ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳ ನೈಜತೆ, ಹಿನ್ನೆಲೆ, ಉದ್ದೇಶಗಳನ್ನು ಪರಾಮರ್ಶಿಸುವ ಮನೋಭಾವವನ್ನು ಜನರು ಬೆಳಸಿಕೊಳ್ಳಬೇಕು. ಜೀವಕ್ಕೆ ಎರವಾಗುವ ಸಂದೇಶಗಳನ್ನು ಹಂಚಿಕೊಳ್ಳುವ ಮುನ್ನ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಯೋಚಿಸಬೇಕು.ದೇಶದಲ್ಲಿ ಹೆಚ್ಚಾಗುತ್ತಿರುವ ಸಾಮಾಜಿಕ ಜಾಲತಾಣಗಳ ಮೇಲಿನ ಅತಿಯಾದ ಅವಲಂಬನೆ ಪ್ರವೃತ್ತಿಗೆ ಜನರು ಸ್ವಯಂನಿಯಂತ್ರಣ ಹೇರಿಕೊಳ್ಳುವ ಅಗತ್ಯವಿದೆ ಎಂದು ಮಿಶ್ರಾ ಸಲಹೆ ನೀಡಿದ್ದಾರೆ.