ಪಾಟ್ನಾ: ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕಾಗಿ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಶನಿವಾರ ₹ 1.11 ಲಕ್ಷ ದೇಣಿಗೆ ನೀಡಿದ್ದು, ಈ ನಿಟ್ಟಿನಲ್ಲಿ ಮುಂದಾಗುವುದು ಸಮಾಜದ ವಂಚಿತ ವರ್ಗಕ್ಕೆ ಸೇರಿದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಸುದೀರ್ಘ ಕಾಲ ಎನ್ಡಿಎ ಭಾಗವಾಗಿದ್ದ ಎಲ್ಜೆಪಿಯ ಮುಖ್ಯಸ್ಥ ಪಾಸ್ವಾನ್ ಅವರು, ತಮ್ಮನ್ನು ತಾವು ಭಗವಾನ್ ರಾಮನ ಭಕ್ತೆಯಾಗಿದ್ದರು ಎಂದು ನಂಬಲಾಗಿರುವ ಶಬರಿಯ ವಂಶಸ್ಥನೆಂದು ಬಣ್ಣಿಸಿಕೊಂಡಿದ್ದಾರೆ.
ಶಬರಿಯು ಸಮಾಜದ ವಂಚಿತ ಸಮುದಾಯದಿಂದ ಬಂದವರಾಗಿದ್ದರು. ಅವರ ವಂಶಸ್ಥರಾದ ನಾವು ದೇವಾಲಯದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಟ್ವೀಟ್ಗಳಲ್ಲಿ ತಿಳಿಸಿದ್ದಾರೆ.
ಭಗವಾನ್ ಶ್ರೀರಾಮ ಮತ್ತು ಶಬರಿ ನಡುವಿನ ಸಂಬಂಧದಂತಹ ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ದಲಿತರಿಗೆ ವಾತ್ಸಲ್ಯ ಮತ್ತು ಗೌರವ ಬೇಕಾಗಿದೆ ಎಂದು ಅವರು ಹೇಳಿದರು.