<p><strong>ಕೋಲ್ಕತ್ತ</strong>: ಭಗವದ್ಗೀತೆ ಬೃಹತ್ ಪಠಣ ಕಾರ್ಯಕ್ರಮ ನಡೆಯುತ್ತಿದ್ದ ಮೈದಾನದಲ್ಲಿ ಮಾಂಸದ ಅಂಗಡಿ ಇಟ್ಟಿದ್ದ ವ್ಯಾಪಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಆರೋಪಿಗಳನ್ನು ಪಶ್ಚಿಮ ಬಂಗಾಳ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅಭಿನಂದಿಸಿದ್ದಾರೆ. </p>.<p>‘ನಾನೊಬ್ಬ ಹಿಂದುವಾಗಿ ಅವರ ಜೊತೆ ನಿಲ್ಲುತ್ತೇನೆ’ ಎಂದು ಆರೋಪಿಗಳನ್ನು ಅಭಿನಂಧಿಸಿದ ಭಾವಚಿತ್ರ ಸಮೇತ ಅವರು ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ.</p>.<p>ಡಿಸೆಂಬರ್ 7ರಂದು ಕೋಲ್ಕತ್ತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಕೋಳಿ ಮಾಂಸಾಹಾರದ ಅಂಗಡಿ ಇಟ್ಟಿದ್ದ ಇಬ್ಬರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಬುಧವಾರ ರಾತ್ರಿ ಮೂವರನ್ನು ಬಂಧಿಸಲಾಗಿತ್ತು. ಮೂವರಿಗೂ ಬ್ಯಾಂಕ್ಶಲ್ ನ್ಯಾಯಾಲಯ ಜಾಮೀನು ನೀಡಿತ್ತು.</p>.<p> ‘ನಿಮ್ಮ ನಿಯತ್ತಿನ ಪೊಲೀಸರನ್ನು ಛೂ ಬಿಡುವುದರಿಂದ ಸನಾತನಿಗಳನ್ನು ದಮನ ಮಾಡಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ (ಮುಖ್ಯಮಂತ್ರಿ) ಅವರಿಗೆ ತಿಳಿಸಲು ಬಯಸುತ್ತೇನೆ’ ಎಂದು ಸುವೇಂದು ಹೇಳಿದ್ದಾರೆ.</p>.<p>‘ನಾನು ಶಾಸಕ, ವಿಪಕ್ಷ ನಾಯಕ, ಬಿಜೆಪಿಗ ಏನೇ ಆಗಿರಬಹುದು. ಮೊದಲು ಹಿಂದು. ಧರ್ಮ ರಕ್ಷಣೆಯ ಹೋರಾಟ ನಿಲ್ಲದು. ನಾನು ಹಿಂದು ಪರ ನಿಲ್ಲುವೆ. ನನ್ನವರು ತೊಂದರೆಗೆ ಸಿಲುಕಿದಾಗ ರಕ್ಷಣೆಗೆ ಬರುವೆ. ಭಗವದ್ಗೀತೆ ನಮಗೆ ಇದನ್ನೇ ಕಲಿಸಿದೆ’ ಎಂದಿದ್ದಾರೆ.</p>.<p>‘ಯುವಕರ ಗುಂಪು ನಮ್ಮ ಮಳಿಗೆಗೆ ಬಂದು ಮಾಂಸಾಹಾರ ಮಾರಾಟ ಮಾಡದಂತೆ ಬೆದರಿಸಿತ್ತು. ಕಿವಿ ಹಿಡಿದು ಬಸಿಕೆ ಹೊಡೆಸಿತ್ತು’ ಎಂದು ಇಬ್ಬರು ವ್ಯಾಪಾರಿಗಳು ದೂರಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ಮೈದಾನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಭಗವದ್ಗೀತೆ ಬೃಹತ್ ಪಠಣ ಕಾರ್ಯಕ್ರಮ ನಡೆಯುತ್ತಿದ್ದ ಮೈದಾನದಲ್ಲಿ ಮಾಂಸದ ಅಂಗಡಿ ಇಟ್ಟಿದ್ದ ವ್ಯಾಪಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಆರೋಪಿಗಳನ್ನು ಪಶ್ಚಿಮ ಬಂಗಾಳ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅಭಿನಂದಿಸಿದ್ದಾರೆ. </p>.<p>‘ನಾನೊಬ್ಬ ಹಿಂದುವಾಗಿ ಅವರ ಜೊತೆ ನಿಲ್ಲುತ್ತೇನೆ’ ಎಂದು ಆರೋಪಿಗಳನ್ನು ಅಭಿನಂಧಿಸಿದ ಭಾವಚಿತ್ರ ಸಮೇತ ಅವರು ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ.</p>.<p>ಡಿಸೆಂಬರ್ 7ರಂದು ಕೋಲ್ಕತ್ತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಕೋಳಿ ಮಾಂಸಾಹಾರದ ಅಂಗಡಿ ಇಟ್ಟಿದ್ದ ಇಬ್ಬರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಬುಧವಾರ ರಾತ್ರಿ ಮೂವರನ್ನು ಬಂಧಿಸಲಾಗಿತ್ತು. ಮೂವರಿಗೂ ಬ್ಯಾಂಕ್ಶಲ್ ನ್ಯಾಯಾಲಯ ಜಾಮೀನು ನೀಡಿತ್ತು.</p>.<p> ‘ನಿಮ್ಮ ನಿಯತ್ತಿನ ಪೊಲೀಸರನ್ನು ಛೂ ಬಿಡುವುದರಿಂದ ಸನಾತನಿಗಳನ್ನು ದಮನ ಮಾಡಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ (ಮುಖ್ಯಮಂತ್ರಿ) ಅವರಿಗೆ ತಿಳಿಸಲು ಬಯಸುತ್ತೇನೆ’ ಎಂದು ಸುವೇಂದು ಹೇಳಿದ್ದಾರೆ.</p>.<p>‘ನಾನು ಶಾಸಕ, ವಿಪಕ್ಷ ನಾಯಕ, ಬಿಜೆಪಿಗ ಏನೇ ಆಗಿರಬಹುದು. ಮೊದಲು ಹಿಂದು. ಧರ್ಮ ರಕ್ಷಣೆಯ ಹೋರಾಟ ನಿಲ್ಲದು. ನಾನು ಹಿಂದು ಪರ ನಿಲ್ಲುವೆ. ನನ್ನವರು ತೊಂದರೆಗೆ ಸಿಲುಕಿದಾಗ ರಕ್ಷಣೆಗೆ ಬರುವೆ. ಭಗವದ್ಗೀತೆ ನಮಗೆ ಇದನ್ನೇ ಕಲಿಸಿದೆ’ ಎಂದಿದ್ದಾರೆ.</p>.<p>‘ಯುವಕರ ಗುಂಪು ನಮ್ಮ ಮಳಿಗೆಗೆ ಬಂದು ಮಾಂಸಾಹಾರ ಮಾರಾಟ ಮಾಡದಂತೆ ಬೆದರಿಸಿತ್ತು. ಕಿವಿ ಹಿಡಿದು ಬಸಿಕೆ ಹೊಡೆಸಿತ್ತು’ ಎಂದು ಇಬ್ಬರು ವ್ಯಾಪಾರಿಗಳು ದೂರಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ಮೈದಾನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>