<p><strong>ಪಣಜಿ:</strong> ಕೋವಿಡ್–19ನ ಪ್ರಸರಣವನ್ನು ತಡೆಯಲು ಗೋವಾದ ಕೆಲ ಪ್ರದೇಶಗಳಲ್ಲಿ ಜನರು ದೇವರ ಮೊರೆ ಹೋಗಿದ್ದು, ವಿಶೇಷ ಪ್ರಾರ್ಥನೆ, ಮಂತ್ರ ಪಠಣ ಆರಂಭಿಸಿದ್ದಾರೆ.</p>.<p>ಕೆಲ ತಿಂಗಳು ಹಿಂದೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳೇ ವರದಿಯಾಗಿರಲಿಲ್ಲ. ಹೀಗಾಗಿ ರಾಜ್ಯವನ್ನು ಹಸಿರು ವಲಯ ಎಂಬುದಾಗಿಮೇ 1ರಂದು ಘೋಷಿಸಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಜನರು ಸೋಂಕು ಪ್ರಸರಣ ಕಂಡು ಬಂತಲ್ಲದೇ, ಶುಕ್ರವಾರ ಕೋವಿಡ್ ಪ್ರಕರಣಗಳ ಸಂಖ್ಯೆ 5.900 ತಲುಪಿತ್ತು. ಈ ವರೆಗೆ 45 ಜನರು ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.</p>.<p>ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ವತಿಯಿಂದ ದೇವಾಲಯಗಳಲ್ಲಿ ಮಹಾಮೃತ್ಯುಂಜಯ ಮಂತ್ರ ಪಠಣ ಆಯೋಜಿಸಲಾಗಿದೆ. ಕೆಲವೆಡೆ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.</p>.<p>‘ರಾಜ್ಯದ ಪ್ರತಿಯೊಂದು ದೇವಾಲಯದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಲಕ್ಷ ಬಾರಿ ಪಠಿಸಲಾಗುವುದು. ಪೋಂಡಾ ತಾಲ್ಲೂಕಿನ ಧವಳಿ ಗ್ರಾಮದ ವಾಮನೇಶ್ವರ ದೇವಸ್ಥಾನದಲ್ಲಿ ಮಂತ್ರ ಪಠಣಕ್ಕೆ ಚಾಲನೆ ನೀಡಲಾಗಿದೆ’ ಎಂದು ಎಂಜಿಪಿ ಮುಖಂಡ, ಶಾಸಕ ಸುದಿನ್ ಧವಳೀಕರ್ ಹೇಳಿದರು.</p>.<p>‘ಋಗ್ವೇದದಲ್ಲಿ ಮಹಾಮೃತ್ಯುಂಜಯ ಮಂತ್ರದ ಉಲ್ಲೇಖ ಇದೆ. ನಮ್ಮ ಸುತ್ತಲು ಇರುವ ನಕಾರಾತ್ಮಕ ಶಕ್ತಿ ನಿರ್ಮೂಲನೆ ಮಾಡುವ ಶಕ್ತಿ ಈ ಮಂತ್ರಕ್ಕಿದೆ. ಕೋವಿಡ್–19 ಸಹ ಒಂದು ನಕಾರಾತ್ಮಕ ಶಕ್ತಿಯಾಗಿದ್ದು, ಮಾನವ ಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ’ ಎಂದು ಹೇಳಿದರು.</p>.<p>ದಕ್ಷಿಣ ಗೋವಾದ ಸಾಂಗೆಮ್ ತಾಲ್ಲೂಕಿನ ನೇತ್ರಾವಳಿ ಗ್ರಾಮದ ಜನರು ‘ಬೇತಾಳ ಸಾತೇರಿ’ ದೇವಸ್ಥಾನದಲ್ಲಿ ಪ್ರಾರ್ಥನೆ, ವಿಶೇಷ ಪೂಜೆ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಣಜಿ:</strong> ಕೋವಿಡ್–19ನ ಪ್ರಸರಣವನ್ನು ತಡೆಯಲು ಗೋವಾದ ಕೆಲ ಪ್ರದೇಶಗಳಲ್ಲಿ ಜನರು ದೇವರ ಮೊರೆ ಹೋಗಿದ್ದು, ವಿಶೇಷ ಪ್ರಾರ್ಥನೆ, ಮಂತ್ರ ಪಠಣ ಆರಂಭಿಸಿದ್ದಾರೆ.</p>.<p>ಕೆಲ ತಿಂಗಳು ಹಿಂದೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳೇ ವರದಿಯಾಗಿರಲಿಲ್ಲ. ಹೀಗಾಗಿ ರಾಜ್ಯವನ್ನು ಹಸಿರು ವಲಯ ಎಂಬುದಾಗಿಮೇ 1ರಂದು ಘೋಷಿಸಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಜನರು ಸೋಂಕು ಪ್ರಸರಣ ಕಂಡು ಬಂತಲ್ಲದೇ, ಶುಕ್ರವಾರ ಕೋವಿಡ್ ಪ್ರಕರಣಗಳ ಸಂಖ್ಯೆ 5.900 ತಲುಪಿತ್ತು. ಈ ವರೆಗೆ 45 ಜನರು ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.</p>.<p>ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ವತಿಯಿಂದ ದೇವಾಲಯಗಳಲ್ಲಿ ಮಹಾಮೃತ್ಯುಂಜಯ ಮಂತ್ರ ಪಠಣ ಆಯೋಜಿಸಲಾಗಿದೆ. ಕೆಲವೆಡೆ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.</p>.<p>‘ರಾಜ್ಯದ ಪ್ರತಿಯೊಂದು ದೇವಾಲಯದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಲಕ್ಷ ಬಾರಿ ಪಠಿಸಲಾಗುವುದು. ಪೋಂಡಾ ತಾಲ್ಲೂಕಿನ ಧವಳಿ ಗ್ರಾಮದ ವಾಮನೇಶ್ವರ ದೇವಸ್ಥಾನದಲ್ಲಿ ಮಂತ್ರ ಪಠಣಕ್ಕೆ ಚಾಲನೆ ನೀಡಲಾಗಿದೆ’ ಎಂದು ಎಂಜಿಪಿ ಮುಖಂಡ, ಶಾಸಕ ಸುದಿನ್ ಧವಳೀಕರ್ ಹೇಳಿದರು.</p>.<p>‘ಋಗ್ವೇದದಲ್ಲಿ ಮಹಾಮೃತ್ಯುಂಜಯ ಮಂತ್ರದ ಉಲ್ಲೇಖ ಇದೆ. ನಮ್ಮ ಸುತ್ತಲು ಇರುವ ನಕಾರಾತ್ಮಕ ಶಕ್ತಿ ನಿರ್ಮೂಲನೆ ಮಾಡುವ ಶಕ್ತಿ ಈ ಮಂತ್ರಕ್ಕಿದೆ. ಕೋವಿಡ್–19 ಸಹ ಒಂದು ನಕಾರಾತ್ಮಕ ಶಕ್ತಿಯಾಗಿದ್ದು, ಮಾನವ ಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ’ ಎಂದು ಹೇಳಿದರು.</p>.<p>ದಕ್ಷಿಣ ಗೋವಾದ ಸಾಂಗೆಮ್ ತಾಲ್ಲೂಕಿನ ನೇತ್ರಾವಳಿ ಗ್ರಾಮದ ಜನರು ‘ಬೇತಾಳ ಸಾತೇರಿ’ ದೇವಸ್ಥಾನದಲ್ಲಿ ಪ್ರಾರ್ಥನೆ, ವಿಶೇಷ ಪೂಜೆ ಆರಂಭಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>