<p><strong>ದಾಂತೇವಾಡ</strong>: ತಲೆಗೆ ಒಟ್ಟು ₹64 ಲಕ್ಷ ಬಹುಮಾನ ಘೋಷಿಸಲಾಗಿದ್ದ 30 ಮಂದಿ ಸೇರಿ ಒಟ್ಟು 71 ಮಂದಿ ನಕ್ಸಲರು ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ ಬುಧವಾರ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.ಜಾರ್ಖಂಡ್: ಭದ್ರತಾ ಪಡೆ ಜೊತೆಗಿನ ಗುಂಡಿನ ಚಕಮಕಿಯಲ್ಲಿ 3 ನಕ್ಸಲರು ಹತ.<p>ಈ ಪೈಕಿ 21 ಮಹಿಳೆಯರೂ ಇದ್ದು, ಮಾವೋವಾದಿ ಸಿದ್ಧಾಂತದಿಂದ ನಿರಾಶೆಗೊಂಡು ಹಿರಿಯ ಪೊಲೀಸ್ ಹಾಗೂ ಸಿಆರ್ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಹೇಳಿದ್ದಾರೆ.</p><p> ಶರಣಾದವರಲ್ಲಿ 17 ವರ್ಷದ ಬಾಲಕ ಹಾಗೂ 16 ಮತ್ತು 17 ವರ್ಷದ ಇಬ್ಬರು ಬಾಲಕಿಯರೂ ಇದ್ದಾರೆ.</p><p>ಬಾಸ್ತಾರ್ ವಲಯ ಪೊಲೀಸರ ಪುನರ್ವಸತಿ ಅಭಿಯಾನ ಹಾಗೂ ರಾಜ್ಯ ಸರ್ಕಾರದ ಹೊಸ ಶರಣಾಗತಿ ಹಾಗೂ ಪುನರ್ವಸತಿ ನೀತಿಯಿಂದ ಪ್ರೇರಣೆಗೊಂಡು ಶಸ್ತ್ರ ತ್ಯಜಿಸಿದ್ದಾಗಿ ಅವರು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.</p>.ಶಸ್ತ್ರಾಸ್ತ್ರ ಹೋರಾಟಕ್ಕೆ ತಾತ್ಕಾಲಿಕ ವಿರಾಮ, ಶಾಂತಿ ಮಾತುಕತೆಗೆ ಸಿದ್ದ: ನಕ್ಸಲರು.<p>ಶರಣಾದ ಬಮನ್ ಮಡ್ಕಂ (30) ಹಾಗೂ ಮಂಕಿ ಅಲಿಯಾಸ್ ಶಮಿಲಾ ಮಂಡವಿ (20) ಅವರ ತಲೆಗೆ ತಲಾ ₹ 20 ಲಕ್ಷ, ಶಮಿಲಾ ಅಲಿಯಾಸ್ ಸೋಮ್ಲಿ ಕವಾಸಿ (25), ಗಂಗಿ ಅಲಿಯಾಸ್ ಹೋಹಿಣಿ ಬರ್ಸೆ (25), ದೇವಿ ಅಲಿಯಾಸ್ ಕವಿತಾ ಮಡ್ವಿ (25) ಹಾಗೂ ಸಂತೋಷ್ ಮಂಡ್ವಿ (30) ತಲೆಗೆ ತಲಾ ₹ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು.</p><p> ಉಳಿದವರಲ್ಲಿ ಒಬ್ಬರ ತಲೆಗೆ ₹ 3 ಲಕ್ಷ, ಆರು ಮಂದಿಗೆ ತಲಾ ₹ 2 ಲಕ್ಷ, ₹ 9 ಮಂದಿಗೆ ತಲಾ ₹ 1 ಲಕ್ಷ ಹಾಗೂ 6 ಮಂದಿಯ ತಲೆಗೆ ತಲಾ ₹ 50 ಸಾವಿರ ಬಹುಮಾನ ಘೋಷಣೆ ಮಾಡಲಾಗಿತ್ತು. </p>.ಕುಂದಾಪುರ ನ್ಯಾಯಾಲಯಕ್ಕೆ ಶಂಕಿತ ನಕ್ಸಲರು ಹಾಜರು.<p>ಬಮನ್, ಶಮಿಲಾ, ಗಂಗಿ ಹಾಗೂ ದೇವ್ ಮೇಲೆ ಭದ್ರತಾ ಸಿಬ್ಬಂದಿ ಮೇಲೆ ಹಲವು ದಾಳಿಗಳನ್ನು ಮಾಡಿದ ಆರೋಪ ಇದೆ. ಉಳಿದವರು ರಸ್ತೆ ಹಾಳು ಮಾಡುವುದರಲ್ಲಿ, ಮರ ಕಡಿಯುವುದರಲ್ಲಿ, ನಕ್ಸರ್ ಬ್ಯಾನರ್ ಅಳವಡಿಸುವುದರಲ್ಲಿ, ಪೋಸ್ಟರ್ ಹಾಗೂ ಕರಪತ್ರ ಹಂಚುವಲ್ಲಿ ತೊಡಗಿಕೊಂಡಿದ್ದರು.</p><p>2020ರ ಜೂನ್ ಬಳಿಕ ತಲೆಗೆ ಬಹುಮಾನ ಘೋಷಣೆಯಾಗಿದ್ದ 297 ಮಂದಿ ಸೇರಿ ಈವರೆಗೆ 1,113 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.</p> .