<p><strong>ರಾಯ್ಪುರ</strong>: ಛತ್ತೀಸಗಢದ ಬಲರಾಂಪುರ ಜಿಲ್ಲೆಯ ಶಿಬಿರವೊಂದರಲ್ಲಿ ಸಶಸ್ತ್ರ ಪಡೆಯ (ಸಿಎಎಫ್) ಸಹೋದ್ಯೋಗಿಯೊಬ್ಬರು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಿಎಎಫ್ ಯೋಧರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.</p><p>ಸಿಎಎಫ್ನ 11ನೇ ಬೆಟಾಲಿಯನ್ನ ಶಿಬಿರದಲ್ಲಿ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. </p>.ಒಂದು ದೇಶ, ಒಂದು ಚುನಾವಣೆ: ವಾಸ್ತವದಲ್ಲಿ ಅಸಾಧ್ಯ; ದಾರಿ ತಪ್ಪಿಸುವ ತಂತ್ರ: ಖರ್ಗೆ.Haryana Assembly Elections: ಕಾಂಗ್ರೆಸ್ ಪ್ರಣಾಳಿಕೆ; ಏಳು ಗ್ಯಾರಂಟಿ ಘೋಷಣೆ. <p>ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾನ್ಸ್ಟೆಬಲ್ ಅಜಯ್ ಸಿದರ್ ರೈಫಲ್ನಿಂದ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p><p>ಕಾನ್ಸ್ಟೆಬಲ್ ರೂಪೇಶ್ ಪಟೇಲ್ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಕಾನ್ಸ್ಟೆಬಲ್ ಸಂದೀಪ್ ಪಾಂಡೆ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ (ಸುರ್ಗುಜಾ ಶ್ರೇಣಿ) ಅಂಕಿತ್ ಗಾರ್ಗ್ ಮಾಹಿತಿ ನೀಡಿದ್ದಾರೆ.</p>.'ಒಂದು ರಾಷ್ಟ್ರ, ಒಂದು ಚುನಾವಣೆ': ಕೋವಿಂದ್ ಸಮಿತಿ ವರದಿ ಅನುಮೋದಿಸಿದ ಮೋದಿ ಸಂಪುಟ.ಮುನಿರತ್ನ ಜಾಮೀನು ಅರ್ಜಿ: ಆದೇಶ ಕಾಯ್ದಿರಿಸಿದ ಕೋರ್ಟ್. <p>ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ಶಬ್ಧ ಕೇಳಿದ ತಕ್ಷಣ ಸ್ಥಳಕ್ಕೆ ಬಂದ ಇತರೆ ಸಿಎಎಫ್ ಯೋಧರು ಆರೋಪಿ ಕಾನ್ಸ್ಟೆಬಲ್ ಅಜಯ್ ಸಿದರ್ ಅವರನ್ನು ಸೆರೆ ಹಿಡಿದರು. ಘಟನೆಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ಜಾರ್ಖಂಡ್ ರಾಜ್ಯದ ಗಡಿ ಭಾಗದ ಸಮೀಪ ಸಿಎಎಫ್ ಪಡೆ ಬೀಡುಬಿಟ್ಟಿದೆ.</p>.ಮೈಸೂರು ದಸರಾ: ಅರಮನೆಗೆ 20 ಸಾವಿರ ಹೊಸ ಬಲ್ಬ್.ನಂದಿ ಬೆಟ್ಟದಲ್ಲಿ ಬ್ರಿಟಿಷ್ ಅಧಿಕಾರಿಗಳ ಮೂಲಕ ಬಂದ ನೀಲಗಿರಿ ಮರಗಳು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯ್ಪುರ</strong>: ಛತ್ತೀಸಗಢದ ಬಲರಾಂಪುರ ಜಿಲ್ಲೆಯ ಶಿಬಿರವೊಂದರಲ್ಲಿ ಸಶಸ್ತ್ರ ಪಡೆಯ (ಸಿಎಎಫ್) ಸಹೋದ್ಯೋಗಿಯೊಬ್ಬರು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಸಿಎಎಫ್ ಯೋಧರು ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.</p><p>ಸಿಎಎಫ್ನ 11ನೇ ಬೆಟಾಲಿಯನ್ನ ಶಿಬಿರದಲ್ಲಿ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. </p>.ಒಂದು ದೇಶ, ಒಂದು ಚುನಾವಣೆ: ವಾಸ್ತವದಲ್ಲಿ ಅಸಾಧ್ಯ; ದಾರಿ ತಪ್ಪಿಸುವ ತಂತ್ರ: ಖರ್ಗೆ.Haryana Assembly Elections: ಕಾಂಗ್ರೆಸ್ ಪ್ರಣಾಳಿಕೆ; ಏಳು ಗ್ಯಾರಂಟಿ ಘೋಷಣೆ. <p>ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾನ್ಸ್ಟೆಬಲ್ ಅಜಯ್ ಸಿದರ್ ರೈಫಲ್ನಿಂದ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p><p>ಕಾನ್ಸ್ಟೆಬಲ್ ರೂಪೇಶ್ ಪಟೇಲ್ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಕಾನ್ಸ್ಟೆಬಲ್ ಸಂದೀಪ್ ಪಾಂಡೆ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮಹಾನಿರೀಕ್ಷಕ (ಸುರ್ಗುಜಾ ಶ್ರೇಣಿ) ಅಂಕಿತ್ ಗಾರ್ಗ್ ಮಾಹಿತಿ ನೀಡಿದ್ದಾರೆ.</p>.'ಒಂದು ರಾಷ್ಟ್ರ, ಒಂದು ಚುನಾವಣೆ': ಕೋವಿಂದ್ ಸಮಿತಿ ವರದಿ ಅನುಮೋದಿಸಿದ ಮೋದಿ ಸಂಪುಟ.ಮುನಿರತ್ನ ಜಾಮೀನು ಅರ್ಜಿ: ಆದೇಶ ಕಾಯ್ದಿರಿಸಿದ ಕೋರ್ಟ್. <p>ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ಶಬ್ಧ ಕೇಳಿದ ತಕ್ಷಣ ಸ್ಥಳಕ್ಕೆ ಬಂದ ಇತರೆ ಸಿಎಎಫ್ ಯೋಧರು ಆರೋಪಿ ಕಾನ್ಸ್ಟೆಬಲ್ ಅಜಯ್ ಸಿದರ್ ಅವರನ್ನು ಸೆರೆ ಹಿಡಿದರು. ಘಟನೆಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ಜಾರ್ಖಂಡ್ ರಾಜ್ಯದ ಗಡಿ ಭಾಗದ ಸಮೀಪ ಸಿಎಎಫ್ ಪಡೆ ಬೀಡುಬಿಟ್ಟಿದೆ.</p>.ಮೈಸೂರು ದಸರಾ: ಅರಮನೆಗೆ 20 ಸಾವಿರ ಹೊಸ ಬಲ್ಬ್.ನಂದಿ ಬೆಟ್ಟದಲ್ಲಿ ಬ್ರಿಟಿಷ್ ಅಧಿಕಾರಿಗಳ ಮೂಲಕ ಬಂದ ನೀಲಗಿರಿ ಮರಗಳು.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>