<p><strong>ಸಾಸರಾಮ್ (ಬಿಹಾರ):</strong> ಬಿಹಾರ ಜನರಿಗೆ ನೀಡಿದ್ದ ವಾಗ್ದಾನವನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಆದರೆ ‘ಇಂಡಿಯಾ’ ಒಕ್ಕೂಟವು ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಈಡೇರಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಹೇಳಿದರು.</p>.<p>ಚೆನಾರಿಯಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಮೋದಿ ಅವರು ಸುಳ್ಳು ಹೇಳಲು ಹಿಂದೆ ಸರಿಯುವುದಿಲ್ಲ. ಅವರ ಸ್ನೇಹಿತ ಅಮಿತ್ ಶಾ ಕೂಡ ಅವರಂತೆಯೇ’ ಎಂದರು.</p>.<p>ಪ್ರತಿ ವರ್ಷ ರೈತರಿಗೆ ₹2 ಕೋಟಿ ನೀಡುವುದಾಗಿ ಮೋದಿ ಅವರು ಹೇಳಿದ್ದರು. ಅವರು ಹಣ ನೀಡಿದರೇ? ಇಲ್ಲ. ಬಡವರಿಗೆ ಒಂದು ಕೋಟಿ ಮನೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಅದನ್ನೂ ಈಡೇರಿಸಲಿಲ್ಲ ಎಂದು ಆರೋಪಿಸಿದರು.</p>.<p>ನೆಹರೂ ಅವರು ಈ ದೇಶಕ್ಕೆ ಎಚ್ಎಂಟಿ, ಬಿಎಚ್ಇಎಲ್ ಮುಂತಾದ ಸಂಸ್ಥೆಗಳನ್ನು ನೀಡಿದ್ದಾರೆ. ಆದರೆ, ಬಿಜೆಪಿಯು ಆರ್ಎಸ್ಎಸ್ ಸೇನಾಪಡೆಯನ್ನು ಸ್ಥಾಪಿಸಿದೆ. ಅದು ಮನುಸ್ಮೃತಿಯ ಆಧಾರದಲ್ಲಿ ದೇಶ ನಡೆಸಲು ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದರು.</p>.<p> <strong>‘ಬಿಹಾರ ಜನರಿಂದ ಎನ್ಡಿಎ ನಿರಾಕರಣೆ’</strong> </p><p>ಬಿಹಾರದ ಆಡಳಿತ ವ್ಯವಸ್ಥೆಯು ‘ರಿಮೋಟ್ ನಿಯಂತ್ರಣ’ದಲ್ಲಿರುವುದು ರಾಜ್ಯ ಜನರಿಗೆ ತಿಳಿದಿದೆ. ಹೀಗಾಗಿ ಅವರು ಎನ್ಡಿಎಯನ್ನು ನಿರಾಕರಿಸಲಿದ್ದಾರೆ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. </p><p> ‘ಬಿಹಾರದಲ್ಲಿ ಅದಾನಿ ಸಮೂಹಕ್ಕೆ ಕೆಂಪು ಹಾಸಿನ ಸ್ವಾಗತ ಲಭಿಸುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆಯಲಿದೆ’ ಎಂದು ಕೆ.ಸಿ ವೇಣುಗೋಪಾಲ್ ಅವರು ‘ಎಕ್ಸ್’ನಲ್ಲಿ ಹೇಳಿದರು. </p><p>‘ಆರ್.ಕೆ.ಸಿಂಗ್ ಅವರು 2017ರಿಂದ 2024ರವರೆಗೆ ಕೇಂದ್ರ ಇಂಧನ ಸಚಿವರಾಗಿದ್ದರು. ಅವರು ಬಿಹಾರದಲ್ಲಿ ನಡೆದ ₹60000 ಕೋಟಿ ಹಗರಣವನ್ನು ಬಯಲಿಗೆಳೆದಿದ್ದಾರೆ. ಪ್ರಧಾನಿ ಅವರು ಬಿಹಾರದಲ್ಲಿ ಅದಾನಿ ಸಮೂಹಕ್ಕೆ ಕೆಂಪು ಹಾಸಿನ ಸ್ವಾಗತ ನೀಡಿದ್ದರಿಂದ ಈ ಹಗರಣ ನಡೆದಿದೆ’ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಸರಾಮ್ (ಬಿಹಾರ):</strong> ಬಿಹಾರ ಜನರಿಗೆ ನೀಡಿದ್ದ ವಾಗ್ದಾನವನ್ನು ಈಡೇರಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಆದರೆ ‘ಇಂಡಿಯಾ’ ಒಕ್ಕೂಟವು ಪ್ರಣಾಳಿಕೆಯ ಎಲ್ಲ ಭರವಸೆಗಳನ್ನು ಈಡೇರಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಹೇಳಿದರು.</p>.<p>ಚೆನಾರಿಯಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ‘ಮೋದಿ ಅವರು ಸುಳ್ಳು ಹೇಳಲು ಹಿಂದೆ ಸರಿಯುವುದಿಲ್ಲ. ಅವರ ಸ್ನೇಹಿತ ಅಮಿತ್ ಶಾ ಕೂಡ ಅವರಂತೆಯೇ’ ಎಂದರು.</p>.<p>ಪ್ರತಿ ವರ್ಷ ರೈತರಿಗೆ ₹2 ಕೋಟಿ ನೀಡುವುದಾಗಿ ಮೋದಿ ಅವರು ಹೇಳಿದ್ದರು. ಅವರು ಹಣ ನೀಡಿದರೇ? ಇಲ್ಲ. ಬಡವರಿಗೆ ಒಂದು ಕೋಟಿ ಮನೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಅದನ್ನೂ ಈಡೇರಿಸಲಿಲ್ಲ ಎಂದು ಆರೋಪಿಸಿದರು.</p>.<p>ನೆಹರೂ ಅವರು ಈ ದೇಶಕ್ಕೆ ಎಚ್ಎಂಟಿ, ಬಿಎಚ್ಇಎಲ್ ಮುಂತಾದ ಸಂಸ್ಥೆಗಳನ್ನು ನೀಡಿದ್ದಾರೆ. ಆದರೆ, ಬಿಜೆಪಿಯು ಆರ್ಎಸ್ಎಸ್ ಸೇನಾಪಡೆಯನ್ನು ಸ್ಥಾಪಿಸಿದೆ. ಅದು ಮನುಸ್ಮೃತಿಯ ಆಧಾರದಲ್ಲಿ ದೇಶ ನಡೆಸಲು ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದರು.</p>.<p> <strong>‘ಬಿಹಾರ ಜನರಿಂದ ಎನ್ಡಿಎ ನಿರಾಕರಣೆ’</strong> </p><p>ಬಿಹಾರದ ಆಡಳಿತ ವ್ಯವಸ್ಥೆಯು ‘ರಿಮೋಟ್ ನಿಯಂತ್ರಣ’ದಲ್ಲಿರುವುದು ರಾಜ್ಯ ಜನರಿಗೆ ತಿಳಿದಿದೆ. ಹೀಗಾಗಿ ಅವರು ಎನ್ಡಿಎಯನ್ನು ನಿರಾಕರಿಸಲಿದ್ದಾರೆ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. </p><p> ‘ಬಿಹಾರದಲ್ಲಿ ಅದಾನಿ ಸಮೂಹಕ್ಕೆ ಕೆಂಪು ಹಾಸಿನ ಸ್ವಾಗತ ಲಭಿಸುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆಯಲಿದೆ’ ಎಂದು ಕೆ.ಸಿ ವೇಣುಗೋಪಾಲ್ ಅವರು ‘ಎಕ್ಸ್’ನಲ್ಲಿ ಹೇಳಿದರು. </p><p>‘ಆರ್.ಕೆ.ಸಿಂಗ್ ಅವರು 2017ರಿಂದ 2024ರವರೆಗೆ ಕೇಂದ್ರ ಇಂಧನ ಸಚಿವರಾಗಿದ್ದರು. ಅವರು ಬಿಹಾರದಲ್ಲಿ ನಡೆದ ₹60000 ಕೋಟಿ ಹಗರಣವನ್ನು ಬಯಲಿಗೆಳೆದಿದ್ದಾರೆ. ಪ್ರಧಾನಿ ಅವರು ಬಿಹಾರದಲ್ಲಿ ಅದಾನಿ ಸಮೂಹಕ್ಕೆ ಕೆಂಪು ಹಾಸಿನ ಸ್ವಾಗತ ನೀಡಿದ್ದರಿಂದ ಈ ಹಗರಣ ನಡೆದಿದೆ’ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>