ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ದೆಹಲಿ ಸೇವಾ ವಿಷಯ: ಸುಗ್ರೀವಾಜ್ಞೆ ಬದಲಿಸುವ ಮಸೂದೆ ಮುಂದಿನ ವಾರ ಮಂಡನೆ

ಲೋಕಸಭೆಯಲ್ಲಿ ಕಾನೂನು ಸಚಿವ ಅರ್ಜುನ್ ಮೆಘವಾಲ್‌ ಹೇಳಿಕೆ
Published : 28 ಜುಲೈ 2023, 12:42 IST
Last Updated : 28 ಜುಲೈ 2023, 12:42 IST
ಫಾಲೋ ಮಾಡಿ
Comments
ಮಸೂದೆಗಳನ್ನು ಸೋಲಿಸಲು ಜೋಶಿ ಸವಾಲು
‘ಲೋಕಸಭೆಯಲ್ಲಿ ಅಗತ್ಯದಷ್ಟು ಸಂಖ್ಯಾಬಲ ಹೊಂದಿರುವ ವಿಶ್ವಾಸವಿದ್ದಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಮಸೂದೆಗಳನ್ನು ಸೋಲಿಸಿ’ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ವಿರೋಧ ಪಕ್ಷಗಳ ಸದಸ್ಯರಿಗೆ ಸವಾಲು ಹಾಕಿದರು. ಅವಿಶ್ವಾಸ ನಿರ್ಣಯ ಕುರಿತ ಸೂಚನೆ ಲೋಕಸಭೆಯಲ್ಲಿ ಚರ್ಚೆಗೆ ಬಾಕಿ ಇರುವಾಗ ಕಲಾಪ ನಡಾವಳಿ ಕೈಗೆತ್ತಿಕೊಳ್ಳುತ್ತಿರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದಾಗ ಜೋಶಿ ಅವರಿಂದ ಈ ತೀಕ್ಷ್ಣ ಪ್ರತಿಕ್ರಿಯೆ ಕಂಡುಬಂತು. ಬಳಿಕ ಸಂಸತ್‌ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ ‘ವಿಪಕ್ಷಗಳು ಏಕಾಏಕಿ ಅವಿಶ್ವಾಸ ನಿರ್ಣಯ ಮಂಡಿಸಿವೆ ಎಂದ ಮಾತ್ರಕ್ಕೆ ಸರ್ಕಾರ ಇತರ ವಿಷಯಗಳನ್ನು ಕೈಗೆತ್ತಿಕೊಳ್ಳಬಾರದು ಎಂದರ್ಥವೇ’ ಎಂದು ಪ್ರಶ್ನಿಸಿದರು. ವಿರೋಧ ಪಕ್ಷಗಳ ಸಂಸದರು ಮಣಿಪುರಕ್ಕೆ ಭೇಟಿ ನೀಡಲು ನಿರ್ಧರಿಸಿರುವ ಕುರಿತ ಪ್ರಶ್ನೆಗೆ ‘ಅವರು ಮಣಿಪುರಕ್ಕೆ ಹೋಗಿ ವರದಿ ಸಿದ್ಧಪಡಿಸಲಿ. ಅವರು ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ಮಣಿಪುರ ಪರಿಸ್ಥಿತಿ ಕುರಿತ ಎಲ್ಲ ವಿಷಯವನ್ನು ಸದನದಲ್ಲಿ ಮಂಡಿಸಲು ನಾವು ಸಿದ್ಧ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT