<p><strong>ದರ್ಭಂಗಾ/ಪಟ್ನಾ(ಬಿಹಾರ):</strong> ರಂಜಾನ್ ಅಂಗವಾಗಿ ಮುಸ್ಲಿಮರು ಕೈಗೊಳ್ಳುವ ಪ್ರಾರ್ಥನೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹೋಳಿ ಆಚರಣೆ ವೇಳೆ ಎರಡು ಗಂಟೆ ವಿರಾಮ ನೀಡಬೇಕು ಎಂದು ದರ್ಭಂಗಾ ಮೇಯರ್ ಅಂಜುಮ್ ಆರಾ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. </p>.ಹೋಳಿ | ಅಯೋಧ್ಯೆಯಲ್ಲಿ ಮಧ್ಯಾಹ್ನ 2 ಗಂಟೆ ಬಳಿಕ ಜುಮಾ ನಮಾಜ್ : ಮುಸ್ಲಿಂ ಧರ್ಮಗುರು.<p>ಇತ್ತೀಚೆಗೆ ನಡೆದ ಶಾಂತಿ ಸಭೆಯಲ್ಲಿ ಅಂಜುಮ್ ಆರಾ ಈ ಪ್ರಸ್ತಾವ ಮುಂದಿಟ್ಟಿದ್ದರು. </p><p>ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ್ದ ಅವರು ‘ಶುಕ್ರವಾರ ಮಾಡುವ ನಮಾಜ್ನ ಸಮಯವನ್ನು ಮುಂದೂಡಲಾಗದು. ಹೀಗಾಗಿ ಮಧ್ಯಾಹ್ನ 12ರಿಂದ 2 ರ ವರೆಗೆ ಮಸೀದಿ ಸಮೀಪದ ಪ್ರದೇಶಗಳಲ್ಲಿ ಹೋಳಿ ಆಚರಣೆಗೆ ಹಿಂದೂಗಳು ವಿರಾಮ ನೀಡಬೇಕು ಎಂಬುದಾಗಿ ನಾನು ಮನವಿ ಮಾಡಿದ್ದೆ’ ಎಂದು ಹೇಳಿದ್ದರು. </p><p>ಇದಕ್ಕೆ ಮಧುಬನಿ ಕ್ಷೇತ್ರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ‘ಹೋಳಿ ಆಚರಣೆಯಿಂದ ಸಮಸ್ಯೆ ಆಗುತ್ತದೆ ಎನ್ನುವವರು ಮನೆಯೊಳಗೆ ಇರಲಿ’ ಎಂದು ಮುಸ್ಲಿಮರನ್ನು ಉದ್ಧೇಶಿಸಿ ಠಾಕೂರ್ ಇತ್ತೀಚೆಗೆ ಹೇಳಿದ್ದರು.</p>.ಹೋಳಿ ಮೆರವಣಿಗೆ: ಉ.ಪ್ರದ ಶಹಜಹಾನ್ಪುರದ 20 ಮಸೀದಿಗಳಿಗೆ ಟಾರ್ಪಾಲಿನ್ ಹೊದಿಕೆ.<p>‘ನನ್ನ ಹೇಳಿಕೆ ವಿಚಾರವಾಗಿ ನನ್ನ ವಿರುದ್ಧ ವಾಗ್ದಾಳಿ ನಡೆಸಿದ್ದ ಸ್ವಯಂ ಘೋಷಿತ ಜಾತ್ಯತೀತವಾದಿಗಳು ಈಗ ಎಲ್ಲಿದ್ದಾರೆ? ದರ್ಭಂಗಾ ಮೇಯರ್ ಅಕ್ಷರಶಃ ಗಜ್ವಾ–ಎ–ಹಿಂದ್ಗೆ ಕರೆ ಕೊಟ್ಟಿದ್ದಾರೆ’ ಎಂದು ಠಾಕೂರ್ ಪ್ರತಿಕ್ರಿಯಿಸಿದ್ದಾರೆ. </p>.