<p><strong>ಮುಂಬೈ(ಮಹಾರಾಷ್ಟ್ರ):</strong> ಮುಂದಿನ ವಾರ ನಡೆಯಲಿರುವ ಸಂಪುಟ ಸಭೆಗೆ ಮಹಾಯುತಿ ಸರ್ಕಾರ ₹150 ಕೋಟಿ ವ್ಯಯಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಈ ಆರೋಪವನ್ನು ಸರ್ಕಾರ ತಳ್ಳಿಹಾಕಿದೆ.</p><p>ಇದೇ 29ರಂದು ಅಹಲ್ಯನಗರ ಜಿಲ್ಲೆಯ ಚೋಂಡಿಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯ ಸಿದ್ದತೆಗೆ ಟೆಂಡರ್ ಆಹ್ವಾನಿಸಿದ್ದ ಸರ್ಕಾರ, ಇದಕ್ಕಾಗಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿತ್ತು. </p><p>ಜಾಹೀರಾತಿನಲ್ಲಿ ತಾತಾಲ್ಕಿಕ ವೇದಿಕೆ, ಹಸಿರು ಕೊಠಡಿಗಳು, ಶೌಚಾಲಯ, ಬ್ಯಾರಿಕೇಡ್, ಧ್ವನಿ ಮತ್ತು ಹವಾನಿಯಂತ್ರಣ ವ್ಯವಸ್ಥೆ, ವಿದ್ಯುತ್, ಅಗ್ನಿಶಾಮಕ ದಳ ಮತ್ತು ಸಿಸಿಟಿವಿ ಸೇರಿದಂತೆ ಎಲ್ಲ ರೀತಿಯ ಸಿದ್ದತೆಗೆ ಸುಮಾರು ₹150 ಕೋಟಿ ವ್ಯಯಿಸುವುದಾಗಿ ತಿಳಿಸಿತ್ತು.</p><p>ಈ ಜಾಹೀರಾತನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, ‘ರಾಜ್ಯವು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಹೇಳುವ ಸರ್ಕಾರ ಇದೀಗ ಸಚಿವ ಸಂಪುಟ ಸಭೆಗೆ ₹150 ಕೋಟಿ ವ್ಯರ್ಥ ಮಾಡಲು ಹೊರಟಿದೆ’ ಎಂದು ಕಿಡಿಕಾರಿದ್ದರು.</p>.<p>‘ಹಿರಿಯ ನಾಗರಿಕಗಾಗಿಯೇ ಇದ್ದ ತೀರ್ಥಯಾತ್ರೆ ಯೋಜನೆಯನ್ನು ಸ್ಥಗಿತಗೊಳಿಸಿದ್ದ ಈ ಸರ್ಕಾರ, ಚುನಾವಣೆಯಲ್ಲಿ ಭರವಸೆ ನೀಡಿದಂತೆ ‘ಲಡ್ಕಿ ಬೆಹೆನ್’ ಯೋಜನೆಯಡಿ ಭತ್ಯೆಯನ್ನು ಹೆಚ್ಚಿಸಿಲ್ಲ. ಕೃಷಿ ಸಾಲ ಮನ್ನಾ ಮಾಡಲೂ ನಿರಾಕರಿಸಿದೆ’ ಎಂದು ಹೇಳಿದ್ದಾರೆ.</p><p>‘ಸಚಿವರು, ಶಾಸಕರು, ಅಧಿಕಾರಿಗಳು ಉತ್ತಮ ಸೌಲಭ್ಯಗಳನ್ನು ಅನುಭವಿಸುತ್ತಿದ್ದರೆ, ಸಾಮಾನ್ಯ ಜನರು ಕಷ್ಟ ಪಡುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.</p><p><strong>₹150 ಕೋಟಿ ಅಲ್ಲ ₹1.5 ಕೋಟಿ: ಸರ್ಕಾರ ಸ್ಪಷ್ಟನೆ</strong></p><p>ವಿವಾದದ ಬಗ್ಗೆ ಪ್ರತಿಕ್ರಿಯಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸರ್ಕಾರ, ಪ್ರಸ್ತಾವಿತ ಸಚಿವ ಸಂಪುಟ ಸಭೆಗೆ ₹1.5 ಕೋಟಿಗೆ ಟೆಂಡರ್ ಆಹ್ವಾನಿಸಿ ಜಾಹೀರಾತು ನೀಡಲಾಗಿದ್ದು, ಪತ್ರಿಕೆಯಲ್ಲಿ ₹150 ಕೋಟಿ ಎಂದು ತಪ್ಪಾಗಿ ಮುದ್ರಿತವಾಗಿದೆ’ ಎಂದು ಹೇಳಿದೆ.</p><p>‘ಪುದಾರಿ ಮತ್ತು ಲೋಕಮತ ಎಂಬ ಎರಡು ಪತ್ರಿಕೆಗಳಲ್ಲಿ ಟೆಂಡರ್ ಕುರಿತ ಜಾಹೀರಾತು ಪ್ರಕಟವಾಗಿತ್ತು. ಪುದಾರಿಯಲ್ಲಿ ಸರಿಯಾದ ಮಾಹಿತಿ ಪ್ರಕಟವಾಗಿದ್ದು, ಲೋಕಮತ ಪತ್ರಿಕೆ ಮೊತ್ತವನ್ನು ತಪ್ಪಾಗಿ ಮುದ್ರಿಸಿದೆ’ ರಾಜ್ಯ ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ಸ್ಪಷ್ಟನೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ(ಮಹಾರಾಷ್ಟ್ರ):</strong> ಮುಂದಿನ ವಾರ ನಡೆಯಲಿರುವ ಸಂಪುಟ ಸಭೆಗೆ ಮಹಾಯುತಿ ಸರ್ಕಾರ ₹150 ಕೋಟಿ ವ್ಯಯಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಈ ಆರೋಪವನ್ನು ಸರ್ಕಾರ ತಳ್ಳಿಹಾಕಿದೆ.</p><p>ಇದೇ 29ರಂದು ಅಹಲ್ಯನಗರ ಜಿಲ್ಲೆಯ ಚೋಂಡಿಯಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯ ಸಿದ್ದತೆಗೆ ಟೆಂಡರ್ ಆಹ್ವಾನಿಸಿದ್ದ ಸರ್ಕಾರ, ಇದಕ್ಕಾಗಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿತ್ತು. </p><p>ಜಾಹೀರಾತಿನಲ್ಲಿ ತಾತಾಲ್ಕಿಕ ವೇದಿಕೆ, ಹಸಿರು ಕೊಠಡಿಗಳು, ಶೌಚಾಲಯ, ಬ್ಯಾರಿಕೇಡ್, ಧ್ವನಿ ಮತ್ತು ಹವಾನಿಯಂತ್ರಣ ವ್ಯವಸ್ಥೆ, ವಿದ್ಯುತ್, ಅಗ್ನಿಶಾಮಕ ದಳ ಮತ್ತು ಸಿಸಿಟಿವಿ ಸೇರಿದಂತೆ ಎಲ್ಲ ರೀತಿಯ ಸಿದ್ದತೆಗೆ ಸುಮಾರು ₹150 ಕೋಟಿ ವ್ಯಯಿಸುವುದಾಗಿ ತಿಳಿಸಿತ್ತು.</p><p>ಈ ಜಾಹೀರಾತನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, ‘ರಾಜ್ಯವು ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದು ಹೇಳುವ ಸರ್ಕಾರ ಇದೀಗ ಸಚಿವ ಸಂಪುಟ ಸಭೆಗೆ ₹150 ಕೋಟಿ ವ್ಯರ್ಥ ಮಾಡಲು ಹೊರಟಿದೆ’ ಎಂದು ಕಿಡಿಕಾರಿದ್ದರು.</p>.<p>‘ಹಿರಿಯ ನಾಗರಿಕಗಾಗಿಯೇ ಇದ್ದ ತೀರ್ಥಯಾತ್ರೆ ಯೋಜನೆಯನ್ನು ಸ್ಥಗಿತಗೊಳಿಸಿದ್ದ ಈ ಸರ್ಕಾರ, ಚುನಾವಣೆಯಲ್ಲಿ ಭರವಸೆ ನೀಡಿದಂತೆ ‘ಲಡ್ಕಿ ಬೆಹೆನ್’ ಯೋಜನೆಯಡಿ ಭತ್ಯೆಯನ್ನು ಹೆಚ್ಚಿಸಿಲ್ಲ. ಕೃಷಿ ಸಾಲ ಮನ್ನಾ ಮಾಡಲೂ ನಿರಾಕರಿಸಿದೆ’ ಎಂದು ಹೇಳಿದ್ದಾರೆ.</p><p>‘ಸಚಿವರು, ಶಾಸಕರು, ಅಧಿಕಾರಿಗಳು ಉತ್ತಮ ಸೌಲಭ್ಯಗಳನ್ನು ಅನುಭವಿಸುತ್ತಿದ್ದರೆ, ಸಾಮಾನ್ಯ ಜನರು ಕಷ್ಟ ಪಡುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.</p><p><strong>₹150 ಕೋಟಿ ಅಲ್ಲ ₹1.5 ಕೋಟಿ: ಸರ್ಕಾರ ಸ್ಪಷ್ಟನೆ</strong></p><p>ವಿವಾದದ ಬಗ್ಗೆ ಪ್ರತಿಕ್ರಿಯಿಸಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸರ್ಕಾರ, ಪ್ರಸ್ತಾವಿತ ಸಚಿವ ಸಂಪುಟ ಸಭೆಗೆ ₹1.5 ಕೋಟಿಗೆ ಟೆಂಡರ್ ಆಹ್ವಾನಿಸಿ ಜಾಹೀರಾತು ನೀಡಲಾಗಿದ್ದು, ಪತ್ರಿಕೆಯಲ್ಲಿ ₹150 ಕೋಟಿ ಎಂದು ತಪ್ಪಾಗಿ ಮುದ್ರಿತವಾಗಿದೆ’ ಎಂದು ಹೇಳಿದೆ.</p><p>‘ಪುದಾರಿ ಮತ್ತು ಲೋಕಮತ ಎಂಬ ಎರಡು ಪತ್ರಿಕೆಗಳಲ್ಲಿ ಟೆಂಡರ್ ಕುರಿತ ಜಾಹೀರಾತು ಪ್ರಕಟವಾಗಿತ್ತು. ಪುದಾರಿಯಲ್ಲಿ ಸರಿಯಾದ ಮಾಹಿತಿ ಪ್ರಕಟವಾಗಿದ್ದು, ಲೋಕಮತ ಪತ್ರಿಕೆ ಮೊತ್ತವನ್ನು ತಪ್ಪಾಗಿ ಮುದ್ರಿಸಿದೆ’ ರಾಜ್ಯ ಕಂದಾಯ ಸಚಿವ ಚಂದ್ರಶೇಖರ್ ಬವಾಂಕುಲೆ ಸ್ಪಷ್ಟನೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>