ಛತ್ತೀಸಗಢ | 28 ಲಕ್ಷ ಇನಾಮು ಘೋಷಣೆಯಾಗಿದ್ದ 9 ಮಂದಿ ಸೇರಿ 12 ನಕ್ಸಲರು ಶರಣಾಗತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಂತೇವಾಡ</strong>: ತಲೆಗೆ ಒಟ್ಟು ₹64 ಲಕ್ಷ ಬಹುಮಾನ ಘೋಷಿಸಲಾಗಿದ್ದ 30 ಮಂದಿ ಸೇರಿ ಒಟ್ಟು 71 ಮಂದಿ ನಕ್ಸಲರು ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ ಬುಧವಾರ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.ಜಾರ್ಖಂಡ್: ಭದ್ರತಾ ಪಡೆ ಜೊತೆಗಿನ ಗುಂಡಿನ ಚಕಮಕಿಯಲ್ಲಿ 3 ನಕ್ಸಲರು ಹತ.<p>ಈ ಪೈಕಿ 21 ಮಹಿಳೆಯರೂ ಇದ್ದು, ಮಾವೋವಾದಿ ಸಿದ್ಧಾಂತದಿಂದ ನಿರಾಶೆಗೊಂಡು ಹಿರಿಯ ಪೊಲೀಸ್ ಹಾಗೂ ಸಿಆರ್ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಹೇಳಿದ್ದಾರೆ.</p><p> ಶರಣಾದವರಲ್ಲಿ 17 ವರ್ಷದ ಬಾಲಕ ಹಾಗೂ 16 ಮತ್ತು 17 ವರ್ಷದ ಇಬ್ಬರು ಬಾಲಕಿಯರೂ ಇದ್ದಾರೆ.</p><p>ಬಾಸ್ತಾರ್ ವಲಯ ಪೊಲೀಸರ ಪುನರ್ವಸತಿ ಅಭಿಯಾನ ಹಾಗೂ ರಾಜ್ಯ ಸರ್ಕಾರದ ಹೊಸ ಶರಣಾಗತಿ ಹಾಗೂ ಪುನರ್ವಸತಿ ನೀತಿಯಿಂದ ಪ್ರೇರಣೆಗೊಂಡು ಶಸ್ತ್ರ ತ್ಯಜಿಸಿದ್ದಾಗಿ ಅವರು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.</p>.ಶಸ್ತ್ರಾಸ್ತ್ರ ಹೋರಾಟಕ್ಕೆ ತಾತ್ಕಾಲಿಕ ವಿರಾಮ, ಶಾಂತಿ ಮಾತುಕತೆಗೆ ಸಿದ್ದ: ನಕ್ಸಲರು.<p>ಶರಣಾದ ಬಮನ್ ಮಡ್ಕಂ (30) ಹಾಗೂ ಮಂಕಿ ಅಲಿಯಾಸ್ ಶಮಿಲಾ ಮಂಡವಿ (20) ಅವರ ತಲೆಗೆ ತಲಾ ₹ 20 ಲಕ್ಷ, ಶಮಿಲಾ ಅಲಿಯಾಸ್ ಸೋಮ್ಲಿ ಕವಾಸಿ (25), ಗಂಗಿ ಅಲಿಯಾಸ್ ಹೋಹಿಣಿ ಬರ್ಸೆ (25), ದೇವಿ ಅಲಿಯಾಸ್ ಕವಿತಾ ಮಡ್ವಿ (25) ಹಾಗೂ ಸಂತೋಷ್ ಮಂಡ್ವಿ (30) ತಲೆಗೆ ತಲಾ ₹ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು.</p><p> ಉಳಿದವರಲ್ಲಿ ಒಬ್ಬರ ತಲೆಗೆ ₹ 3 ಲಕ್ಷ, ಆರು ಮಂದಿಗೆ ತಲಾ ₹ 2 ಲಕ್ಷ, ₹ 9 ಮಂದಿಗೆ ತಲಾ ₹ 1 ಲಕ್ಷ ಹಾಗೂ 6 ಮಂದಿಯ ತಲೆಗೆ ತಲಾ ₹ 50 ಸಾವಿರ ಬಹುಮಾನ ಘೋಷಣೆ ಮಾಡಲಾಗಿತ್ತು. </p>.ಕುಂದಾಪುರ ನ್ಯಾಯಾಲಯಕ್ಕೆ ಶಂಕಿತ ನಕ್ಸಲರು ಹಾಜರು.<p>ಬಮನ್, ಶಮಿಲಾ, ಗಂಗಿ ಹಾಗೂ ದೇವ್ ಮೇಲೆ ಭದ್ರತಾ ಸಿಬ್ಬಂದಿ ಮೇಲೆ ಹಲವು ದಾಳಿಗಳನ್ನು ಮಾಡಿದ ಆರೋಪ ಇದೆ. ಉಳಿದವರು ರಸ್ತೆ ಹಾಳು ಮಾಡುವುದರಲ್ಲಿ, ಮರ ಕಡಿಯುವುದರಲ್ಲಿ, ನಕ್ಸರ್ ಬ್ಯಾನರ್ ಅಳವಡಿಸುವುದರಲ್ಲಿ, ಪೋಸ್ಟರ್ ಹಾಗೂ ಕರಪತ್ರ ಹಂಚುವಲ್ಲಿ ತೊಡಗಿಕೊಂಡಿದ್ದರು.</p><p>2020ರ ಜೂನ್ ಬಳಿಕ ತಲೆಗೆ ಬಹುಮಾನ ಘೋಷಣೆಯಾಗಿದ್ದ 297 ಮಂದಿ ಸೇರಿ ಈವರೆಗೆ 1,113 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.</p> .ಛತ್ತೀಸಗಢ | 28 ಲಕ್ಷ ಇನಾಮು ಘೋಷಣೆಯಾಗಿದ್ದ 9 ಮಂದಿ ಸೇರಿ 12 ನಕ್ಸಲರು ಶರಣಾಗತಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>