್ಸಿಸ್ ಮೈ ಇಂಡಿಯಾ ಹೇಳಿದೆ.</p>.<p>ಜೊತೆಗೆ, ಆರ್ಜೆಡಿ ಪಕ್ಷದ ತೇಜಸ್ವಿ ಯಾದವ್ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಶೇ 34ರಷ್ಟು ಜನರು ಒಲವು ಹೊಂದಿದ್ದಾರೆ. ನಿತಿಶ್ ಕುಮಾರ್ ಅವರ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಶೇ 22ರಷ್ಟು ಜನರು ಸಹಮತ ವ್ಯಕ್ತಪಡಿಸಿದ್ದಾರೆ ಎಂದೂ ಈ ಸಂಸ್ಥೆ ಹೇಳಿದೆ.</p>.<p><strong>ಸಂಸ್ಥೆ; ಎನ್ಡಿಎ; ‘ಇಂಡಿಯಾ’; ಜನ ಸುರಾಜ್; ಇತರರು</strong></p>.<p>ಆ್ಯಕ್ಸಿಸ್ ಮೈ ಇಂಡಿಯಾ; 121-141; 98-118; 0-2; 0</p>.<p>ಟುಡೇಸ್ ಚಾಣಕ್ಯ; 148-172; 65-89; 0; 3–9</p>.<p>ಕಾಮಾಕ್ಯ ಅನಾಲಿಟಿಕ್ಸ್; 167-187; 54-74; 0–2; 2–7</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬಿಹಾರ ವಿಧಾನಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷಾ ವರದಿಗಳು ಬುಧವಾರವೂ ಹೊರಬರುತ್ತಿವೆ. ಆ್ಯಕ್ಸಿಸ್ ಮೈ ಇಂಡಿಯಾ, ಟುಡೇಸ್ ಚಾಣಕ್ಯ ಮತ್ತು ಕಾಮಾಕ್ಯ ಅನಾಲಿಟಿಕ್ಸ್ ಸಂಸ್ಥೆಗಳು ತಮ್ಮ ವರದಿಗಳನ್ನು ಬಿಡುಗಡೆ ಮಾಡಿವೆ. ಈ ಸಮೀಕ್ಷೆಗಳ ಪ್ರಕಾರ ಎನ್ಡಿಎ ಮೈತ್ರಿಕೂಟವು ಭಾರಿ ಬಹುಮತ ಪಡೆದುಕೊಳ್ಳಲಿದೆ.</p>.<p>ಆದರೆ, ‘ಆರ್ಜೆಡಿ ಪಕ್ಷವು ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ (67-76). ಎನ್ಡಿಎ ಪಾಳಯವು ಬಹುಮತ ಪಡೆದುಕೊಳ್ಳಲಿದೆಯಾದರೂ ಬಿಜೆಪಿಯು ಕಳೆದ ಬಾರಿಗಿಂತ 18-23 ಸ್ಥಾನ ಕಳೆದುಕೊಳ್ಳಲಿದೆ. ಈ ಮೈತ್ರಿಕೂಟದಲ್ಲಿ ಜೆಡಿಯು ಪಕ್ಷವೇ ಅತಿ ದೊಡ್ಡ ಪಕ್ಷವಾಗಲಿದೆ’ ಎಂದು ಆ್ಯಕ್ಸಿಸ್ ಮೈ ಇಂಡಿಯಾ ಹೇಳಿದೆ.</p>.<p>ಜೊತೆಗೆ, ಆರ್ಜೆಡಿ ಪಕ್ಷದ ತೇಜಸ್ವಿ ಯಾದವ್ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಶೇ 34ರಷ್ಟು ಜನರು ಒಲವು ಹೊಂದಿದ್ದಾರೆ. ನಿತಿಶ್ ಕುಮಾರ್ ಅವರ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಶೇ 22ರಷ್ಟು ಜನರು ಸಹಮತ ವ್ಯಕ್ತಪಡಿಸಿದ್ದಾರೆ ಎಂದೂ ಈ ಸಂಸ್ಥೆ ಹೇಳಿದೆ.</p>.<p><strong>ಸಂಸ್ಥೆ; ಎನ್ಡಿಎ; ‘ಇಂಡಿಯಾ’; ಜನ ಸುರಾಜ್; ಇತರರು</strong></p>.<p>ಆ್ಯಕ್ಸಿಸ್ ಮೈ ಇಂಡಿಯಾ; 121-141; 98-118; 0-2; 0</p>.<p>ಟುಡೇಸ್ ಚಾಣಕ್ಯ; 148-172; 65-89; 0; 3–9</p>.<p>ಕಾಮಾಕ್ಯ ಅನಾಲಿಟಿಕ್ಸ್; 167-187; 54-74; 0–2; 2–7</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>