ನವದೆಹಲಿ: ಆಸ್ತಿ ಮರುಹಂಚಿಕೆ, ಪಿತ್ರಾರ್ಜಿತ ಆಸ್ತಿ ತೆರಿಗೆ ಕುರಿತ ಬಿಜೆಪಿಯ ಉತ್ಪಾದಿತ ಆರೋಪವು ಆ ಪಕ್ಷಕ್ಕೆ ಇರುವ ಆತಂಕವನ್ನು ತೋರುತ್ತಿದೆ. ಅಲ್ಲದೆ, ಸುಳ್ಳು ದೋಷಾರೋಪ ಮಾಡುವ ತಂತ್ರಕ್ಕೆ ಆ ಪಕ್ಷದವರು ಜೋತುಬಿದ್ದಿರುವುದು, ‘ಮೋದಿ ಕಿ ಗ್ಯಾರಂಟಿ’ ಹೇಳ ಹೆಸರಿಲ್ಲದಂತೆ ಆಗಿರುವುದಕ್ಕೂ ಸಾಕ್ಷಿಯಂತೆ ಕಾಣುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರತಿಕ್ರಿಯಿಸಿದರು.