ಹೋಳಿ ವೇಳೆ ಮುಸ್ಲಿಮರು ಮನೆಯಲ್ಲಿರಲಿ: ಬಿಹಾರದ ಬಿಜೆಪಿ ಶಾಸಕ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದರ್ಭಂಗಾ/ಪಟ್ನಾ(ಬಿಹಾರ):</strong> ರಂಜಾನ್ ಅಂಗವಾಗಿ ಮುಸ್ಲಿಮರು ಕೈಗೊಳ್ಳುವ ಪ್ರಾರ್ಥನೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಹೋಳಿ ಆಚರಣೆ ವೇಳೆ ಎರಡು ಗಂಟೆ ವಿರಾಮ ನೀಡಬೇಕು ಎಂದು ದರ್ಭಂಗಾ ಮೇಯರ್ ಅಂಜುಮ್ ಆರಾ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. </p>.ಹೋಳಿ | ಅಯೋಧ್ಯೆಯಲ್ಲಿ ಮಧ್ಯಾಹ್ನ 2 ಗಂಟೆ ಬಳಿಕ ಜುಮಾ ನಮಾಜ್ : ಮುಸ್ಲಿಂ ಧರ್ಮಗುರು.<p>ಇತ್ತೀಚೆಗೆ ನಡೆದ ಶಾಂತಿ ಸಭೆಯಲ್ಲಿ ಅಂಜುಮ್ ಆರಾ ಈ ಪ್ರಸ್ತಾವ ಮುಂದಿಟ್ಟಿದ್ದರು. </p><p>ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ್ದ ಅವರು ‘ಶುಕ್ರವಾರ ಮಾಡುವ ನಮಾಜ್ನ ಸಮಯವನ್ನು ಮುಂದೂಡಲಾಗದು. ಹೀಗಾಗಿ ಮಧ್ಯಾಹ್ನ 12ರಿಂದ 2 ರ ವರೆಗೆ ಮಸೀದಿ ಸಮೀಪದ ಪ್ರದೇಶಗಳಲ್ಲಿ ಹೋಳಿ ಆಚರಣೆಗೆ ಹಿಂದೂಗಳು ವಿರಾಮ ನೀಡಬೇಕು ಎಂಬುದಾಗಿ ನಾನು ಮನವಿ ಮಾಡಿದ್ದೆ’ ಎಂದು ಹೇಳಿದ್ದರು. </p><p>ಇದಕ್ಕೆ ಮಧುಬನಿ ಕ್ಷೇತ್ರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದರು. ‘ಹೋಳಿ ಆಚರಣೆಯಿಂದ ಸಮಸ್ಯೆ ಆಗುತ್ತದೆ ಎನ್ನುವವರು ಮನೆಯೊಳಗೆ ಇರಲಿ’ ಎಂದು ಮುಸ್ಲಿಮರನ್ನು ಉದ್ಧೇಶಿಸಿ ಠಾಕೂರ್ ಇತ್ತೀಚೆಗೆ ಹೇಳಿದ್ದರು.</p>.ಹೋಳಿ ಮೆರವಣಿಗೆ: ಉ.ಪ್ರದ ಶಹಜಹಾನ್ಪುರದ 20 ಮಸೀದಿಗಳಿಗೆ ಟಾರ್ಪಾಲಿನ್ ಹೊದಿಕೆ.<p>‘ನನ್ನ ಹೇಳಿಕೆ ವಿಚಾರವಾಗಿ ನನ್ನ ವಿರುದ್ಧ ವಾಗ್ದಾಳಿ ನಡೆಸಿದ್ದ ಸ್ವಯಂ ಘೋಷಿತ ಜಾತ್ಯತೀತವಾದಿಗಳು ಈಗ ಎಲ್ಲಿದ್ದಾರೆ? ದರ್ಭಂಗಾ ಮೇಯರ್ ಅಕ್ಷರಶಃ ಗಜ್ವಾ–ಎ–ಹಿಂದ್ಗೆ ಕರೆ ಕೊಟ್ಟಿದ್ದಾರೆ’ ಎಂದು ಠಾಕೂರ್ ಪ್ರತಿಕ್ರಿಯಿಸಿದ್ದಾರೆ. </p>.ಹೋಳಿ ವೇಳೆ ಮುಸ್ಲಿಮರು ಮನೆಯಲ್ಲಿರಲಿ: ಬಿಹಾರದ ಬಿಜೆಪಿ ಶಾಸಕ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>