<p><strong>ಲಖನೌ: </strong>ಕೊರೊನಾ ವೈರಸ್ ಹರಡದಂತೆ ತಡೆಯಲು ಘೋಷಿಸಲಾಗಿರುವ ಲಾಕ್ಡೌನ್ ಆದೇಶ ಉಲ್ಲಂಘಿಸಿ ತಿರುಗಾಡುವವರ ಕಾಲಿಗೆ ಗುಂಡು ಹೊಡೆಯಿರಿ ಎಂದು ಉತ್ತರ ಪ್ರದೇಶದ ಗಾಜಿಯಾಬಾದ್ನ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ಪೊಲೀಸರಿಗೆ ಹೇಳಿದ್ದಾರೆ. ಗುಂಡು ಹೊಡೆಯುವ ಪೊಲೀಸರಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ.</p>.<p>ಆದೇಶ ಉಲ್ಲಂಘಿಸುವವರನ್ನು ‘ದೇಶದ್ರೋಹಿಗಳು’ ಎಂದು ಕರೆದಿರುವ ಅವರು, ಅಂತಹವರ ಕಾಲಿಗೆ ಗುಂಡಿಕ್ಕುವ ಪೊಲೀಸರಿಗೆ ₹ 5,100 ಬಹುಮಾನ ನೀಡುವೆ ಎಂದು ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/technology/viral/video-of-doctors-from-rajasthan-singing-chhodo-kal-ki-baatein-goes-viral-twitter-lauds-the-heroes-715311.html" target="_blank">ಕೊರೊನಾ ಜಾಗೃತಿ: ರಾಜಸ್ಥಾನ ವೈದ್ಯರ ‘ಛೋಡೋ ಕಲ್ಕೀ ಬಾತೇ’ ಹಾಡಿನ ವಿಡಿಯೊ ವೈರಲ್</a></p>.<p>‘ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕವಾಗಿ ಸೇರುತ್ತಿರು ಬಗ್ಗೆ ತಿಳಿದುಬಂದಿದೆ. ಅಂತಹವರ ಜತೆ ಪೊಲೀಸರು ಶಿಸ್ತಿನಿಂದ ವರ್ತಿಸಬೇಕಿದೆ. ಅಗತ್ಯಬಿದ್ದಲ್ಲಿ ಕಾಲಿಗೆ ಗುಂಡಿಕ್ಕುವ ಬಗ್ಗೆಯೂ ಗಮನಿಸಬೇಕಿದೆ’ ಎಂದು ಗುರ್ಜರ್ ಹೇಳಿದ್ದಾರೆ.</p>.<p>ಕೊರೊನಾ ವೈರಸ್ ಗೋಶಾಲೆಗಳನ್ನು ಪ್ರವೇಶಿಸುವುದಿಲ್ಲ ಎಂದು ಗುರ್ಜರ್ ಈ ಹಿಂದೆ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ಗೆ ಗುರಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ: </strong>ಕೊರೊನಾ ವೈರಸ್ ಹರಡದಂತೆ ತಡೆಯಲು ಘೋಷಿಸಲಾಗಿರುವ ಲಾಕ್ಡೌನ್ ಆದೇಶ ಉಲ್ಲಂಘಿಸಿ ತಿರುಗಾಡುವವರ ಕಾಲಿಗೆ ಗುಂಡು ಹೊಡೆಯಿರಿ ಎಂದು ಉತ್ತರ ಪ್ರದೇಶದ ಗಾಜಿಯಾಬಾದ್ನ ಬಿಜೆಪಿ ಶಾಸಕ ನಂದಕಿಶೋರ್ ಗುರ್ಜರ್ ಪೊಲೀಸರಿಗೆ ಹೇಳಿದ್ದಾರೆ. ಗುಂಡು ಹೊಡೆಯುವ ಪೊಲೀಸರಿಗೆ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದಾರೆ.</p>.<p>ಆದೇಶ ಉಲ್ಲಂಘಿಸುವವರನ್ನು ‘ದೇಶದ್ರೋಹಿಗಳು’ ಎಂದು ಕರೆದಿರುವ ಅವರು, ಅಂತಹವರ ಕಾಲಿಗೆ ಗುಂಡಿಕ್ಕುವ ಪೊಲೀಸರಿಗೆ ₹ 5,100 ಬಹುಮಾನ ನೀಡುವೆ ಎಂದು ಹೇಳಿದ್ದಾರೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/technology/viral/video-of-doctors-from-rajasthan-singing-chhodo-kal-ki-baatein-goes-viral-twitter-lauds-the-heroes-715311.html" target="_blank">ಕೊರೊನಾ ಜಾಗೃತಿ: ರಾಜಸ್ಥಾನ ವೈದ್ಯರ ‘ಛೋಡೋ ಕಲ್ಕೀ ಬಾತೇ’ ಹಾಡಿನ ವಿಡಿಯೊ ವೈರಲ್</a></p>.<p>‘ಮುಸ್ಲಿಮರು ಮಸೀದಿಗಳಲ್ಲಿ ಸಾಮೂಹಿಕವಾಗಿ ಸೇರುತ್ತಿರು ಬಗ್ಗೆ ತಿಳಿದುಬಂದಿದೆ. ಅಂತಹವರ ಜತೆ ಪೊಲೀಸರು ಶಿಸ್ತಿನಿಂದ ವರ್ತಿಸಬೇಕಿದೆ. ಅಗತ್ಯಬಿದ್ದಲ್ಲಿ ಕಾಲಿಗೆ ಗುಂಡಿಕ್ಕುವ ಬಗ್ಗೆಯೂ ಗಮನಿಸಬೇಕಿದೆ’ ಎಂದು ಗುರ್ಜರ್ ಹೇಳಿದ್ದಾರೆ.</p>.<p>ಕೊರೊನಾ ವೈರಸ್ ಗೋಶಾಲೆಗಳನ್ನು ಪ್ರವೇಶಿಸುವುದಿಲ್ಲ ಎಂದು ಗುರ್ಜರ್ ಈ ಹಿಂದೆ ನೀಡಿದ್ದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ಗೆ ಗುರಿಯಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>