<p><strong>ನವದೆಹಲಿ:</strong> ಸಂಸತ್ತಿನ ಅಧಿವೇಶನದ ಹಾಜರಾತಿಯಿಂದ ಪ್ರಧಾನಿ ಹಾಗೂ ಸಚಿವರಿಗೆ ವಿನಾಯಿತಿ ನೀಡಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.</p><p>ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಲ್ಟಿ ಮೀಡಿಯಾ ಡಿವೈಸ್ (ಬಹು ಮಾಧ್ಯಮ ಸಾಧನ) ಆಧಾರಿತ ಹಾಜರಾತಿ ವ್ಯವಸ್ಥೆ ಪರಿಚಯಿಸುತ್ತಿರುವುದನ್ನು ಟೀಕಿಸಿದೆ.</p><p>ನೂತನ ಹಾಜರಾತಿ ವ್ಯವಸ್ಥೆಯು ‘ದೋಷಪೂರಿತ’ವಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ನ ಸಚೇತಕರಾಗಿರುವ ಮಣಿಕ್ಕಂ ಟ್ಯಾಗೋರ್ ದೂರಿದ್ದಾರೆ. </p><p>ಹೊಸ ಪದ್ಧತಿಯು ಸಂಸದರ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಗುರಿ ಹೊಂದಿರುವಾಗ, ಪ್ರಧಾನಿ ಮತ್ತು ಸಚಿವರಿಗೆ ಏಕೆ ವಿನಾಯಿತಿ ನೀಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.</p><p>ಕೆಲವು ಸಂಸದರು ಹಾಜರಾತಿ ಹಾಕಿ, ಸದನದ ಪ್ರಕ್ರಿಯೆಗಳಲ್ಲಿ ಭಾಗವಹಿಸದೆ ಹೊರಹೋಗುವುದು ಇದೆ ಎಂದಿದ್ದಾರೆ.</p><p>‘ದೋಷಪೂರಿತ ವ್ಯವಸ್ಥೆಯನ್ನು ಏಕೆ ಪುನರಾವರ್ತಿಸಬೇಕು’ ಎಂದು ಎಕ್ಸ್ನಲ್ಲಿ ಪ್ರಶ್ನಿಸಿರುವ ಮಣಿಕ್ಕಂ, ‘ಲೋಕಸಭೆಯನ್ನು ಪ್ರಧಾನಿ ಮುನ್ನಡೆಸಬೇಕಲ್ಲವೇ? ಆದರೆ ಅವರು ಎಷ್ಟು ದಿನ ಭಾಗಿಯಾಗುತ್ತಾರೆ. 18ರಿಂದ 28 ದಿನ ಅಧಿವೇಶನ ನಡೆದರೆ, ಕೇವಲ ಮೂರರಿಂದ ನಾಲ್ಕು ದಿನವಷ್ಟೇ ಭಾಗಿಯಾಗುತ್ತಾರೆ’ ಎಂದು ಉಲ್ಲೇಖಿಸಿದ್ದಾರೆ.</p><p>‘ಹಾಜರಾತಿಯ ಡಿಜಿಟಲೀಕರಿಣದ ಬದಲು ಸುಧಾರಣೆಯ ಅಗತ್ಯವಿದೆ. ಎಲ್ಲರಿಗೂ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕಿದೆ. ಸದನದಲ್ಲಿ ಮಾತನಾಡುವುದು ಹಾಗೂ ಮತದಾನ ಪ್ರಕ್ರಿಯೆಯು ದಾಖಲೆಗಳಾಗಿ ಸ್ವಯಂ ಪ್ರಕಟಣೆಗೊಳ್ಳಬೇಕಿದೆ’ ಎಂದಿದ್ದಾರೆ.</p><p>ಸಮಯ ಉಳಿತಾಯ: ನೂತನ ಹಾಜರಾತಿ ವ್ಯವಸ್ಥೆಯಲ್ಲಿ ಸಂಸದರು ಸಂಸತ್ತಿನ ಮೊಗಸಾಲೆಯಲ್ಲಿ ಸಹಿ ಮಾಡಲು ಬದಲು, ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಕುಳಿತು ಬಹು ಮಾಧ್ಯಮ ಸಾಧನದ ಮೂಲಕ ಪಂಚ್ ಮಾಡಬೇಕಿದೆ.</p><p>ಕೆಲವೊಮ್ಮೆ ಸಂಸದರಿಂದ ಮೊಗಸಾಲೆ ಕಿಕ್ಕಿರಿದು ತುಂಬಿದ್ದಾಗ, ಸಮಯ ಉಳಿಸಲು ಈ ವ್ಯವಸ್ಥೆ ಸಹಾಯ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಸಂಸತ್ತಿನ ಅಧಿವೇಶನದ ಹಾಜರಾತಿಯಿಂದ ಪ್ರಧಾನಿ ಹಾಗೂ ಸಚಿವರಿಗೆ ವಿನಾಯಿತಿ ನೀಡಿರುವುದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.</p><p>ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಲ್ಟಿ ಮೀಡಿಯಾ ಡಿವೈಸ್ (ಬಹು ಮಾಧ್ಯಮ ಸಾಧನ) ಆಧಾರಿತ ಹಾಜರಾತಿ ವ್ಯವಸ್ಥೆ ಪರಿಚಯಿಸುತ್ತಿರುವುದನ್ನು ಟೀಕಿಸಿದೆ.</p><p>ನೂತನ ಹಾಜರಾತಿ ವ್ಯವಸ್ಥೆಯು ‘ದೋಷಪೂರಿತ’ವಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ನ ಸಚೇತಕರಾಗಿರುವ ಮಣಿಕ್ಕಂ ಟ್ಯಾಗೋರ್ ದೂರಿದ್ದಾರೆ. </p><p>ಹೊಸ ಪದ್ಧತಿಯು ಸಂಸದರ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಗುರಿ ಹೊಂದಿರುವಾಗ, ಪ್ರಧಾನಿ ಮತ್ತು ಸಚಿವರಿಗೆ ಏಕೆ ವಿನಾಯಿತಿ ನೀಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.</p><p>ಕೆಲವು ಸಂಸದರು ಹಾಜರಾತಿ ಹಾಕಿ, ಸದನದ ಪ್ರಕ್ರಿಯೆಗಳಲ್ಲಿ ಭಾಗವಹಿಸದೆ ಹೊರಹೋಗುವುದು ಇದೆ ಎಂದಿದ್ದಾರೆ.</p><p>‘ದೋಷಪೂರಿತ ವ್ಯವಸ್ಥೆಯನ್ನು ಏಕೆ ಪುನರಾವರ್ತಿಸಬೇಕು’ ಎಂದು ಎಕ್ಸ್ನಲ್ಲಿ ಪ್ರಶ್ನಿಸಿರುವ ಮಣಿಕ್ಕಂ, ‘ಲೋಕಸಭೆಯನ್ನು ಪ್ರಧಾನಿ ಮುನ್ನಡೆಸಬೇಕಲ್ಲವೇ? ಆದರೆ ಅವರು ಎಷ್ಟು ದಿನ ಭಾಗಿಯಾಗುತ್ತಾರೆ. 18ರಿಂದ 28 ದಿನ ಅಧಿವೇಶನ ನಡೆದರೆ, ಕೇವಲ ಮೂರರಿಂದ ನಾಲ್ಕು ದಿನವಷ್ಟೇ ಭಾಗಿಯಾಗುತ್ತಾರೆ’ ಎಂದು ಉಲ್ಲೇಖಿಸಿದ್ದಾರೆ.</p><p>‘ಹಾಜರಾತಿಯ ಡಿಜಿಟಲೀಕರಿಣದ ಬದಲು ಸುಧಾರಣೆಯ ಅಗತ್ಯವಿದೆ. ಎಲ್ಲರಿಗೂ ಹಾಜರಾತಿಯನ್ನು ಕಡ್ಡಾಯಗೊಳಿಸಬೇಕಿದೆ. ಸದನದಲ್ಲಿ ಮಾತನಾಡುವುದು ಹಾಗೂ ಮತದಾನ ಪ್ರಕ್ರಿಯೆಯು ದಾಖಲೆಗಳಾಗಿ ಸ್ವಯಂ ಪ್ರಕಟಣೆಗೊಳ್ಳಬೇಕಿದೆ’ ಎಂದಿದ್ದಾರೆ.</p><p>ಸಮಯ ಉಳಿತಾಯ: ನೂತನ ಹಾಜರಾತಿ ವ್ಯವಸ್ಥೆಯಲ್ಲಿ ಸಂಸದರು ಸಂಸತ್ತಿನ ಮೊಗಸಾಲೆಯಲ್ಲಿ ಸಹಿ ಮಾಡಲು ಬದಲು, ತಮಗೆ ನಿಗದಿಪಡಿಸಿದ ಸ್ಥಾನದಲ್ಲಿ ಕುಳಿತು ಬಹು ಮಾಧ್ಯಮ ಸಾಧನದ ಮೂಲಕ ಪಂಚ್ ಮಾಡಬೇಕಿದೆ.</p><p>ಕೆಲವೊಮ್ಮೆ ಸಂಸದರಿಂದ ಮೊಗಸಾಲೆ ಕಿಕ್ಕಿರಿದು ತುಂಬಿದ್ದಾಗ, ಸಮಯ ಉಳಿಸಲು ಈ ವ್ಯವಸ್ಥೆ ಸಹಾಯ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>